ಮುಂಬೈ: ಈ ಘಟನೆ ತುಂಬಾ ಹಳೆಯದ್ದು, ಅಂದರೆ, 75-80 ವರ್ಷದ ಹಿಂದೆ ಪಶ್ಚಿಮ ಮುಂಬೈನ ದಾದರ್ ಕೇಂದ್ರ ರೈಲ್ವೆ ನಿಲ್ದಾಣದ ಹೊರಗೆ ಒಂದು ಶೆಡ್ ಅಂಗಡಿ ಇತ್ತು. ಪ್ರತಿದಿನ ಈ ಶಾಪಿನ ಮುಂದೆ ಬಂದು 16 ವರ್ಷದ ಬಾಲಕ ನಿಂತು ಅಂಗಡಿಯನ್ನೇ ದಿಟ್ಟಿಸುತ್ತಿದ್ದ. ಆತ ನಿಜವಾಗಲೂ ದಿಟ್ಟಿಸುತ್ತಿದ್ದದ್ದು ಹಾರ್ಮೋನಿಯಂ. ಕೆಲವೊಮ್ಮೆ ಅಂಗಡಿಯ ಮುಂದೆ ಹಾರ್ಮೋನಿಯಂ ಇದ್ದರೆ, ಕೆಲವೊಮ್ಮೆ ಒಳಗೆ. ಆದರೆ, ಈ ಬಾಲಕ ಅದು ಎಲ್ಲಿದ್ದರೂ ಹೋಗಿ ಒಮ್ಮೆ ನುಡಿಸಿ ಬರುತ್ತಿದ್ದ. ಇದು ಅತನ ದಿನಚರಿಯೂ ಆಗಿತ್ತು.
ಈ ಹಾರ್ಮೋನಿಯಂ ಇಷ್ಟವಾದರೂ ಕೊಳ್ಳುವ ಸಾಮರ್ಥ್ಯ ಆತನಿಗೆ ಮೀರಿದ್ದಾಗಿತ್ತು. ಇದು ಅಂಗಡಿ ಮಾಲೀಕನಿಗೆ ಅರ್ಥವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಒಂದು ದಿನ ಆತ ಹುಡುಗನನ್ನು ಕರೆದು ಆಸಕ್ತಿಯಿಂದ ಮಾತನಾಡಲು ಶುರು ಮಾಡಿದ. ಬಾಲಕ ಕೂಡ ತನ್ನಲ್ಲಿದ್ದ ಧೈರ್ಯವನ್ನೆಲ್ಲಾ ಒಟ್ಟಾಗಿ ನನಗೆ ಹಾರ್ಮೋನಿಯಂ ಅಂದರೆ ಇಷ್ಟ ಎಂದ. ಅಲ್ಲದೇ, ಅದನ್ನು ಕೊಳ್ಳಲು ತಾನು ಅಸಹಾಯಕ. ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಉಸಿರಿದ.
ಸಂಗೀತದ ಬಗ್ಗೆ ಬಾಲಕನಿಗಿದ್ದ ಆಸಕ್ತಿ ಕಂಡ ಅಂಗಡಿ ಮಾಲೀಕ ಹಾರ್ಮೋನಿಯಂ ಅನ್ನು ನೀಡಲು ಮುಂದಾದರು. ಅಂದಿಗೆ 40 ರೂ. ಬೆಲೆ ಬಾಳುವ ಹಾರ್ಮೋನಿಯಂಗೆ ನಿನ್ನ ಬಳಿ ಎಷ್ಟು ಹಣವಿದ್ಯೋ ಅಷ್ಟು ಕೊಡು ಸಾಕು ಎಂದು ಹೇಳಿ ಹಾರ್ಮೋನಿಯಂ ಕೈಗಿತ್ತರು.
ಈ 16ರ ಬಾಲಕ ಬಳಿಕ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡ. ಹಿಂದಿ ಚಿತ್ರರಂಗದಲ್ಲಿ ಸುವರ್ಣ ಸಂಗೀತ ಕಾಲ ಸೃಷ್ಟಿಸಿದ ಈತ ಒಂದರ ಹಿಂದೆ ಒಂದು ಸುಮಧುರ ಹಾಡುಗಳನ್ನು ಸೃಷ್ಟಿ ಮಾಡಿದರು.
ವೈಜಯಂತಿಮಾಲ ನಟನೆಯ ದೊ ಹನ್ಸೊ ಕ ಜೊಡಾ ದಂತಹ ಸುಮಧುರ ಗಾಯನವಿರಲಿ, ದಿಲೀಪ್ ಕುಮಾರ್ ಹಾಡಿದ ‘ಮಧುಬನ್ ಮೇ ರಾಧಿಕಾ ನಾಚೆ’ ಶಾಸ್ತ್ರೀಯ ಗೀತೆಯಾಗಲಿ.. ಅದರಲ್ಲೂ ಇಂದಿಗೂ ಜನಪ್ರಿಯವಾಗಿರುವ ‘ನನ್ಹ ಮುನ್ನಾ ರಾಹಿ ಹೂಂ’ ಹಾಡಿನ ಸಂಗೀತ ನಿರ್ದೇಶಕರಾದರು. ಅವರೇ ನೌಶಾದ್ ಅಲಿ. ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅಲಿ ಅವರು ತಮಗೆ ಹಾರ್ಮೊನಿಯಂ ನೀಡಿದ ಅಂಗಡಿ ಮಾಲೀಕನನ ಹೆಸರಲ್ಲಿ ಒಂದು ಸಂಗೀತ ಸಂಸ್ಥೆ ಸ್ಥಾಪಿಸಿದರು. ಅದುವೇ ಹರಿಭಾವು ವಿಶ್ವನಾಥ್ ಸಂಗೀತ ಸಂಸ್ಥೆ.
ಈ ಸಂಸ್ಥೆಗೆ ಇದೀಗ ಶತಮಾನದ ಸಂಭ್ರಮ. ಇದು ಭಾರತದ ಸಂಗೀತ ಜಗತ್ತಿನ ಹಲವು ಬದಲಾವಣೆಗೆ ಕಾರಣವೂ ಆಯಿತು. 1925ರಲ್ಲಿ ಪಶ್ಚಿಮ ದಾದರ್ನಲ್ಲಿ ಪೇಪರ್ ಶೆಡ್ನಲ್ಲಿ ಆರಂಭವಾದ ಹರಿಭಾವು ವಿಶ್ವನಾಥ ಮ್ಯೂಸಿಕಲ್ ಭಾರತದ ಸಂಗೀತ ಪರಂಪರೆಯ ಶತಮಾನದ ಇತಿಹಾಸವಾಗಿ ಉಳಿದಿದೆ.
ದಾದರ್ ನಗರ ನಿರ್ಮಾಣದಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಅಂಗಡಿ ಇದೀಗ ಶತಮಾನದ ಹೊಸ್ತಿಲಿನಲ್ಲಿ ತನ್ನ ಸ್ಥಳ ಬದಲಾವಣೆಗೆ ಕೂಡ ಮುಂದಾಗಿದೆ. ದಾದರ್ನಿಂದ ಪ್ರಭಾದೇವಿ ಪ್ರದೇಶಕ್ಕೆ ಇದು ಸ್ಥಳಾಂತರವಾಗುತ್ತಿದೆ. ಈ ಸುದ್ದಿ ಅನೇಕ ಸಂಗೀತ ಪ್ರೇಮಿಗಳಲ್ಲಿ ಬೇಸರಕ್ಕೂ ಕಾರಣವಾಗಿದೆ.
ಸಂಗೀತ ಸಾಧನಗಳ ನಿರ್ಮಾಣ ಮತ್ತು ಮಾರಾಟದ ಪ್ರಮುಖ ಅಂಗಡಿಯಾಗಿ ಗುರುತಿಸಿಕೊಂಡಿದ್ದ ಹರಿಭಾವು ವಿಶ್ವನಾಥ್ ಮ್ಯೂಸಿಕಲ್ ಸ್ಥಳಾಂತರಕ್ಕೆ ಕಾರಣವೇನು ಎಂಬ ಕುರಿತು ನಮ್ಮ ಈಟಿವಿ ಭಾರತ್ ಪ್ರತಿನಿಧಿ ಅಂಗಡಿ ಮಾಲೀಕರಾದ ದಿನೇಶ್ ದಿವನೆ ಅವರನ್ನು ಮಾತನಾಡಿಸಿದ್ದಾರೆ. ದಿವನೆ ಕುಟುಂಬದ ದಿನೇಶ್ ದಿವನೆ ಸರಸ್ವತಿ ಪಲ್ಲಕ್ಕಿ ಸಹೋದರರಾಗಿದ್ದಾರೆ.
ಈ ಅಂಗಡಿ ಸಂಸ್ಥಾಪಕರ ಅಳಿಯರಾಗಿರುವ ದಿನೇಶ್ ದಿವಾನೆ. ದಾದರ್ನ ಅಂಗಡಿ ಪ್ರಮುಖ ಸ್ಥಳದಲ್ಲಿದ್ದರೂ ಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ವಾಹನಗಳ ಸದ್ದಿನ ಜೊತೆ ಅಂಗಡಿಗೆ ನಡೆದು ಬರಲು ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗಡಿಗೆ ಸಂಗೀತ ಸಾಧನ ಕೊಳ್ಳಲು ಬರುವವರು ತಮ್ಮ ವಾಹನ ನಿಲ್ಲಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದೆಲ್ಲದಕ್ಕಿಂತ ಪ್ರಮುಖ ಸಮಸ್ಯೆ ಎಂದರೆ, ಸಾಧನ ಕೊಳ್ಳಲು ಬರುವ ಸಂಗೀತ ಪ್ರೇಮಿಗಳು ಸಾಧನ ಪರೀಕ್ಷಿಸಲು ಮುಂದಾದಗ ಅದರಿಂದ ಹೊರ ಹೊಮ್ಮುವ ನಾದಕ್ಕಿಂತ ಹೆಚ್ಚಾಗಿ ವಾಹನದ ಗದ್ದಲದ ಶಬ್ಧಗಳನ್ನೇ ಕೇಳುತ್ತಾರೆ. ಇದರಿಂದಾಗಿ ಗ್ರಹಕರು ಸಾಧನದ ಗುಣಮಟ್ಟವನ್ನು ಅರಿಯುವುದು ದುಸ್ತರವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಈ ನಿರ್ಧಾರ ಮಾಡಲಾಗಿದೆ. ಪ್ರಭಾದೇವಿ ಪ್ರದೇಶಕ್ಕೆ ಅಂಗಡಿ ಸ್ಥಳಾಂತರ ಮಾಡುವ ನಿರ್ಧಾರವನ್ನು ಭಾರವಾದ ಮನಸಿನಿಂದ ಮಾಡಿದ್ದೇವೆ ಎಂದರು.
ಹೃದಯನಾಥ್ ಅವರಿಂದ ಭೀಮ್ಸೇನ್ ಜೋಷಿ, ಲತಾ ಮಂಗೇಶ್ಕರ್, ಶಂಕರ್ ಮಹಾದೇವನ್, ಅವಧೂತ ಗುಪ್ತೆ ಸೇರಿದಂತೆ ಅನೇಕರಿಗೆ ಹರಿಭಾವು ವಿಶ್ವನಾಥ್ ಮ್ಯೂಸಿಕಲ್ ಕೇಂದ್ರ ಮನೆ ಇದ್ದಂತೆ ಇದೆ. ಇದು ಇವರ ಸಂಗೀತ ಪ್ರಯಾಣವನ್ನು ಕೇವಲ ಮಾತಿನಲ್ಲಿ ಬಣ್ಣಿಸಲಾಗಷ್ಟು ಪಾತ್ರವನ್ನು ವಹಿಸಿದೆ.
ಇದನ್ನೂ ಓದಿ: ಖ್ಯಾತ ಗಾಯಕ ಎಡ್ ಶಿರಾನ್ ಸಂಗೀತ ಕಾರ್ಯಕ್ರಮ ನಿಲ್ಲಿಸಿದ ಬೆಂಗಳೂರು ಪೊಲೀಸರು
ಇದನ್ನೂ ಓದಿ: ಮೈಸೂರಲ್ಲೇ ವಿವಾಹ ಆಗಬೇಕೆಂಬುದು ನನ್ನ ಕನಸು: ಸಿದ್ಧತೆ ಬಗ್ಗೆ ಡಾಲಿ ಧನಂಜಯ್ ಮಾತು