ETV Bharat / bharat

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಕೇಸ್: ಹೊಸ ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ - Kolkata Rape And Murder Case

author img

By PTI

Published : Sep 9, 2024, 12:54 PM IST

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿರೋಧಿಸಿ ವೈದ್ಯರು ನಡೆಸಿದ ಮುಷ್ಕರದಿಂದಾಗಿ 23 ಮಂದಿ ಸಾವನ್ನಪ್ಪಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದೆ.

kolkata-rape-murder-case-west-bengal-health-department-submits-report-in-sc
ಸುಪ್ರೀಂ ಕೋರ್ಟ್​​ (ETV Bharat)

ನವದೆಹಲಿ: ಕೋಲ್ಕತ್ತಾದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು​ ಮತ್ತು ಆಸ್ಪತ್ರೆಯ ಕಿರಿಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಡೆಸಲಾದ ಪ್ರತಿಭಟನೆಯಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಇಂದು ಸುಪ್ರೀಂ ಕೋರ್ಟ್​​ಗೆ ತಿಳಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್​ ಸಿಬಲ್​, ರಾಜ್ಯ ಆರೋಗ್ಯ ಇಲಾಖೆಯ ಪರಿಸ್ಥಿತಿಯ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮಂಡಿಸಿದರು.

ನ್ಯಾ.ಜೆ.ಪಿ.ಪರ್ದಿವಾಲಾ ಮತ್ತು ನ್ಯಾ.ಮನೋಜ್​ ಮಿಶ್ರಾ ಅವರನ್ನೊಳಗೊಂಡ ಸಿಜೆಐ ಚಂದ್ರಚೂಡ್​ ನೇತೃತ್ವದ ಪೀಠದ ಮುಂದೆ ವರದಿ ಮಂಡಿಸಿದ ಕಪಿಲ್​ ಸಿಬಲ್​, ಆರೋಗ್ಯ ಇಲಾಖೆಯ ವರದಿಯನ್ನು ಮಂಡಿಸಲಾಗಿದೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಹೊಸ ತನಿಖಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ: ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಿದೆ. ಆದರೆ, ಹೊಸ ವರದಿ ಸಲ್ಲಿಸುವಂತೆ ನಾವು ಸಿಬಿಐಗೆ ನಿರ್ದೇಶಿಸುತ್ತೇವೆ. ಸಿಬಿಐ ತನಿಖೆ ಸಂಬಂಧ ನಾವು ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಆದರೆ ಹೊಸ ವರದಿಯನ್ನು ಸೆಪ್ಟೆಂಬರ್​ 17ರೊಳಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ಸಿಬಿಐ ಪರವಾಗಿ ಪೀಠದ ಮುಂದೆ ಹಾಜರಾಗಿದ್ದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, "ನಮ್ಮ ಬಳಿ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಇದೆ. ಸಂತ್ರಸ್ತೆ ಅರೆಬೆತ್ತಲೆ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ನಾವು ಒಪ್ಪುತ್ತೇವೆ. ಆಕೆಯ ದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ರಾಜ್ಯದ ಅಧಿಕಾರಿಗಳು ಘಟನಾ ಸ್ಥಳದ ಮಾದರಿಗಳನ್ನು ಪಶ್ಚಿಮ ಬಂಗಾಳದ ಸೆಂಟ್ರಲ್​ ಫಾರೆನ್ಸಿಕ್​ ಲ್ಯಾಬ್​​ಗೆ ಕಳುಹಿಸಿದ್ದಾರೆ. ಇದೀಗ ಸಿಬಿಐ ಈ ಮಾದರಿಯನ್ನು ದೆಹಲಿಯ ಏಮ್ಸ್​​ಗೆ ಕಳುಹಿಸಲು ನಿರ್ಧರಿಸಿದೆ" ಎಂದು ತಿಳಿಸಿದರು.

ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಳಂಬಿಸಿದ್ದಾರೆ ಎಂದು ಆಗಸ್ಟ್​ 22ರಂದು ಸುಪ್ರೀಂ ಕೋರ್ಟ್​ ಕಿಡಿಕಾರಿತ್ತು. ಇದನ್ನು ತೀವ್ರ ಗೊಂದಲಕಾರಿ ನಡೆ ಎಂದಿತ್ತು. ಅಲ್ಲದೇ, ಪ್ರಕರಣದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್​ 10 ಸದಸ್ಯರ ನ್ಯಾಷನಲ್​ ಟಾಸ್ಕ್​ ಫೋರ್ಸ್​ (ಎನ್​ಟಿಎಫ್​) ರಚಿಸಿ, ಇತರೆ ಆರೋಗ್ಯ ವೃತ್ತಿಪರರು ಹಾಗೂ ವೈದ್ಯರ ಸುರಕ್ಷೆ ಮತ್ತು ರಕ್ಷಣೆ ಭರವಸೆಗೆ ಪ್ರೋಟೋಕಾಲ್​ ರೂಪಿಸಿತ್ತು.

ಕೋಲ್ಕತ್ತಾ ಘಟನೆಯನ್ನು ಭಯಾನಕ ಎಂದ ಸುಪ್ರೀಂ, ಈ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿತ್ತು. ಅಲ್ಲದೇ ಈ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ಒಪ್ಪಿಸುವಂತೆ ಸೂಚಿಸಿತ್ತು. ಆಗಸ್ಟ್​ 14ರಿಂದ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಅತ್ಯಾಚಾರ ವಿರೋಧಿ ಮಸೂದೆಯ ಜೊತೆಗೆ ತಾಂತ್ರಿಕ ವರದಿ ಕಳುಹಿಸಿಲ್ಲ: ಸಿಎಂ ಮಮತಾ ವಿರುದ್ದ ರಾಜ್ಯಪಾಲ ಕಿಡಿ

ನವದೆಹಲಿ: ಕೋಲ್ಕತ್ತಾದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು​ ಮತ್ತು ಆಸ್ಪತ್ರೆಯ ಕಿರಿಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಡೆಸಲಾದ ಪ್ರತಿಭಟನೆಯಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಇಂದು ಸುಪ್ರೀಂ ಕೋರ್ಟ್​​ಗೆ ತಿಳಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್​ ಸಿಬಲ್​, ರಾಜ್ಯ ಆರೋಗ್ಯ ಇಲಾಖೆಯ ಪರಿಸ್ಥಿತಿಯ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮಂಡಿಸಿದರು.

ನ್ಯಾ.ಜೆ.ಪಿ.ಪರ್ದಿವಾಲಾ ಮತ್ತು ನ್ಯಾ.ಮನೋಜ್​ ಮಿಶ್ರಾ ಅವರನ್ನೊಳಗೊಂಡ ಸಿಜೆಐ ಚಂದ್ರಚೂಡ್​ ನೇತೃತ್ವದ ಪೀಠದ ಮುಂದೆ ವರದಿ ಮಂಡಿಸಿದ ಕಪಿಲ್​ ಸಿಬಲ್​, ಆರೋಗ್ಯ ಇಲಾಖೆಯ ವರದಿಯನ್ನು ಮಂಡಿಸಲಾಗಿದೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಹೊಸ ತನಿಖಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ: ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಿದೆ. ಆದರೆ, ಹೊಸ ವರದಿ ಸಲ್ಲಿಸುವಂತೆ ನಾವು ಸಿಬಿಐಗೆ ನಿರ್ದೇಶಿಸುತ್ತೇವೆ. ಸಿಬಿಐ ತನಿಖೆ ಸಂಬಂಧ ನಾವು ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಆದರೆ ಹೊಸ ವರದಿಯನ್ನು ಸೆಪ್ಟೆಂಬರ್​ 17ರೊಳಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ಸಿಬಿಐ ಪರವಾಗಿ ಪೀಠದ ಮುಂದೆ ಹಾಜರಾಗಿದ್ದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, "ನಮ್ಮ ಬಳಿ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಇದೆ. ಸಂತ್ರಸ್ತೆ ಅರೆಬೆತ್ತಲೆ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ನಾವು ಒಪ್ಪುತ್ತೇವೆ. ಆಕೆಯ ದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ರಾಜ್ಯದ ಅಧಿಕಾರಿಗಳು ಘಟನಾ ಸ್ಥಳದ ಮಾದರಿಗಳನ್ನು ಪಶ್ಚಿಮ ಬಂಗಾಳದ ಸೆಂಟ್ರಲ್​ ಫಾರೆನ್ಸಿಕ್​ ಲ್ಯಾಬ್​​ಗೆ ಕಳುಹಿಸಿದ್ದಾರೆ. ಇದೀಗ ಸಿಬಿಐ ಈ ಮಾದರಿಯನ್ನು ದೆಹಲಿಯ ಏಮ್ಸ್​​ಗೆ ಕಳುಹಿಸಲು ನಿರ್ಧರಿಸಿದೆ" ಎಂದು ತಿಳಿಸಿದರು.

ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಳಂಬಿಸಿದ್ದಾರೆ ಎಂದು ಆಗಸ್ಟ್​ 22ರಂದು ಸುಪ್ರೀಂ ಕೋರ್ಟ್​ ಕಿಡಿಕಾರಿತ್ತು. ಇದನ್ನು ತೀವ್ರ ಗೊಂದಲಕಾರಿ ನಡೆ ಎಂದಿತ್ತು. ಅಲ್ಲದೇ, ಪ್ರಕರಣದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್​ 10 ಸದಸ್ಯರ ನ್ಯಾಷನಲ್​ ಟಾಸ್ಕ್​ ಫೋರ್ಸ್​ (ಎನ್​ಟಿಎಫ್​) ರಚಿಸಿ, ಇತರೆ ಆರೋಗ್ಯ ವೃತ್ತಿಪರರು ಹಾಗೂ ವೈದ್ಯರ ಸುರಕ್ಷೆ ಮತ್ತು ರಕ್ಷಣೆ ಭರವಸೆಗೆ ಪ್ರೋಟೋಕಾಲ್​ ರೂಪಿಸಿತ್ತು.

ಕೋಲ್ಕತ್ತಾ ಘಟನೆಯನ್ನು ಭಯಾನಕ ಎಂದ ಸುಪ್ರೀಂ, ಈ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿತ್ತು. ಅಲ್ಲದೇ ಈ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ಒಪ್ಪಿಸುವಂತೆ ಸೂಚಿಸಿತ್ತು. ಆಗಸ್ಟ್​ 14ರಿಂದ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಅತ್ಯಾಚಾರ ವಿರೋಧಿ ಮಸೂದೆಯ ಜೊತೆಗೆ ತಾಂತ್ರಿಕ ವರದಿ ಕಳುಹಿಸಿಲ್ಲ: ಸಿಎಂ ಮಮತಾ ವಿರುದ್ದ ರಾಜ್ಯಪಾಲ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.