ETV Bharat / bharat

ಪುರಿ: ರಥದಿಂದ ಕೆಳಗಿಳಿಸುವಾಗ ಜಾರಿದ ದೇವರ ವಿಗ್ರಹ, 9 ಸೇವಕರಿಗೆ ಗಾಯ - Puri Rath Yatra Mishap

author img

By PTI

Published : Jul 10, 2024, 1:30 PM IST

ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಲಭದ್ರ ದೇವರ ವಿಗ್ರಹವು ಕೆಳಗಿಳಿಸಿ ಕೊಂಡೊಯ್ಯುವಾಗ ನಿಯಂತ್ರಣ ತಪ್ಪಿಸಿ ಸೇವಕರ ಮೇಲೆ ಬಿದ್ದ ಘಟನೆ ಮಂಗಳವಾರ ನಡೆದಿದೆ.

ಪುರಿ: ರಥದಿಂದ ಕೆಳಗೆ ಇಳಿಸುವಾಗ ಬಲಭದ್ರ ದೇವರ ವಿಗ್ರಹ ಜಾರಿ ಬಿತ್ತು.
ರಥದಿಂದ ವಿಗ್ರಹ ಕೆಳಗಿಳಿಸುವಾಗ ಅವಘಡ (ETV Bharat)

ಭುವನೇಶ್ವರ್(ಒಡಿಶಾ): ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ನಿಮಿತ್ತದ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಮೂರ್ತಿ ಕೆಳಗಿಳಿಸುವಾಗ ಅವಘಡ ಸಂಭವಿಸಿದೆ. ಬಲಭದ್ರ ದೇವರ ವಿಗ್ರಹ ಸೇವಕರ ಮೇಲೆ ಬಿದ್ದಿದೆ. ಇದರಿಂದ ಒಂಬತ್ತು ಜನರು ಗಾಯಗೊಂಡಿದ್ದಾರೆ.

ಜುಲೈ 7ರಂದು ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರರ ವೈಭವದ ರಥಯಾತ್ರೆ ಜರುಗಿತ್ತು. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಬಲಭದ್ರ ದೇವರ ರಥದಿಂದ ಗುಂಡಿಚಾ ದೇವಸ್ಥಾನಕ್ಕೆ ದೇವರ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾಗ ಜಾರಿ ಸೇವಕರ ಮೇಲೆ ಬಿದ್ದಿದೆ. ಈ ಪೈಕಿ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.

ಸಂಪೂರ್ಣ ವಿವರ: ದೇವರ ಮೂರ್ತಿ ಕೆಳಗಿಳಿಸುವಾಗ ಕಾರ್ಯವನ್ನು 'ಪಹಂಡಿ' ಆಚರಣೆ ಎಂದು ಕರೆಯಲಾಗುತ್ತದೆ. ಎಲ್ಲ ಮೂರು ದೇವರ ವಿಗ್ರಹಗಳನ್ನು ಅವರ ಜನ್ಮಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ, ಬಲಭದ್ರರ ಭಾರವಾದ ಮರದ ವಿಗ್ರಹವನ್ನು ಕೆಳಗಿಳಿಸುವಾಗ ಆ ಮೂರ್ತಿ ಹೊತ್ತಿದ್ದವರು ನಿಯಂತ್ರಣ ಕಳೆದುಕೊಂಡರು. ವಿಗ್ರಹಕ್ಕೆ ಕಟ್ಟಿದ್ದ ಹಗ್ಗದಂತಹ ವಸ್ತುವಿನಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ಗಾಯಗೊಂಡ ಸೇವಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜುಲೈ 14ರಂದು ಪುರಿ ಜಗನ್ನಾಥ 'ರತ್ನ ಭಂಡಾರ'ದ ಬೀಗ ತೆರೆಯುವ ಸಾಧ್ಯತೆ

ಈ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ಪುರಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಕೂಡ ಪುರಿಗೆ ತೆರಳಿ, ಹರಿಚಂದನ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸೇವಕರನ್ನು ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಚಂದನ್, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದಾರೆ. ಧಾರ್ಮಿಕ ಕ್ರಿಯೆಗಳು ಮುಂದುವರೆದಿವೆ. ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು. ಜುಲೈ 15ರಂದು ಜಗನ್ನಾಥ ದೇವಸ್ಥಾನಕ್ಕೆ ಹಿಂದಿರುಗುವವರೆಗೆ ದೇವರ ವಿಗ್ರಹಗಳನ್ನು ಗುಂಡಿಚಾ ದೇವಸ್ಥಾನದಲ್ಲಿ ಇರಿಸಲಾಗುತ್ತದೆ.

ರಥ ಯಾತ್ರೆಯಲ್ಲಿ ಭಕ್ತ ಸಾವು: ಭಾನುವಾರ ಬಿಗಿ ಬಂದೋಬಸ್ತ್​ ನಡುವೆಯೂ ರಥ ಯಾತ್ರೆಯಲ್ಲಿ ಅಹಿತಕರ ಘಟನೆಯೊಂದು ನಡೆದಿತ್ತು. ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿ ಉಸಿರುಗಟ್ಟುವಿಕೆಯಿಂದ ಭಕ್ತರೊಬ್ಬರು ಮೃತಪಟ್ಟಿದ್ದರು. ಹಲವು ಭಕ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ವೈಭವದಿಂದ ಜರುಗಿದ ಪುರಿ ಜಗನ್ನಾಥ ರಥಯಾತ್ರೆ; ತೇರು ಎಳೆದ ರಾಷ್ಟ್ರಪತಿ ಮುರ್ಮು

ಭುವನೇಶ್ವರ್(ಒಡಿಶಾ): ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ನಿಮಿತ್ತದ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಮೂರ್ತಿ ಕೆಳಗಿಳಿಸುವಾಗ ಅವಘಡ ಸಂಭವಿಸಿದೆ. ಬಲಭದ್ರ ದೇವರ ವಿಗ್ರಹ ಸೇವಕರ ಮೇಲೆ ಬಿದ್ದಿದೆ. ಇದರಿಂದ ಒಂಬತ್ತು ಜನರು ಗಾಯಗೊಂಡಿದ್ದಾರೆ.

ಜುಲೈ 7ರಂದು ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರರ ವೈಭವದ ರಥಯಾತ್ರೆ ಜರುಗಿತ್ತು. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಬಲಭದ್ರ ದೇವರ ರಥದಿಂದ ಗುಂಡಿಚಾ ದೇವಸ್ಥಾನಕ್ಕೆ ದೇವರ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾಗ ಜಾರಿ ಸೇವಕರ ಮೇಲೆ ಬಿದ್ದಿದೆ. ಈ ಪೈಕಿ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.

ಸಂಪೂರ್ಣ ವಿವರ: ದೇವರ ಮೂರ್ತಿ ಕೆಳಗಿಳಿಸುವಾಗ ಕಾರ್ಯವನ್ನು 'ಪಹಂಡಿ' ಆಚರಣೆ ಎಂದು ಕರೆಯಲಾಗುತ್ತದೆ. ಎಲ್ಲ ಮೂರು ದೇವರ ವಿಗ್ರಹಗಳನ್ನು ಅವರ ಜನ್ಮಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ, ಬಲಭದ್ರರ ಭಾರವಾದ ಮರದ ವಿಗ್ರಹವನ್ನು ಕೆಳಗಿಳಿಸುವಾಗ ಆ ಮೂರ್ತಿ ಹೊತ್ತಿದ್ದವರು ನಿಯಂತ್ರಣ ಕಳೆದುಕೊಂಡರು. ವಿಗ್ರಹಕ್ಕೆ ಕಟ್ಟಿದ್ದ ಹಗ್ಗದಂತಹ ವಸ್ತುವಿನಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ಗಾಯಗೊಂಡ ಸೇವಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜುಲೈ 14ರಂದು ಪುರಿ ಜಗನ್ನಾಥ 'ರತ್ನ ಭಂಡಾರ'ದ ಬೀಗ ತೆರೆಯುವ ಸಾಧ್ಯತೆ

ಈ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ಪುರಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಕೂಡ ಪುರಿಗೆ ತೆರಳಿ, ಹರಿಚಂದನ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸೇವಕರನ್ನು ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಚಂದನ್, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದಾರೆ. ಧಾರ್ಮಿಕ ಕ್ರಿಯೆಗಳು ಮುಂದುವರೆದಿವೆ. ಮುಂದಿನ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು. ಜುಲೈ 15ರಂದು ಜಗನ್ನಾಥ ದೇವಸ್ಥಾನಕ್ಕೆ ಹಿಂದಿರುಗುವವರೆಗೆ ದೇವರ ವಿಗ್ರಹಗಳನ್ನು ಗುಂಡಿಚಾ ದೇವಸ್ಥಾನದಲ್ಲಿ ಇರಿಸಲಾಗುತ್ತದೆ.

ರಥ ಯಾತ್ರೆಯಲ್ಲಿ ಭಕ್ತ ಸಾವು: ಭಾನುವಾರ ಬಿಗಿ ಬಂದೋಬಸ್ತ್​ ನಡುವೆಯೂ ರಥ ಯಾತ್ರೆಯಲ್ಲಿ ಅಹಿತಕರ ಘಟನೆಯೊಂದು ನಡೆದಿತ್ತು. ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿ ಉಸಿರುಗಟ್ಟುವಿಕೆಯಿಂದ ಭಕ್ತರೊಬ್ಬರು ಮೃತಪಟ್ಟಿದ್ದರು. ಹಲವು ಭಕ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ವೈಭವದಿಂದ ಜರುಗಿದ ಪುರಿ ಜಗನ್ನಾಥ ರಥಯಾತ್ರೆ; ತೇರು ಎಳೆದ ರಾಷ್ಟ್ರಪತಿ ಮುರ್ಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.