ETV Bharat / bharat

ಶಿರಡಿ ಸಾಯಿಬಾಬಾ ಮಂದಿರಕ್ಕೆ ₹6.25 ಕೋಟಿ ದೇಣಿಗೆ ನೀಡಿದ ಭಕ್ತ! - shirdi sai babas donation

author img

By ETV Bharat Karnataka Team

Published : Jul 24, 2024, 10:47 PM IST

ಗುರು ಪೂರ್ಣಿಮೆ ಹಿನ್ನೆಲೆ ಶಿರಡಿ ಸಾಯಿ ಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ಹರಿದುಬಂದಿದೆ. ಭಕ್ತರೊಬ್ಬರೇ 6 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ.

ಶಿರಡಿ ಸಾಯಿಬಾಬಾ ಮಂದಿರ
ಶಿರಡಿ ಸಾಯಿಬಾಬಾ ಮಂದಿರ (ETV Bharat)

ಶಿರಡಿ (ಮಹಾರಾಷ್ಟ್ರ): ಗುರು ಪೂರ್ಣಿಮೆ ಹಿನ್ನೆಲೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾವಿರಾರು ಭಕ್ತರು ಹರಿದುಬಂದಿದ್ದರು. ಕ್ಷೇತ್ರದಲ್ಲಿ ನಡೆದ ಮೂರು ದಿನಗಳ ಗುರು ಪೂರ್ಣಿಮಾ ಉತ್ಸವದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಸಾಯಿಬಾಬಾನ ಭಕ್ತರೊಬ್ಬರು ಈ ಮೂರು ದಿನಗಳಲ್ಲಿ ಬರೋಬ್ಬರಿ 6.25 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಅಚ್ಚರಿಯಾದರೂ ಸತ್ಯ. ಈ ಮಹಾನ್​ ಭಕ್ತನ ಬಗ್ಗೆ ಮಾಹಿತಿ ಇಲ್ಲವಾದರೂ, ಮಂದಿರಕ್ಕೆ ಆತ 6 ಕೋಟಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ. ಇದು ಮೂರು ದಿನಗಳ ಉತ್ಸವದ ಅವಧಿಯಲ್ಲಿ ನಿತ್ಯ ನೀಡಿದ್ದಾರೆ. ಈ ಭಕ್ತರು ಉದ್ಯಮಿಗಳೋ, ವ್ಯಾಪಾರಸ್ಥರೋ, ಗಟ್ಟಿಕುಳವೋ ಏನೆಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಹುಂಡಿಯಲ್ಲಿ ಕೋಟಿ ರೂಪಾಯಿ ಕಾಣಿಕೆ ಸಂಗ್ರಹ: ಗುರು ಪೂರ್ಣಿಮಾ ಹಬ್ಬದ ಮೂರು ದಿನಗಳಂದು ಭಕ್ತರು ಗುರುದಕ್ಷಿಣೆ ಎಂದು ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಹುಂಡಿಯಲ್ಲಿ ಹಾಕಿದ್ದಾರೆ. ಇದರಿಂದ ಹೇರಳವಾದ ದೇಣಿಗೆ ಹರಿದು ಬಂದಿದೆ. ಭಕ್ತರರೊಬ್ಬರು ನೀಡಿದ 6 ಕೋಟಿ ಹಣವಲ್ಲದೇ, ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಜೊತೆಗೆ ಮಂದಿರದ ಆವರಣದಲ್ಲಿರುವ ಇನ್ನೊಂದು ದೇಣಿಗೆ ಕೌಂಟರ್‌ನಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಶಿರಡಿಗೆ ಬರಲು ಸಾಧ್ಯವಾಗದ ಭಕ್ತರು ಆನ್‌ಲೈನ್, ಚೆಕ್, ಡಿಡಿ ಮೂಲಕ 1 ಕೋಟಿ 95 ರೂಪಾಯಿ ನೀಡಿದ್ದರೆ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 5 ಕೆಜಿ ಬೆಳ್ಳಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಭಕ್ತರಿಂದ ರಕ್ತದಾನ: ಶಿರಡಿಯ ಸಾಯಿಬಾಬಾಗೆ ದೇಣಿಗೆ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರೊಂದಿಗೆ ಕಳೆದ ಕೆಲವು ವರ್ಷಗಳಿಂದ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಗುರುಪೂರ್ಣಿಮಾ ನಿಮಿತ್ತ ಮೂರು ದಿನಗಳಲ್ಲಿ 205 ಭಕ್ತರು ಸಾಯಿ ದರ್ಬಾರಿಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ.

ಜೊತೆಗೆ, ಸಾಯಿ ಪ್ರಸಾದಾಲಯದಲ್ಲಿ ಸುಮಾರು 1 ಲಕ್ಷದ 91 ಸಾವಿರದ 349 ಭಕ್ತರು ಪ್ರಸಾದ ಸವಿದಿದ್ದಾರೆ. ದರ್ಶನ ಸಾಲಿನಲ್ಲಿ 1 ಲಕ್ಷದ 96 ಸಾವಿರದ 200 ಭಕ್ತರಿಗೆ ಉಚಿತ ಪ್ರಸಾದ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. ಪ್ರಸಾದ ಲಾಡು ಖರೀದಿಯಿಂದ ಸಾಯಿ ಸಂಸ್ಥಾನಕ್ಕೆ 62 ಲಕ್ಷದ 31 ಸಾವಿರ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ಶಿರಡಿಗೆ ಹೋಗುವ ಪ್ಲ್ಯಾನ್‌ ಇದೆಯೇ? ಕೈಗೆಟುಕುವ ದರದಲ್ಲಿ IRCTC ಟೂರ್ ಪ್ಯಾಕೇಜ್! - IRCTC Tour Package

ಶಿರಡಿ (ಮಹಾರಾಷ್ಟ್ರ): ಗುರು ಪೂರ್ಣಿಮೆ ಹಿನ್ನೆಲೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾವಿರಾರು ಭಕ್ತರು ಹರಿದುಬಂದಿದ್ದರು. ಕ್ಷೇತ್ರದಲ್ಲಿ ನಡೆದ ಮೂರು ದಿನಗಳ ಗುರು ಪೂರ್ಣಿಮಾ ಉತ್ಸವದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಸಾಯಿಬಾಬಾನ ಭಕ್ತರೊಬ್ಬರು ಈ ಮೂರು ದಿನಗಳಲ್ಲಿ ಬರೋಬ್ಬರಿ 6.25 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಅಚ್ಚರಿಯಾದರೂ ಸತ್ಯ. ಈ ಮಹಾನ್​ ಭಕ್ತನ ಬಗ್ಗೆ ಮಾಹಿತಿ ಇಲ್ಲವಾದರೂ, ಮಂದಿರಕ್ಕೆ ಆತ 6 ಕೋಟಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ. ಇದು ಮೂರು ದಿನಗಳ ಉತ್ಸವದ ಅವಧಿಯಲ್ಲಿ ನಿತ್ಯ ನೀಡಿದ್ದಾರೆ. ಈ ಭಕ್ತರು ಉದ್ಯಮಿಗಳೋ, ವ್ಯಾಪಾರಸ್ಥರೋ, ಗಟ್ಟಿಕುಳವೋ ಏನೆಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಹುಂಡಿಯಲ್ಲಿ ಕೋಟಿ ರೂಪಾಯಿ ಕಾಣಿಕೆ ಸಂಗ್ರಹ: ಗುರು ಪೂರ್ಣಿಮಾ ಹಬ್ಬದ ಮೂರು ದಿನಗಳಂದು ಭಕ್ತರು ಗುರುದಕ್ಷಿಣೆ ಎಂದು ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಹುಂಡಿಯಲ್ಲಿ ಹಾಕಿದ್ದಾರೆ. ಇದರಿಂದ ಹೇರಳವಾದ ದೇಣಿಗೆ ಹರಿದು ಬಂದಿದೆ. ಭಕ್ತರರೊಬ್ಬರು ನೀಡಿದ 6 ಕೋಟಿ ಹಣವಲ್ಲದೇ, ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಜೊತೆಗೆ ಮಂದಿರದ ಆವರಣದಲ್ಲಿರುವ ಇನ್ನೊಂದು ದೇಣಿಗೆ ಕೌಂಟರ್‌ನಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಶಿರಡಿಗೆ ಬರಲು ಸಾಧ್ಯವಾಗದ ಭಕ್ತರು ಆನ್‌ಲೈನ್, ಚೆಕ್, ಡಿಡಿ ಮೂಲಕ 1 ಕೋಟಿ 95 ರೂಪಾಯಿ ನೀಡಿದ್ದರೆ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 5 ಕೆಜಿ ಬೆಳ್ಳಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಭಕ್ತರಿಂದ ರಕ್ತದಾನ: ಶಿರಡಿಯ ಸಾಯಿಬಾಬಾಗೆ ದೇಣಿಗೆ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರೊಂದಿಗೆ ಕಳೆದ ಕೆಲವು ವರ್ಷಗಳಿಂದ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಗುರುಪೂರ್ಣಿಮಾ ನಿಮಿತ್ತ ಮೂರು ದಿನಗಳಲ್ಲಿ 205 ಭಕ್ತರು ಸಾಯಿ ದರ್ಬಾರಿಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ.

ಜೊತೆಗೆ, ಸಾಯಿ ಪ್ರಸಾದಾಲಯದಲ್ಲಿ ಸುಮಾರು 1 ಲಕ್ಷದ 91 ಸಾವಿರದ 349 ಭಕ್ತರು ಪ್ರಸಾದ ಸವಿದಿದ್ದಾರೆ. ದರ್ಶನ ಸಾಲಿನಲ್ಲಿ 1 ಲಕ್ಷದ 96 ಸಾವಿರದ 200 ಭಕ್ತರಿಗೆ ಉಚಿತ ಪ್ರಸಾದ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. ಪ್ರಸಾದ ಲಾಡು ಖರೀದಿಯಿಂದ ಸಾಯಿ ಸಂಸ್ಥಾನಕ್ಕೆ 62 ಲಕ್ಷದ 31 ಸಾವಿರ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ಶಿರಡಿಗೆ ಹೋಗುವ ಪ್ಲ್ಯಾನ್‌ ಇದೆಯೇ? ಕೈಗೆಟುಕುವ ದರದಲ್ಲಿ IRCTC ಟೂರ್ ಪ್ಯಾಕೇಜ್! - IRCTC Tour Package

ETV Bharat Logo

Copyright © 2024 Ushodaya Enterprises Pvt. Ltd., All Rights Reserved.