ETV Bharat / bharat

1984ರ ನಂತರ ಒಮ್ಮೆಯೂ 250ರ ಗಡಿ ದಾಟದ ಕಾಂಗ್ರೆಸ್, ಈಗ ಪರಾವಲಂಬಿ ಪಕ್ಷ: ಪ್ರಧಾನಿ ಮೋದಿ ಕುಟುಕು - PM Modi in Lok sabha

ಕಳೆದ 10 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್​ ಒಮ್ಮೆಯೂ 250 ಸ್ಥಾನಗಳ ಗಡಿ ದಾಟಿಲ್ಲ. ನೀವು ನಕಲಿ ವಿಜಯೋತ್ಸವ ಆಚರಿಸುವ ಮೂಲಕ ಜನಾದೇಶವನ್ನು ಹತ್ತಿಕ್ಕಬೇಡಿ ಎಂದು ನಾನು ಕಾಂಗ್ರೆಸ್ಸಿನವರೆಗೆ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಕುಟುಕಿದ್ದಾರೆ.

author img

By PTI

Published : Jul 2, 2024, 6:23 PM IST

PM Modi speech in Lok Sabha
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ (ETV Bharat)

ನವದೆಹಲಿ: ದೇಶದಲ್ಲಿ 1984ರ ನಂತರ 10 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಲ್ಲದೇ, ಕಳೆದ ಮೂರು ಚುನಾವಣೆಯಲ್ಲಿ 100 ಸ್ಥಾನ ಕೂಡ ದಾಟಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಮಾತ್ರ ಪಡೆದಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ, ಕಾಂಗ್ರೆಸ್​ ಹಾಗೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿರುವುದು ನನಗೆ ಒಂದು ಮಗುವಿನ ನೆನಪಿಗೆ ತರುತ್ತದೆ. ಆ ಮಗು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಿದ್ದಾಗ, ಶಿಕ್ಷಕರು ಆ ಮಗುವಿಗೆ 543 ರಲ್ಲಿ 99 ಅಂಕಗಳನ್ನು ಪಡೆದಿರುವರೆ, 100ಕ್ಕೆ 99 ಅಂಕ ಅಲ್ಲ ಎಂದಿದ್ದರು. ಅದೂ, ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಆ ಮಗು ವಿಫಲವಾಗಿದೆ ಎಂದು ಕುಟುಕಿದರು.

ಮುಂದುವರೆದು, ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಈ ಎಲ್ಲ ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಜಗನ್ನಾಥನ ನಾಡು ಒಡಿಶಾದಲ್ಲಿ ನಾವು ಆಶೀರ್ವಾದ ಪಡೆದಿದ್ದೇವೆ. ಆಂಧ್ರಪ್ರದೇಶದಲ್ಲಿ ಎನ್​ಡಿಎ ಕ್ಲೀನ್ ಸ್ವೀಪ್ ಮಾಡಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಎನ್‌ಡಿಎ ಮತ್ತೊಮ್ಮೆ ಸರ್ಕಾರ ರಚಿಸಿದೆ ಎಂದು ಹೇಳಿದರು.

ಎನ್‌ಡಿಎಗೆ ಈ ಸಲದ ಅಧಿಕಾರ ಐತಿಹಾಸಿಕ: ನಾನು ಅದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತಿದ್ದೇನೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಶಕ್ತಿಯನ್ನು ಬಳಸುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಫಲಿತಾಂಶವನ್ನು ತರುತ್ತೇವೆ. ಎನ್‌ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಅದೃಷ್ಟವು 60 ವರ್ಷಗಳ ನಂತರ ಎರಡನೇ ಬಾರಿಗೆ ಘಟಿಸಿದೆ ಎಂದು ಮೋದಿ ತಿಳಿಸಿದರು.

ಇದೇ ವೇಳೆ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಸೇರಿ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಪಡೆದ ಮತಗಳಿಂತ ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಪಂಜಾಬ್‌ನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ನೀವು ನಕಲಿ ವಿಜಯೋತ್ಸವ ಆಚರಿಸುವ ಮೂಲಕ ಜನಾದೇಶವನ್ನು ಹತ್ತಿಕ್ಕಬೇಡಿ ಎಂದು ನಾನು ಕಾಂಗ್ರೆಸ್ಸಿನವರೆಗೆ ಹೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ನ ಮೈತ್ರಿ ಪಾಲುದಾರರು ಈ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪರಿಶೀಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ಈ ಚುನಾವಣೆಗಳು ಅವರಿಗೂ ಒಂದು ಸಂದೇಶವಾಗಿದೆ. 2024ರಿಂದ ಕಾಂಗ್ರೆಸ್​ಅನ್ನು ಪರಾವಲಂಬಿ ಪಕ್ಷ ಎಂದು ಕರೆಯಲಾಗುತ್ತದೆ. ಪರಾವಲಂಬಿಯು ಅದು ವಾಸಿಸುವ ದೇಹವನ್ನು ತಿನ್ನುತ್ತದೆ. ಕಾಂಗ್ರೆಸ್ ಕೂಡ ತಾನು ಮೈತ್ರಿ ಮಾಡಿಕೊಳ್ಳುವ ಪಕ್ಷದ ಮತಗಳನ್ನು ತಿನ್ನುತ್ತಿದೆ ಮತ್ತು ಮೈತ್ರಿ ಪಕ್ಷಗಳ ವೆಚ್ಚದಲ್ಲಿ ಬೆಳೆಯುತ್ತದೆ ಎಂದು ಲೇವಡಿ ಮಾಡಿದರು.

2014ಕ್ಕೂ ಮೊದಲು ಜನತೆ ನಿರಾಶೆಗೊಂಡಿದ್ದರು: 2014ರಲ್ಲಿ ನಮ್ಮ ಜನರು ತಮ್ಮ ವಿಶ್ವಾಸ ಕಳೆದುಕೊಂಡಿದ್ದರು. ರಾಷ್ಟ್ರವು ಹತಾಶೆಯಲ್ಲಿತ್ತು. ನಾವು ನಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗ, ರಾಷ್ಟ್ರವು ತನ್ನದೇ ಆದ ಶಕ್ತಿ ಮೇಲೆ ನಿಲ್ಲುವುದು ಕಷ್ಟವಾಗುತ್ತದೆ. 2014ಕ್ಕೂ ಮೊದಲು ಈ ದೇಶದಲ್ಲಿ ಏನೂ ಬದಲಾಗುವುದಿಲ್ಲ ಎಂದು ಜನ ಹೇಳುತ್ತಿದ್ದರು. ಆ ದಿನಗಳಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೆವು. ಅಲ್ಲದೇ, ಗ್ಯಾಸ್ ಸಂಪರ್ಕಕ್ಕಾಗಿ ಜನತೆ ಸಂಸದರನ್ನು ಭೇಟಿ ಮಾಡಬೇಕಾಗಿತ್ತು. ಅದೂ ಲಂಚವಿಲ್ಲದೇ ಸಿಗುತ್ತಿರಲಿಲ್ಲ. ಅಲ್ಲದೇ, ವಾರಗಟ್ಟಲೆ ಉಚಿತ ರೇಷನ್ ಸಿಗುತ್ತಿರಲಿಲ್ಲ. ಅದಕ್ಕೂ ಲಂಚ ನೀಡಬೇಕಾಗುತ್ತಿತ್ತು. ನಮ್ಮ ಹೆಚ್ಚಿನ ಸಹೋದರ, ಸಹೋದರಿಯರು ತುಂಬಾ ನಿರಾಶೆಗೊಂಡಿದ್ದರು ಎಂದು ಮೋದಿ ತಿಳಿಸಿದರು.

2014ರ ಮೊದಲು ಭಯೋತ್ಪಾದಕರು ಭಾರತದಲ್ಲಿ ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ದಾಳಿ ಮಾಡಬಹುದಾಗಿತ್ತು. ಅಮಾಯಕರು ಕೊಲ್ಲಲ್ಪಡುತ್ತಿದ್ದರು. ಭಾರತದ ಮೂಲೆ ಮೂಲೆಗಳು ಗುರಿಯಾಗುತ್ತಿದ್ದವು. ಆಗಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, 2014ರ ನಂತರ ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳು, ವೈಮಾನಿಕ ದಾಳಿ ಮತ್ತು ಭಯೋತ್ಪಾದಕರ ಮನೆಗಳನ್ನು ಧ್ವಂಸ ಮಾಡಬಹುದು. ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ ಎಂದು ಇಡೀ ದೇಶದ ಜನರಿಗೆ ಈಗ ತಿಳಿದಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಸಂವಿಧಾನ ಜಾರಿಗೆ ತರಲು ಧೈರ್ಯ ಮಾಡಲಿಲ್ಲ: 370ನೇ ವಿಶೇಷ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ನಾಶಪಡಿಸಿತ್ತು, ಅಲ್ಲಿ ಸಂವಿಧಾನವನ್ನು ಜಾರಿಗೆ ತರಲಿಲ್ಲ. ಸಂವಿಧಾನವನ್ನು ತಲೆಯ ಮೇಲೆ ಇಟ್ಟುಕೊಂಡು ಕುಣಿಯುವವರು ಜಮ್ಮು ಮತ್ತು ಕಾಶ್ಮೀರದಲ್ಲಿ ಅದನ್ನು ಜಾರಿಗೆ ತರಲು ಧೈರ್ಯ ಮಾಡಲಿಲ್ಲ. ಈ ಮೂಲಕ ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದರು ಎಂದು ಮೋದಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಳೆದ 10 ವರ್ಷಗಳಲ್ಲಿ ದೇಶ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ' ಕಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ದೇಶದಲ್ಲಿ 1984ರ ನಂತರ 10 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಲ್ಲದೇ, ಕಳೆದ ಮೂರು ಚುನಾವಣೆಯಲ್ಲಿ 100 ಸ್ಥಾನ ಕೂಡ ದಾಟಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಮಾತ್ರ ಪಡೆದಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ, ಕಾಂಗ್ರೆಸ್​ ಹಾಗೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿರುವುದು ನನಗೆ ಒಂದು ಮಗುವಿನ ನೆನಪಿಗೆ ತರುತ್ತದೆ. ಆ ಮಗು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಿದ್ದಾಗ, ಶಿಕ್ಷಕರು ಆ ಮಗುವಿಗೆ 543 ರಲ್ಲಿ 99 ಅಂಕಗಳನ್ನು ಪಡೆದಿರುವರೆ, 100ಕ್ಕೆ 99 ಅಂಕ ಅಲ್ಲ ಎಂದಿದ್ದರು. ಅದೂ, ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಆ ಮಗು ವಿಫಲವಾಗಿದೆ ಎಂದು ಕುಟುಕಿದರು.

ಮುಂದುವರೆದು, ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಈ ಎಲ್ಲ ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಜಗನ್ನಾಥನ ನಾಡು ಒಡಿಶಾದಲ್ಲಿ ನಾವು ಆಶೀರ್ವಾದ ಪಡೆದಿದ್ದೇವೆ. ಆಂಧ್ರಪ್ರದೇಶದಲ್ಲಿ ಎನ್​ಡಿಎ ಕ್ಲೀನ್ ಸ್ವೀಪ್ ಮಾಡಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಎನ್‌ಡಿಎ ಮತ್ತೊಮ್ಮೆ ಸರ್ಕಾರ ರಚಿಸಿದೆ ಎಂದು ಹೇಳಿದರು.

ಎನ್‌ಡಿಎಗೆ ಈ ಸಲದ ಅಧಿಕಾರ ಐತಿಹಾಸಿಕ: ನಾನು ಅದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತಿದ್ದೇನೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಶಕ್ತಿಯನ್ನು ಬಳಸುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಫಲಿತಾಂಶವನ್ನು ತರುತ್ತೇವೆ. ಎನ್‌ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಅದೃಷ್ಟವು 60 ವರ್ಷಗಳ ನಂತರ ಎರಡನೇ ಬಾರಿಗೆ ಘಟಿಸಿದೆ ಎಂದು ಮೋದಿ ತಿಳಿಸಿದರು.

ಇದೇ ವೇಳೆ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಸೇರಿ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಪಡೆದ ಮತಗಳಿಂತ ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಪಂಜಾಬ್‌ನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ನೀವು ನಕಲಿ ವಿಜಯೋತ್ಸವ ಆಚರಿಸುವ ಮೂಲಕ ಜನಾದೇಶವನ್ನು ಹತ್ತಿಕ್ಕಬೇಡಿ ಎಂದು ನಾನು ಕಾಂಗ್ರೆಸ್ಸಿನವರೆಗೆ ಹೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ನ ಮೈತ್ರಿ ಪಾಲುದಾರರು ಈ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪರಿಶೀಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ಈ ಚುನಾವಣೆಗಳು ಅವರಿಗೂ ಒಂದು ಸಂದೇಶವಾಗಿದೆ. 2024ರಿಂದ ಕಾಂಗ್ರೆಸ್​ಅನ್ನು ಪರಾವಲಂಬಿ ಪಕ್ಷ ಎಂದು ಕರೆಯಲಾಗುತ್ತದೆ. ಪರಾವಲಂಬಿಯು ಅದು ವಾಸಿಸುವ ದೇಹವನ್ನು ತಿನ್ನುತ್ತದೆ. ಕಾಂಗ್ರೆಸ್ ಕೂಡ ತಾನು ಮೈತ್ರಿ ಮಾಡಿಕೊಳ್ಳುವ ಪಕ್ಷದ ಮತಗಳನ್ನು ತಿನ್ನುತ್ತಿದೆ ಮತ್ತು ಮೈತ್ರಿ ಪಕ್ಷಗಳ ವೆಚ್ಚದಲ್ಲಿ ಬೆಳೆಯುತ್ತದೆ ಎಂದು ಲೇವಡಿ ಮಾಡಿದರು.

2014ಕ್ಕೂ ಮೊದಲು ಜನತೆ ನಿರಾಶೆಗೊಂಡಿದ್ದರು: 2014ರಲ್ಲಿ ನಮ್ಮ ಜನರು ತಮ್ಮ ವಿಶ್ವಾಸ ಕಳೆದುಕೊಂಡಿದ್ದರು. ರಾಷ್ಟ್ರವು ಹತಾಶೆಯಲ್ಲಿತ್ತು. ನಾವು ನಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗ, ರಾಷ್ಟ್ರವು ತನ್ನದೇ ಆದ ಶಕ್ತಿ ಮೇಲೆ ನಿಲ್ಲುವುದು ಕಷ್ಟವಾಗುತ್ತದೆ. 2014ಕ್ಕೂ ಮೊದಲು ಈ ದೇಶದಲ್ಲಿ ಏನೂ ಬದಲಾಗುವುದಿಲ್ಲ ಎಂದು ಜನ ಹೇಳುತ್ತಿದ್ದರು. ಆ ದಿನಗಳಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೆವು. ಅಲ್ಲದೇ, ಗ್ಯಾಸ್ ಸಂಪರ್ಕಕ್ಕಾಗಿ ಜನತೆ ಸಂಸದರನ್ನು ಭೇಟಿ ಮಾಡಬೇಕಾಗಿತ್ತು. ಅದೂ ಲಂಚವಿಲ್ಲದೇ ಸಿಗುತ್ತಿರಲಿಲ್ಲ. ಅಲ್ಲದೇ, ವಾರಗಟ್ಟಲೆ ಉಚಿತ ರೇಷನ್ ಸಿಗುತ್ತಿರಲಿಲ್ಲ. ಅದಕ್ಕೂ ಲಂಚ ನೀಡಬೇಕಾಗುತ್ತಿತ್ತು. ನಮ್ಮ ಹೆಚ್ಚಿನ ಸಹೋದರ, ಸಹೋದರಿಯರು ತುಂಬಾ ನಿರಾಶೆಗೊಂಡಿದ್ದರು ಎಂದು ಮೋದಿ ತಿಳಿಸಿದರು.

2014ರ ಮೊದಲು ಭಯೋತ್ಪಾದಕರು ಭಾರತದಲ್ಲಿ ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ದಾಳಿ ಮಾಡಬಹುದಾಗಿತ್ತು. ಅಮಾಯಕರು ಕೊಲ್ಲಲ್ಪಡುತ್ತಿದ್ದರು. ಭಾರತದ ಮೂಲೆ ಮೂಲೆಗಳು ಗುರಿಯಾಗುತ್ತಿದ್ದವು. ಆಗಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, 2014ರ ನಂತರ ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳು, ವೈಮಾನಿಕ ದಾಳಿ ಮತ್ತು ಭಯೋತ್ಪಾದಕರ ಮನೆಗಳನ್ನು ಧ್ವಂಸ ಮಾಡಬಹುದು. ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತದೆ ಎಂದು ಇಡೀ ದೇಶದ ಜನರಿಗೆ ಈಗ ತಿಳಿದಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಸಂವಿಧಾನ ಜಾರಿಗೆ ತರಲು ಧೈರ್ಯ ಮಾಡಲಿಲ್ಲ: 370ನೇ ವಿಶೇಷ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ನಾಶಪಡಿಸಿತ್ತು, ಅಲ್ಲಿ ಸಂವಿಧಾನವನ್ನು ಜಾರಿಗೆ ತರಲಿಲ್ಲ. ಸಂವಿಧಾನವನ್ನು ತಲೆಯ ಮೇಲೆ ಇಟ್ಟುಕೊಂಡು ಕುಣಿಯುವವರು ಜಮ್ಮು ಮತ್ತು ಕಾಶ್ಮೀರದಲ್ಲಿ ಅದನ್ನು ಜಾರಿಗೆ ತರಲು ಧೈರ್ಯ ಮಾಡಲಿಲ್ಲ. ಈ ಮೂಲಕ ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದರು ಎಂದು ಮೋದಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಳೆದ 10 ವರ್ಷಗಳಲ್ಲಿ ದೇಶ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ' ಕಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.