ETV Bharat / bharat

ತೇಲುವ ಮನೆ ನಿರ್ಮಿಸಿದ ಯುವಕ: ಪ್ರವಾಹದಲ್ಲೂ ಮುಳುಗಲ್ಲ ಈ ಮನೆ, ನಿರಾಶ್ರಿತರಿಗೆ ಆಗುತ್ತೆ ಅನುಕೂಲ; ವೆಚ್ಚ ಎಷ್ಟು ಗೊತ್ತೆ? - Floating House

author img

By ETV Bharat Karnataka Team

Published : 2 hours ago

Updated : 36 seconds ago

ಬಿಹಾರದ ಯುವಕನೊಬ್ಬ ನೀರಿನ ಮೇಲೆ ತೇಲುವ ಮನೆಯನ್ನು ನಿರ್ಮಾಣ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾನೆ.

ತೇಲುವ ಮನೆ ನಿರ್ಮಿಸಿದ ಬಿಹಾರದ ಯುವಕ: ಪ್ರವಾಹದಲ್ಲೂ ಮುಳುಗಲ್ಲ ಈ ಮನೆ
ತೇಲುವ ಮನೆ ನಿರ್ಮಿಸಿದ ಬಿಹಾರದ ಯುವಕ: ಪ್ರವಾಹದಲ್ಲೂ ಮುಳುಗಲ್ಲ ಈ ಮನೆ (ETV Bharat)

ಬಕ್ಸಾರ್, ಬಿಹಾರ: ಪ್ರತಿ ವರ್ಷ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಿಂದ ಜನರನ್ನು ಪಾರು ಮಾಡುವ ಸಲುವಾಗಿ ಇಲ್ಲಿನ ಯುವಕನೊಬ್ಬ 2023 ರಲ್ಲಿ ಗಂಗಾ ನದಿಯ ದಡದಲ್ಲಿ ಇದೇ ಮೊದಲ ಬಾರಿಗೆ ತೇಲುವ ಮನೆಯೊಂದನ್ನು ನಿರ್ಮಿಸಿದ್ದಾನೆ. ಗಂಗಾ ನದಿಯ ನೀರಿನ ಮಟ್ಟವು ಗಂಟೆಗೆ ನಾಲ್ಕು ಸೆಂಟಿಮೀಟರ್ ದರದಲ್ಲಿ ಏರುತ್ತಿದೆ ಎಂದು ಕೇಂದ್ರ ಜಲ ಆಯೋಗದ ವರದಿ ಹೊರಬಂದ ನಂತರ ಯುವಕ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದಾನೆ. ನದಿ ನೀರಿನ ಮಟ್ಟ ಮುಂದಿನ ದಿನಗಳಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪದೇ ಪದೇ ನಾಶ, ಶಾಶ್ವತ ಪರಿಹಾರದ ಚಿಂತನೆ: ಅರ್ರಾ ನಿವಾಸಿ ಪ್ರಶಾಂತ್ ಕುಮಾರ್ ಎಂಬುವರೇ ಇಂಥದೊಂದು ವಿಶೇಷ ಮನೆಯನ್ನು ನಿರ್ಮಿಸಿರುವ ಯುವಕನಾಗಿದ್ದಾನೆ. ಪ್ರತಿ ವರ್ಷ ಪ್ರವಾಹದಿಂದ ತನ್ನ ಮನೆ ಪದೇ ಪದೇ ನಾಶವಾಗುತ್ತಿರುವುದರಿಂದ ಹತಾಶೆ ಮತ್ತು ಅಸಹಾಯಕನಾಗಿ ಕೊನೆಗೆ ನೀರಲ್ಲಿ ತೇಲುವ ಮನೆಯನ್ನು ನಿರ್ಮಿಸಲು ಆತ ನಿರ್ಧರಿಸಿದ್ದ.

Buxar Floating House Banks Of River Ganga Bihar Flood
ಮುಳುಗಲ್ಲ ಈ ಮನೆ, ನಿರಾಶ್ರಿತರಿಗೆ ಆಗುತ್ತೆ ಅನುಕೂಲ; ವೆಚ್ಚ ಎಷ್ಟು ಗೊತ್ತೆ? (ETV Bharat)

ತನ್ನ ಐಡಿಯಾವನ್ನು ಕಾರ್ಯರೂಪಕ್ಕೆ ತರಲು ಪ್ರಶಾಂತ್ ಕೆನಡಾ, ಜರ್ಮನಿ ಮತ್ತು ನೆದರ್​​ಲ್ಯಾಂಡ್​ನಲ್ಲಿ ವಾಸಿಸುವ ತನ್ನ ಸ್ನೇಹಿತರನ್ನು ಸಂಪರ್ಕಿಸಿದ್ದಾನೆ. ಅವರ ಸಹಾಯದಿಂದ ಆತ ಪ್ರವಾಹ ನೀರಿನ ಮೇಲೆ ತೇಲಬಲ್ಲ ಮನೆಯೊಂದನ್ನು ನಿರ್ಮಿಸಲು ಸಾಧ್ಯವಾಗಿದೆ.

ಸ್ನೇಹಿತರ ಸಹಾಯದಿಂದ ಮನೆ ನಿರ್ಮಿಸಿದ್ದು ಹೇಗೆ?: "ಪ್ರತಿ ವರ್ಷ ಇಲ್ಲಿನ ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರವಾಹದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಹೋಗುವಂತಾಗುತ್ತದೆ ಹಾಗೂ ಇದರಿಂದ ಅವರು ಪ್ರತಿವರ್ಷ 3 ರಿಂದ 4 ತಿಂಗಳು ಇದರಲ್ಲೇ ಕಳೆಯಬೇಕಾಗುತ್ತದೆ. ಹೀಗಾಗಿ ಪ್ರವಾಹ ನಿರೋಧಕ ಮತ್ತು ವಿದ್ಯುತ್ ಉತ್ಪಾದಿಸಲು ಸೌರ ಉಪಕರಣಗಳನ್ನು ಹೊಂದಿರುವ ಮನೆಯನ್ನು ನಿರ್ಮಿಸುವ ಆಲೋಚನೆ ನನ್ನಲ್ಲಿ ಬಂದಿತು. ನಾವು ಇದೇ ರೀತಿಯಲ್ಲಿ ಅಧಿಕ ಸಂಖ್ಯೆಯ ಮನೆಗಳನ್ನು ನಿರ್ಮಿಸಬಹುದು ಹಾಗೂ ಈ ಮೂಲಕ ಗ್ರಾಮದ ಸಂಪೂರ್ಣ ಜನಸಂಖ್ಯೆಗೆ ಪ್ರವಾಹದ ಸಮಯದಲ್ಲಿ ಸ್ಥಳಾವಕಾಶ ಕಲ್ಪಿಸಬಹುದು. ಇದು ನೀರಿನಲ್ಲಿ ಬದುಕುಳಿಯುವ ಪ್ರಯೋಗವಾಗಿದೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಸಮಸ್ಯೆ ಪರಿಹರಿಸಲು ನಾನು ಪ್ರಯತ್ನಿಸಿದ್ದೇನೆ" ಎಂದು ಕುಮಾರ್ ಹೇಳಿಕೊಂಡಿದ್ದಾರೆ.

Buxar Floating House Banks Of River Ganga Bihar Flood
ತೇಲುವ ಮನೆ ನಿರ್ಮಿಸಿದ ಯುವಕ (ETV Bharat)

ತೇಲುವ ಮನೆ ಕಟ್ಟಲು ಬಳಸಲಾದ ವಸ್ತುಗಳು: "ಈ ಮನೆಯನ್ನು ನಿರ್ಮಿಸಲು ಹಸುವಿನ ಸಗಣಿ, ಮಣ್ಣು ಮತ್ತು ಹುಲ್ಲನ್ನು ಬಳಸಲಾಗುತ್ತಿದೆ. ಜೊತೆಗೆ ಖಾಲಿ ಡ್ರಮ್ ಪೇಂಟ್, ಎಂಜಿನ್ ಆಯಿಲ್ ಮುಂತಾದ ವಸ್ತುಗಳನ್ನು ಬಳಸಲಾಗುತ್ತಿದೆ. ಮನೆಯ ಅಡಿಪಾಯವನ್ನು ರೂಪಿಸಲು ಕಬ್ಬಿಣದ ಕೋನಗಳನ್ನು ಬಳಸಲಾಗಿದೆ. ಕೃತಿಪುರದ ಘಾಟ್ ಗಂಗಾದಲ್ಲಿ ತೇಲುವ ಮನೆಯ ನಿರ್ಮಾಣ ಪ್ರಾರಂಭವಾಗಿತ್ತು" ಎಂದು ಕುಮಾರ್ ಹೇಳಿದರು.

"ಈ ವಿಶಿಷ್ಟ ಮನೆಯು ಪ್ರವಾಹ ಬಂದಾಗ ಅಲೆಗಳ ಮೇಲೆ ತೇಲುತ್ತದೆ. ಈ ಮನೆ ನೀರಿನಿಂದ ಬಾಧಿತವಾಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಅಲ್ಲದೇ, ಬಳಸಿದ ವಸ್ತುಗಳು ತುಂಬಾ ಹಗುರವಾಗಿದ್ದು, ಮನೆ ಸುಲಭವಾಗಿ ನೀರಿನ ಮೇಲೆ ತೇಲಬಹುದು." ಅಂತಾರೆ ಕುಮಾರ್.

Buxar Floating House Banks Of River Ganga Bihar Flood
ಪ್ರವಾಹದಲ್ಲೂ ಮುಳುಗಲ್ಲ ಈ ಮನೆ (ETV Bharat)

ಉದ್ದೇಶ ಮತ್ತು ವೆಚ್ಚ: ಎಂದಿಗೂ ಮುಳುಗದ ಪ್ರವಾಹ - ಸ್ಥಿತಿಸ್ಥಾಪಕ ಮನೆಯನ್ನು ನಿರ್ಮಿಸುವುದು ಕುಮಾರ್ ಅವರ ಆಲೋಚನೆಯಾಗಿತ್ತು. ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡುವುದರ ಜೊತೆಗೆ ಕೃಷಿ ಮತ್ತು ಜಾನುವಾರುಗಳಿಗೆ ಆಶ್ರಯ ನೀಡಲು ಈ ಮನೆಯಲ್ಲಿ ಸ್ಥಳವಿದೆ. ಅಲ್ಲದೇ, 900 ಚದರ ಅಡಿ ಪ್ರದೇಶದಲ್ಲಿ ಈ ತೇಲುವ ಮನೆಯನ್ನು ನಿರ್ಮಿಸಲು ಸುಮಾರು 6 ಲಕ್ಷ ರೂ. ಖರ್ಚಾಗುತ್ತದೆ.

"2017ರಲ್ಲಿ ನಾನು ಭಾರತದಿಂದ ಸ್ಕಾಟ್​ಲೆಂಡ್​ಗೆ ಬೈಕ್​ನಲ್ಲಿ ಪ್ರಯಾಣಿಸಿದ್ದೆ. ಈ ಅವಧಿಯಲ್ಲಿ ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ ಮತ್ತು ಅನೇಕ ಸಂಪ್ರದಾಯಗಳನ್ನು ನೋಡಿದ್ದೇನೆ. ಅನೇಕ ಸ್ಥಳಗಳಲ್ಲಿ ಸಂಕಷ್ಟದಲ್ಲಿರುವ ಮೀನುಗಾರರಿಗೆ ಸಹಾಯ ಮಾಡುವಾಗ ನಾನು ಅನೇಕ ಸ್ನೇಹಿತರನ್ನು ಸಂಪಾದಿಸಿದ್ದೆ. ಅವರೆಲ್ಲರೂ ಈಗ ಈ ಯೋಜನೆಯಲ್ಲಿ ಸಹಕರಿಸುತ್ತಿದ್ದಾರೆ" ಎಂದು ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : 'ಅಧಿಕಾರದಲ್ಲಿದ್ದಾಗ ಜಾತಿಗಣತಿ ನಡೆಸದ ಕಾಂಗ್ರೆಸ್​ ಮೀಸಲಾತಿ ವಿರೋಧಿ': ಮಾಯಾವತಿ ಆರೋಪ - Mayawati on reservation policy

ಬಕ್ಸಾರ್, ಬಿಹಾರ: ಪ್ರತಿ ವರ್ಷ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಿಂದ ಜನರನ್ನು ಪಾರು ಮಾಡುವ ಸಲುವಾಗಿ ಇಲ್ಲಿನ ಯುವಕನೊಬ್ಬ 2023 ರಲ್ಲಿ ಗಂಗಾ ನದಿಯ ದಡದಲ್ಲಿ ಇದೇ ಮೊದಲ ಬಾರಿಗೆ ತೇಲುವ ಮನೆಯೊಂದನ್ನು ನಿರ್ಮಿಸಿದ್ದಾನೆ. ಗಂಗಾ ನದಿಯ ನೀರಿನ ಮಟ್ಟವು ಗಂಟೆಗೆ ನಾಲ್ಕು ಸೆಂಟಿಮೀಟರ್ ದರದಲ್ಲಿ ಏರುತ್ತಿದೆ ಎಂದು ಕೇಂದ್ರ ಜಲ ಆಯೋಗದ ವರದಿ ಹೊರಬಂದ ನಂತರ ಯುವಕ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದಾನೆ. ನದಿ ನೀರಿನ ಮಟ್ಟ ಮುಂದಿನ ದಿನಗಳಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪದೇ ಪದೇ ನಾಶ, ಶಾಶ್ವತ ಪರಿಹಾರದ ಚಿಂತನೆ: ಅರ್ರಾ ನಿವಾಸಿ ಪ್ರಶಾಂತ್ ಕುಮಾರ್ ಎಂಬುವರೇ ಇಂಥದೊಂದು ವಿಶೇಷ ಮನೆಯನ್ನು ನಿರ್ಮಿಸಿರುವ ಯುವಕನಾಗಿದ್ದಾನೆ. ಪ್ರತಿ ವರ್ಷ ಪ್ರವಾಹದಿಂದ ತನ್ನ ಮನೆ ಪದೇ ಪದೇ ನಾಶವಾಗುತ್ತಿರುವುದರಿಂದ ಹತಾಶೆ ಮತ್ತು ಅಸಹಾಯಕನಾಗಿ ಕೊನೆಗೆ ನೀರಲ್ಲಿ ತೇಲುವ ಮನೆಯನ್ನು ನಿರ್ಮಿಸಲು ಆತ ನಿರ್ಧರಿಸಿದ್ದ.

Buxar Floating House Banks Of River Ganga Bihar Flood
ಮುಳುಗಲ್ಲ ಈ ಮನೆ, ನಿರಾಶ್ರಿತರಿಗೆ ಆಗುತ್ತೆ ಅನುಕೂಲ; ವೆಚ್ಚ ಎಷ್ಟು ಗೊತ್ತೆ? (ETV Bharat)

ತನ್ನ ಐಡಿಯಾವನ್ನು ಕಾರ್ಯರೂಪಕ್ಕೆ ತರಲು ಪ್ರಶಾಂತ್ ಕೆನಡಾ, ಜರ್ಮನಿ ಮತ್ತು ನೆದರ್​​ಲ್ಯಾಂಡ್​ನಲ್ಲಿ ವಾಸಿಸುವ ತನ್ನ ಸ್ನೇಹಿತರನ್ನು ಸಂಪರ್ಕಿಸಿದ್ದಾನೆ. ಅವರ ಸಹಾಯದಿಂದ ಆತ ಪ್ರವಾಹ ನೀರಿನ ಮೇಲೆ ತೇಲಬಲ್ಲ ಮನೆಯೊಂದನ್ನು ನಿರ್ಮಿಸಲು ಸಾಧ್ಯವಾಗಿದೆ.

ಸ್ನೇಹಿತರ ಸಹಾಯದಿಂದ ಮನೆ ನಿರ್ಮಿಸಿದ್ದು ಹೇಗೆ?: "ಪ್ರತಿ ವರ್ಷ ಇಲ್ಲಿನ ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರವಾಹದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಹೋಗುವಂತಾಗುತ್ತದೆ ಹಾಗೂ ಇದರಿಂದ ಅವರು ಪ್ರತಿವರ್ಷ 3 ರಿಂದ 4 ತಿಂಗಳು ಇದರಲ್ಲೇ ಕಳೆಯಬೇಕಾಗುತ್ತದೆ. ಹೀಗಾಗಿ ಪ್ರವಾಹ ನಿರೋಧಕ ಮತ್ತು ವಿದ್ಯುತ್ ಉತ್ಪಾದಿಸಲು ಸೌರ ಉಪಕರಣಗಳನ್ನು ಹೊಂದಿರುವ ಮನೆಯನ್ನು ನಿರ್ಮಿಸುವ ಆಲೋಚನೆ ನನ್ನಲ್ಲಿ ಬಂದಿತು. ನಾವು ಇದೇ ರೀತಿಯಲ್ಲಿ ಅಧಿಕ ಸಂಖ್ಯೆಯ ಮನೆಗಳನ್ನು ನಿರ್ಮಿಸಬಹುದು ಹಾಗೂ ಈ ಮೂಲಕ ಗ್ರಾಮದ ಸಂಪೂರ್ಣ ಜನಸಂಖ್ಯೆಗೆ ಪ್ರವಾಹದ ಸಮಯದಲ್ಲಿ ಸ್ಥಳಾವಕಾಶ ಕಲ್ಪಿಸಬಹುದು. ಇದು ನೀರಿನಲ್ಲಿ ಬದುಕುಳಿಯುವ ಪ್ರಯೋಗವಾಗಿದೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಸಮಸ್ಯೆ ಪರಿಹರಿಸಲು ನಾನು ಪ್ರಯತ್ನಿಸಿದ್ದೇನೆ" ಎಂದು ಕುಮಾರ್ ಹೇಳಿಕೊಂಡಿದ್ದಾರೆ.

Buxar Floating House Banks Of River Ganga Bihar Flood
ತೇಲುವ ಮನೆ ನಿರ್ಮಿಸಿದ ಯುವಕ (ETV Bharat)

ತೇಲುವ ಮನೆ ಕಟ್ಟಲು ಬಳಸಲಾದ ವಸ್ತುಗಳು: "ಈ ಮನೆಯನ್ನು ನಿರ್ಮಿಸಲು ಹಸುವಿನ ಸಗಣಿ, ಮಣ್ಣು ಮತ್ತು ಹುಲ್ಲನ್ನು ಬಳಸಲಾಗುತ್ತಿದೆ. ಜೊತೆಗೆ ಖಾಲಿ ಡ್ರಮ್ ಪೇಂಟ್, ಎಂಜಿನ್ ಆಯಿಲ್ ಮುಂತಾದ ವಸ್ತುಗಳನ್ನು ಬಳಸಲಾಗುತ್ತಿದೆ. ಮನೆಯ ಅಡಿಪಾಯವನ್ನು ರೂಪಿಸಲು ಕಬ್ಬಿಣದ ಕೋನಗಳನ್ನು ಬಳಸಲಾಗಿದೆ. ಕೃತಿಪುರದ ಘಾಟ್ ಗಂಗಾದಲ್ಲಿ ತೇಲುವ ಮನೆಯ ನಿರ್ಮಾಣ ಪ್ರಾರಂಭವಾಗಿತ್ತು" ಎಂದು ಕುಮಾರ್ ಹೇಳಿದರು.

"ಈ ವಿಶಿಷ್ಟ ಮನೆಯು ಪ್ರವಾಹ ಬಂದಾಗ ಅಲೆಗಳ ಮೇಲೆ ತೇಲುತ್ತದೆ. ಈ ಮನೆ ನೀರಿನಿಂದ ಬಾಧಿತವಾಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಅಲ್ಲದೇ, ಬಳಸಿದ ವಸ್ತುಗಳು ತುಂಬಾ ಹಗುರವಾಗಿದ್ದು, ಮನೆ ಸುಲಭವಾಗಿ ನೀರಿನ ಮೇಲೆ ತೇಲಬಹುದು." ಅಂತಾರೆ ಕುಮಾರ್.

Buxar Floating House Banks Of River Ganga Bihar Flood
ಪ್ರವಾಹದಲ್ಲೂ ಮುಳುಗಲ್ಲ ಈ ಮನೆ (ETV Bharat)

ಉದ್ದೇಶ ಮತ್ತು ವೆಚ್ಚ: ಎಂದಿಗೂ ಮುಳುಗದ ಪ್ರವಾಹ - ಸ್ಥಿತಿಸ್ಥಾಪಕ ಮನೆಯನ್ನು ನಿರ್ಮಿಸುವುದು ಕುಮಾರ್ ಅವರ ಆಲೋಚನೆಯಾಗಿತ್ತು. ಪ್ರವಾಹ ಪೀಡಿತ ಜನರಿಗೆ ಆಶ್ರಯ ನೀಡುವುದರ ಜೊತೆಗೆ ಕೃಷಿ ಮತ್ತು ಜಾನುವಾರುಗಳಿಗೆ ಆಶ್ರಯ ನೀಡಲು ಈ ಮನೆಯಲ್ಲಿ ಸ್ಥಳವಿದೆ. ಅಲ್ಲದೇ, 900 ಚದರ ಅಡಿ ಪ್ರದೇಶದಲ್ಲಿ ಈ ತೇಲುವ ಮನೆಯನ್ನು ನಿರ್ಮಿಸಲು ಸುಮಾರು 6 ಲಕ್ಷ ರೂ. ಖರ್ಚಾಗುತ್ತದೆ.

"2017ರಲ್ಲಿ ನಾನು ಭಾರತದಿಂದ ಸ್ಕಾಟ್​ಲೆಂಡ್​ಗೆ ಬೈಕ್​ನಲ್ಲಿ ಪ್ರಯಾಣಿಸಿದ್ದೆ. ಈ ಅವಧಿಯಲ್ಲಿ ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ ಮತ್ತು ಅನೇಕ ಸಂಪ್ರದಾಯಗಳನ್ನು ನೋಡಿದ್ದೇನೆ. ಅನೇಕ ಸ್ಥಳಗಳಲ್ಲಿ ಸಂಕಷ್ಟದಲ್ಲಿರುವ ಮೀನುಗಾರರಿಗೆ ಸಹಾಯ ಮಾಡುವಾಗ ನಾನು ಅನೇಕ ಸ್ನೇಹಿತರನ್ನು ಸಂಪಾದಿಸಿದ್ದೆ. ಅವರೆಲ್ಲರೂ ಈಗ ಈ ಯೋಜನೆಯಲ್ಲಿ ಸಹಕರಿಸುತ್ತಿದ್ದಾರೆ" ಎಂದು ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : 'ಅಧಿಕಾರದಲ್ಲಿದ್ದಾಗ ಜಾತಿಗಣತಿ ನಡೆಸದ ಕಾಂಗ್ರೆಸ್​ ಮೀಸಲಾತಿ ವಿರೋಧಿ': ಮಾಯಾವತಿ ಆರೋಪ - Mayawati on reservation policy

Last Updated : 36 seconds ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.