ETV Bharat / bharat

ಉತ್ತರ ಪ್ರದೇಶದಲ್ಲಿ ಮುಂದುವರಿದ ತೋಳಗಳ ದಾಳಿ: ಬಿಹಾರದಲ್ಲೂ ಹೆಚ್ಚಿದ ಉಪಟಳ - wolf attack in UP

author img

By PTI

Published : Sep 3, 2024, 3:41 PM IST

ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿ ಬೆನ್ನಲ್ಲೇ ಬಿಹಾರದ ಗಯಾ ಜಿಲ್ಲೆಯಲ್ಲೂ ಅನೇಕ ಜನರ ಮೇಲೆ ತೋಳವೊಂದು ದಾಳಿ ಮಾಡಿದೆ.

five-year-old-girl-injured-in-yet-another-wolf-attack-in-up
ಉತ್ತರ ಪ್ರದೇಶದಲ್ಲಿ ಮುಂದುವರೆದ ತೋಳ ದಾಳಿ; ಬಿಹಾರದಲ್ಲೂ ಹೆಚ್ಚಿದ ಉಪಟಳ (ANI)

ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್​ ಜಿಲ್ಲೆಯಲ್ಲಿಯ ಮಹಸಿ ತಹಶೀಲ್​​ನಲ್ಲಿ ತೋಳಗಳ ದಾಳಿ ಮುಂದುವರೆದಿದ್ದು, ಸೋಮವಾರ ರಾತ್ರಿ ಐದು ವರ್ಷದ ಬಾಲಕಿ ತೋಳದ ದಾಳಿಯಿಂದ ಗಾಯಗೊಂಡಿದ್ದಾಳೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸ್ಥಳೀಯರ ಪ್ರಕಾರ, ಪಂದೊಯಿಯಾ ಗ್ರಾಮದಲ್ಲಿ ಮನೆಯಲ್ಲಿ ಬಾಲಕಿ ಅಫ್ಸಾನಾ ಮಲಗಿದ್ದಾಗ ಆಕೆ ಮೇಲೆ ತೋಳ ದಾಳಿ ಮಾಡಿದ್ದು, ಕುತ್ತಿಗೆಯಲ್ಲಿ ತೋಳದ ಹಲ್ಲಿನ ಗುರುತುಗಳನ್ನು ಕಾಣಬಹುದಾಗಿದೆ. ಬಾಲಕಿಯನ್ನು ತಕ್ಷಣಕ್ಕೆ ಮಹಸಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸರ್ಕಾರದ ನಾನಾ ಇಲಾಖೆಗಳು ಮನವಿ ಮಾಡಿಕೊಂಡಿವೆ. ಇನ್ನು ಮಹಸಿಯ ಬಿಜೆಪಿ ಶಾಸಕ ಸುರೇಶ್ವರ್​ ಸಿಂಗ್ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಹುಷಾರಾಗಿರುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿಯಿಂದಾಗಿ ಏಳು ಮಕ್ಕಳು ಸೇರಿದಂತೆ 8 ಜನ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೋಳದ ಸೆರೆಗೆ ಅರಣ್ಯ ಇಲಾಖೆ ವಿವಿಧ ಕ್ರಮಕ್ಕೆ ಮುಂದಾಗಿದ್ದರೂ, ತೋಳ ಸೆರೆಹಿಡಿಯುವಲ್ಲಿ ವಿಫಲವಾಗಿದೆ.

ಇಲ್ಲಿನ ಸಮೀಪದ ಸೀತಾಪುರ್​ ಜಿಲ್ಲೆಯಲ್ಲಿ ಪ್ರಾಣಿ ದಾಳಿಯ ವರದಿಯಾಗಿದೆ. ರಾಮ್​ಪುರ್​, ಪಿಲಿಭಿಟ್​ ಜಿಲ್ಲೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೋಳಗಳ ದಾಳಿ ವರದಿಯಾಗಿದ್ದು, ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆ ಗುಸ್ತು ತೀವ್ರಗೊಳಿಸುವಂತೆ ಮತ್ತು ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಮಾನವಶಕ್ತಿ ನಿಯೋಜಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

ಸರ್ಕಾರ ಜನರ ಜೀವ ರಕ್ಷಣೆ ಮಾಡಲು ಬದ್ಧವಾಗಿದೆ ಎಂದಿರುವ ಅವರು, ವನ್ಯಜೀವಿ ಸೂಕ್ಷ್ಮ ವಲಯದಲ್ಲಿ ಅಗತ್ಯ ಸುರಕ್ಷಾ ಭದ್ರತಾ ಕ್ರಮ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸಾಧ್ಯವಾದಷ್ಟ ಬೇಗ ಪರಿಸ್ಥಿತಿ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿ ಸೂಚನೆ ಕೂಡಾ ನೀಡಿದ್ದಾರೆ. ಇದೇ ವೇಳೆ, ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ವನ್ಯ ಜೀವಿಗಳ ನಿಯಂತ್ರಣ ಮತ್ತು ಸೆರೆಗೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.

ಈ ಘಟನೆಗಳ ಸಂಬಂಧ ಮುಖ್ಯಮಂತ್ರಿಗಳು, ಅರಣ್ಯ ಸಚಿವ ಅರುಣ್​ ಕುಮಾರ್​ ಅವರ ಜತೆ ಚರ್ಚಿಸಿದ್ದು, ಪರಿಸ್ಥಿತಿಯ ವಿವರಣೆ ಕೂಡಾ ಪಡೆದುಕೊಂಡಿದ್ದಾರೆ. ಪ್ರಾಣಿಗಳ ದಾಳಿ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಕಾರ್ಯವನ್ನು ಹೆಚ್ಚಿಸುವಂತೆ ಸಿಎಂ ಸೂಚಿಸಿದ್ದು, ಬಿಜ್ನೋರ್​, ಪಿಲಿಭಿಟ್​, ಲಖೀಂಪುರ್​​, ಸೀತಾಪುರ್​, ಬಹ್ರೈನ್​ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಬಿಹಾರದಲ್ಲೂ ತೋಳದ ದಾಳಿ: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿ ಬೆನ್ನಲ್ಲೇ ಬಿಹಾರದ ಗಾಯಾ ಜಿಲ್ಲೆಯಲ್ಲಿ ಅನೇಕ ಜನರ ಮೇಲೆ ತೋಳವೊಂದಿ ದಾಳಿ ಮಾಡಿದೆ. ತೋಳದ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ತೋಳವನ್ನು ಕೊಂದು ಹಾಕಿದ್ದು, ಅರಣ್ಯಾಧಿಕಾರಿಗಳು ಪ್ರಾಣಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಗಾಯಾದ ಖಿಜ್ರಸರೈನ ಮಕ್ಸುಡ್ಪುರ್​​ ಪ್ರದೇಶದಲ್ಲಿ ಆಗ್ಗಾಗ್ಗೆ ತೋಳದ ದಾಳಿಗಳು ವರದಿಯಾಗುತ್ತಿವೆ. ಅರಣ್ಯಕ್ಕೆ ಅಂಟಿಕೊಂಡಿರುವ ಈ ಪ್ರದೇಶದಲ್ಲಿ ಜನ ವಸತಿ ಪ್ರದೇಶಲ್ಲಿ ಆಗ್ಗಾಗ್ಗೆ ವನ್ಯಜೀವಿಗಳು ಕಾಣಿಸಿಕೊಳ್ಳುತ್ತವೆ. ಗ್ರಾಮಸ್ಥರ ಸಮ್ಮುಖದಲ್ಲಿಯೇ ಮಹಿಳೆಯೊಬ್ಬರ ಮೇಲೆ ದಾಳಿ ಆಗಿದ್ದು, ಗ್ರಾಮಸ್ಥರ ನೆರವಿನಿಂದ ಅದೃಷ್ಟವಶಾತ್​ ಆಕೆ ಜೀವ ಉಳಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ತೋಳದ ಪತ್ತೆಗೆ ಅರಣ್ಯ ಇಲಾಖೆ ಶೋಧ ಆರಂಭಿಸಿದಾಗ ಗ್ರಾಮಸ್ಥರು ತೋಳವನ್ನು ಕೊಂದಿದ್ದಾರೆ. ಇದಾದ ಬಳಿಕ ಅರಣ್ಯ ಇಲಾಖೆ ವನ್ಯ ಜೀವಿ ಹಿಡಿಯಲು ಬೋನ್​ನಲ್ಲಿ ಮಾಂಸ ಇಟ್ಟು ಕಾದಿದ್ದಾರೆ. ಆದರೆ, ಯಾವುದೇ ಪ್ರಾಣಿ ಸೆರೆಯಾಗಿಲ್ಲ. ಇದು ಇಲ್ಲಿನ ಜನರಲ್ಲಿ ಆತಂಕ ಮತ್ತು ಭಯವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಗ್ರಾಮದಲ್ಲಿ ದಾಳಿ ನಡೆಸುತ್ತಿರುವುದು ತೋಳವಲ್ಲ. ನರಿಗಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಗಾಯಾ ಡಿಎಫ್​ಒ, ಪ್ರಾಣಿಯ ಕಚ್ಚಿದರಿಂದ ಆಗುವ ಗುರುತಿನ ಮೇಲೆಗೆ ಅದು ತೋಳದ ದಾಳಿಯೇ ಅಥವಾ ನರಿ ದಾಳಿಯೇ ಎಂಬ ಕುರಿತು ವೈದ್ಯಕೀಯ ತಂಡದಿಂದ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಉತ್ತಮ ಮುಂಗಾರು: ಭತ್ತ, ಧಾನ್ಯ, ಕಬ್ಬು ಬಿತ್ತನೆ ಪ್ರಮಾಣ ಹೆಚ್ಚಳ

ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್​ ಜಿಲ್ಲೆಯಲ್ಲಿಯ ಮಹಸಿ ತಹಶೀಲ್​​ನಲ್ಲಿ ತೋಳಗಳ ದಾಳಿ ಮುಂದುವರೆದಿದ್ದು, ಸೋಮವಾರ ರಾತ್ರಿ ಐದು ವರ್ಷದ ಬಾಲಕಿ ತೋಳದ ದಾಳಿಯಿಂದ ಗಾಯಗೊಂಡಿದ್ದಾಳೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸ್ಥಳೀಯರ ಪ್ರಕಾರ, ಪಂದೊಯಿಯಾ ಗ್ರಾಮದಲ್ಲಿ ಮನೆಯಲ್ಲಿ ಬಾಲಕಿ ಅಫ್ಸಾನಾ ಮಲಗಿದ್ದಾಗ ಆಕೆ ಮೇಲೆ ತೋಳ ದಾಳಿ ಮಾಡಿದ್ದು, ಕುತ್ತಿಗೆಯಲ್ಲಿ ತೋಳದ ಹಲ್ಲಿನ ಗುರುತುಗಳನ್ನು ಕಾಣಬಹುದಾಗಿದೆ. ಬಾಲಕಿಯನ್ನು ತಕ್ಷಣಕ್ಕೆ ಮಹಸಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸರ್ಕಾರದ ನಾನಾ ಇಲಾಖೆಗಳು ಮನವಿ ಮಾಡಿಕೊಂಡಿವೆ. ಇನ್ನು ಮಹಸಿಯ ಬಿಜೆಪಿ ಶಾಸಕ ಸುರೇಶ್ವರ್​ ಸಿಂಗ್ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಹುಷಾರಾಗಿರುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿಯಿಂದಾಗಿ ಏಳು ಮಕ್ಕಳು ಸೇರಿದಂತೆ 8 ಜನ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೋಳದ ಸೆರೆಗೆ ಅರಣ್ಯ ಇಲಾಖೆ ವಿವಿಧ ಕ್ರಮಕ್ಕೆ ಮುಂದಾಗಿದ್ದರೂ, ತೋಳ ಸೆರೆಹಿಡಿಯುವಲ್ಲಿ ವಿಫಲವಾಗಿದೆ.

ಇಲ್ಲಿನ ಸಮೀಪದ ಸೀತಾಪುರ್​ ಜಿಲ್ಲೆಯಲ್ಲಿ ಪ್ರಾಣಿ ದಾಳಿಯ ವರದಿಯಾಗಿದೆ. ರಾಮ್​ಪುರ್​, ಪಿಲಿಭಿಟ್​ ಜಿಲ್ಲೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೋಳಗಳ ದಾಳಿ ವರದಿಯಾಗಿದ್ದು, ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆ ಗುಸ್ತು ತೀವ್ರಗೊಳಿಸುವಂತೆ ಮತ್ತು ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಮಾನವಶಕ್ತಿ ನಿಯೋಜಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

ಸರ್ಕಾರ ಜನರ ಜೀವ ರಕ್ಷಣೆ ಮಾಡಲು ಬದ್ಧವಾಗಿದೆ ಎಂದಿರುವ ಅವರು, ವನ್ಯಜೀವಿ ಸೂಕ್ಷ್ಮ ವಲಯದಲ್ಲಿ ಅಗತ್ಯ ಸುರಕ್ಷಾ ಭದ್ರತಾ ಕ್ರಮ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸಾಧ್ಯವಾದಷ್ಟ ಬೇಗ ಪರಿಸ್ಥಿತಿ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿ ಸೂಚನೆ ಕೂಡಾ ನೀಡಿದ್ದಾರೆ. ಇದೇ ವೇಳೆ, ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ವನ್ಯ ಜೀವಿಗಳ ನಿಯಂತ್ರಣ ಮತ್ತು ಸೆರೆಗೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.

ಈ ಘಟನೆಗಳ ಸಂಬಂಧ ಮುಖ್ಯಮಂತ್ರಿಗಳು, ಅರಣ್ಯ ಸಚಿವ ಅರುಣ್​ ಕುಮಾರ್​ ಅವರ ಜತೆ ಚರ್ಚಿಸಿದ್ದು, ಪರಿಸ್ಥಿತಿಯ ವಿವರಣೆ ಕೂಡಾ ಪಡೆದುಕೊಂಡಿದ್ದಾರೆ. ಪ್ರಾಣಿಗಳ ದಾಳಿ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಕಾರ್ಯವನ್ನು ಹೆಚ್ಚಿಸುವಂತೆ ಸಿಎಂ ಸೂಚಿಸಿದ್ದು, ಬಿಜ್ನೋರ್​, ಪಿಲಿಭಿಟ್​, ಲಖೀಂಪುರ್​​, ಸೀತಾಪುರ್​, ಬಹ್ರೈನ್​ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಬಿಹಾರದಲ್ಲೂ ತೋಳದ ದಾಳಿ: ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿ ಬೆನ್ನಲ್ಲೇ ಬಿಹಾರದ ಗಾಯಾ ಜಿಲ್ಲೆಯಲ್ಲಿ ಅನೇಕ ಜನರ ಮೇಲೆ ತೋಳವೊಂದಿ ದಾಳಿ ಮಾಡಿದೆ. ತೋಳದ ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು ತೋಳವನ್ನು ಕೊಂದು ಹಾಕಿದ್ದು, ಅರಣ್ಯಾಧಿಕಾರಿಗಳು ಪ್ರಾಣಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಗಾಯಾದ ಖಿಜ್ರಸರೈನ ಮಕ್ಸುಡ್ಪುರ್​​ ಪ್ರದೇಶದಲ್ಲಿ ಆಗ್ಗಾಗ್ಗೆ ತೋಳದ ದಾಳಿಗಳು ವರದಿಯಾಗುತ್ತಿವೆ. ಅರಣ್ಯಕ್ಕೆ ಅಂಟಿಕೊಂಡಿರುವ ಈ ಪ್ರದೇಶದಲ್ಲಿ ಜನ ವಸತಿ ಪ್ರದೇಶಲ್ಲಿ ಆಗ್ಗಾಗ್ಗೆ ವನ್ಯಜೀವಿಗಳು ಕಾಣಿಸಿಕೊಳ್ಳುತ್ತವೆ. ಗ್ರಾಮಸ್ಥರ ಸಮ್ಮುಖದಲ್ಲಿಯೇ ಮಹಿಳೆಯೊಬ್ಬರ ಮೇಲೆ ದಾಳಿ ಆಗಿದ್ದು, ಗ್ರಾಮಸ್ಥರ ನೆರವಿನಿಂದ ಅದೃಷ್ಟವಶಾತ್​ ಆಕೆ ಜೀವ ಉಳಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ತೋಳದ ಪತ್ತೆಗೆ ಅರಣ್ಯ ಇಲಾಖೆ ಶೋಧ ಆರಂಭಿಸಿದಾಗ ಗ್ರಾಮಸ್ಥರು ತೋಳವನ್ನು ಕೊಂದಿದ್ದಾರೆ. ಇದಾದ ಬಳಿಕ ಅರಣ್ಯ ಇಲಾಖೆ ವನ್ಯ ಜೀವಿ ಹಿಡಿಯಲು ಬೋನ್​ನಲ್ಲಿ ಮಾಂಸ ಇಟ್ಟು ಕಾದಿದ್ದಾರೆ. ಆದರೆ, ಯಾವುದೇ ಪ್ರಾಣಿ ಸೆರೆಯಾಗಿಲ್ಲ. ಇದು ಇಲ್ಲಿನ ಜನರಲ್ಲಿ ಆತಂಕ ಮತ್ತು ಭಯವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಗ್ರಾಮದಲ್ಲಿ ದಾಳಿ ನಡೆಸುತ್ತಿರುವುದು ತೋಳವಲ್ಲ. ನರಿಗಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಗಾಯಾ ಡಿಎಫ್​ಒ, ಪ್ರಾಣಿಯ ಕಚ್ಚಿದರಿಂದ ಆಗುವ ಗುರುತಿನ ಮೇಲೆಗೆ ಅದು ತೋಳದ ದಾಳಿಯೇ ಅಥವಾ ನರಿ ದಾಳಿಯೇ ಎಂಬ ಕುರಿತು ವೈದ್ಯಕೀಯ ತಂಡದಿಂದ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಉತ್ತಮ ಮುಂಗಾರು: ಭತ್ತ, ಧಾನ್ಯ, ಕಬ್ಬು ಬಿತ್ತನೆ ಪ್ರಮಾಣ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.