ETV Bharat / bharat

₹20,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣ: ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಕಡೆ ಇಡಿ ದಾಳಿ - Bank Fraud Case

author img

By ANI

Published : Jun 20, 2024, 4:03 PM IST

20,000 ಕೋಟಿ ರೂಪಾಯಿಗಳ ಬ್ಯಾಂಕ್​ ವಂಚನೆ ಪ್ರಕರಣದ ಸಂಬಂಧ ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Enforcement Directorate
ಜಾರಿ ನಿರ್ದೇಶನಾಲಯ (Getty Images)

ನವದೆಹಲಿ: ಬಹುಕೋಟಿ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ಮಾಡಿದೆ. ದೆಹಲಿ, ಗುರುಗ್ರಾಮ್​, ನೋಯ್ಡಾ, ಮಹಾರಾಷ್ಟ್ರದ ಮುಂಬೈ, ನಾಗ್ಪುರ್​ನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ.

ಅಮ್ಟೇಕ್​​​ ಗ್ರೂಪ್​ ವಿರುದ್ಧ 20,000 ಕೋಟಿ ರೂಪಾಯಿಗಳ ಬ್ಯಾಂಕ್​ ವಂಚನೆ ಆರೋಪವಿದೆ. ಅರವಿಂದ್ ಧಾಮ್, ಗೌತಮ್​ ಮಲ್ಹೋತ್ರಾ ಹಾಗೂ ಇತರರ ಒಡೆತನದ ಅಮ್ಟೇಕ್​​​ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಗುರುಗ್ರಾಮ್​ ವಲಯದ ಕಚೇರಿ ಅಧಿಕಾರಿಗಳು ಇಂದು ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ಕೈಕೊಂಡಿದ್ದಾರೆ. ಅಮ್ಟೇಕ್​​​ ಗ್ರೂಪ್​ ಹಾಗೂ ಅದರ ನಿರ್ದೇಶಕರಿಗೆ ಸೇರಿದ ವ್ಯವಹಾರ ಹಾಗೂ ವಸತಿ ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಂಚನೆ ಕುರಿತಂತೆ ಸುಪ್ರೀಂ ಕೋರ್ಟ್​ ನಿರ್ದೇಶನದ ಮೇರೆಗೆ ಸಿಬಿಐ ತನಿಖೆ ಕೈಗೊಂಡಿದೆ. ಸಿಬಿಐ ದಾಖಲಿಸಿದ ಎಫ್​ಐಆರ್​ ಆಧಾರದ ಮೇಲೆ ಇದೀಗ ಇಡಿ ಸಹ ತನಿಖೆ ನಡೆಸುತ್ತಿದೆ.

ಆರೋಪವೇನು?: ಬ್ಯಾಂಕ್​ಗಳಿಂದ ಸಾಲವಾಗಿ ಪಡೆದ ಹಣವನ್ನು ರಿಯಲ್​ ಇಸ್ಟೇಟ್​, ವಿದೇಶಿ ಹೂಡಿಕೆ ಹಾಗೂ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದರಿಂದ ಅಂದಾಜು 10-15 ಸಾವಿರ ಕೋಟಿ ರೂಪಾಯಿಗಳನ್ನು ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಶೇ 65ರಷ್ಟು ಮೀಸಲಾತಿ ನೀಡುವ ಕಾನೂನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್

ನವದೆಹಲಿ: ಬಹುಕೋಟಿ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದಾಳಿ ಮಾಡಿದೆ. ದೆಹಲಿ, ಗುರುಗ್ರಾಮ್​, ನೋಯ್ಡಾ, ಮಹಾರಾಷ್ಟ್ರದ ಮುಂಬೈ, ನಾಗ್ಪುರ್​ನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ.

ಅಮ್ಟೇಕ್​​​ ಗ್ರೂಪ್​ ವಿರುದ್ಧ 20,000 ಕೋಟಿ ರೂಪಾಯಿಗಳ ಬ್ಯಾಂಕ್​ ವಂಚನೆ ಆರೋಪವಿದೆ. ಅರವಿಂದ್ ಧಾಮ್, ಗೌತಮ್​ ಮಲ್ಹೋತ್ರಾ ಹಾಗೂ ಇತರರ ಒಡೆತನದ ಅಮ್ಟೇಕ್​​​ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಗುರುಗ್ರಾಮ್​ ವಲಯದ ಕಚೇರಿ ಅಧಿಕಾರಿಗಳು ಇಂದು ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ಕೈಕೊಂಡಿದ್ದಾರೆ. ಅಮ್ಟೇಕ್​​​ ಗ್ರೂಪ್​ ಹಾಗೂ ಅದರ ನಿರ್ದೇಶಕರಿಗೆ ಸೇರಿದ ವ್ಯವಹಾರ ಹಾಗೂ ವಸತಿ ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಂಚನೆ ಕುರಿತಂತೆ ಸುಪ್ರೀಂ ಕೋರ್ಟ್​ ನಿರ್ದೇಶನದ ಮೇರೆಗೆ ಸಿಬಿಐ ತನಿಖೆ ಕೈಗೊಂಡಿದೆ. ಸಿಬಿಐ ದಾಖಲಿಸಿದ ಎಫ್​ಐಆರ್​ ಆಧಾರದ ಮೇಲೆ ಇದೀಗ ಇಡಿ ಸಹ ತನಿಖೆ ನಡೆಸುತ್ತಿದೆ.

ಆರೋಪವೇನು?: ಬ್ಯಾಂಕ್​ಗಳಿಂದ ಸಾಲವಾಗಿ ಪಡೆದ ಹಣವನ್ನು ರಿಯಲ್​ ಇಸ್ಟೇಟ್​, ವಿದೇಶಿ ಹೂಡಿಕೆ ಹಾಗೂ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದರಿಂದ ಅಂದಾಜು 10-15 ಸಾವಿರ ಕೋಟಿ ರೂಪಾಯಿಗಳನ್ನು ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಶೇ 65ರಷ್ಟು ಮೀಸಲಾತಿ ನೀಡುವ ಕಾನೂನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.