ETV Bharat / bharat

34 ವರ್ಷದ ಹಿಂದೆ 20 ರೂ ಲಂಚ; ಈಗ ಕಾನ್ಸ್​ಟೇಬಲ್​ ಬಂಧನಕ್ಕೆ ಕೋರ್ಟ್​ ಆದೇಶ - Court Orders Arrest of Constable

author img

By ETV Bharat Karnataka Team

Published : Sep 6, 2024, 5:47 PM IST

ಈ ಪ್ರಕರಣದ ವಿಚಾರಣೆ ನಡೆಸಿದ ಸಹರ್ಸದ ವಿಶೇಷ ನಿರ್ವಹಣಾ ನ್ಯಾಯಾಲಯ 20 ರೂ. ಲಂಚ ಪಡೆದ ಆರೋಪದ ಮೇಲೆ ಬಂಧಿಸುವಂತೆ ಆದೇಶಿಸಿದೆ.

Bihar Court Orders Arrest of Constable for Taking Rs 20 Bribe in a 34 Year Old Case
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಪಾಟ್ನಾ : 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಪೊಲೀಸ್​ ಕಾನ್ಸ್​​ಟೇಬಲ್​​​ ಬಂಧಿಸುವಂತೆ ಬಿಹಾರ ಕೋರ್ಟ್​ ಆದೇಶಿಸಿದೆ. ಸಹರ್ಸ ಜಿಲ್ಲೆಯಲ್ಲಿ 34 ವರ್ಷದ ಹಿಂದೆ ಕಾನ್ಸ್​​ಟೇಬಲ್​ ಮೇಲೆ ಲಂಚ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಹರ್ಸದ ವಿಶೇಷ ನಿರ್ವಹಣಾ ನ್ಯಾಯಾಲಯ 20 ರೂ ಲಂಚ ಪಡೆದ ಆರೋಪದ ಮೇಲೆ ಬಂಧಿಸುವಂತೆ ಆದೇಶಿಸಿದೆ.

ಏನಿದು ಪ್ರಕರಣ?: 1990ರ ಮೇ 6ರಂದು ಹವಿಲ್ದಾರ್​ ಸುರೇಶ್​ ಪ್ರಸಾದ್​ ಸಹರ್ಸ ರೈಲ್ವೆ ನಿಲ್ದಾಣದಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಬಳಿ 20 ರೂ ಲಂಚ ಪಡೆದಿದ್ದರು. ಈ ವೇಳೆ, ಪೊಲೀಸ್​ ಯೂನಿಫಾರ್ಮ್​ನಲ್ಲಿ ಕೆಲಸ ನಿರ್ವಹಿಸುವಾಗಲೇ 20 ರೂ ಹಣ ಪಡೆದ ಹಿನ್ನೆಲೆ ಸಹರ್ಸ ರೈಲ್ವೆ ನಿಲ್ದಾಣದ ಅಧಿಕಾರಿಗಳ ಜೊತೆಗಿನ ಪೊಲೀಸ್​ ತಂಡ ಅವರನ್ನು ವಶಕ್ಕೆ ಪಡೆದಿತ್ತು.

ಈ ವೇಳೆ ಹವಿಲ್ದಾರ್​ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್​ ತಾವು ಸಹರ್ಸನಲ್ಲಿ ಮಹೇಶ್ಕುಂತ್​ನಲ್ಲಿನ ವಿಳಾಸ ನೀಡಿದ್ದರು. ಆದರೆ, ಅವರು ಲಖಿಸರೈ ಜಿಲ್ಲೆಯ ಬಿಜೋಯ್​ ಗ್ರಾಮದಲ್ಲಿ ನೆಲೆಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, ಸುರೇಶ್​ ಕೋರ್ಟ್​​ಗೆ ಹಾಜರಾಗಿರಲಿಲ್ಲ, ಅಲ್ಲದೇ ತಪ್ಪಾದ ವಿಳಾಸದ ಹಿನ್ನೆಲೆ ಆತನ ಪತ್ತೆ ಕೂಡ ಸಾಧ್ಯವಾಗಿರಲಿಲ್ಲ.

1999ರಲ್ಲಿ ಬಂಧನದ ವಾರಂಟ್​​ ಜಾರಿ: ಸಮನ್ಸ್​ ಬಳಿಕ ಸುರೇಶ್​ ಕೋರ್ಟ್​​ ಮುಂದೆ ಹಾಜರಾಗಲಿಲ್ಲ. 1999ರಲ್ಲಿ ಆತನ ಜಾಮೀನು ಬಾಂಡ್​ ಅನ್ನು ಕೋರ್ಟ್​ ರದ್ದು ಮಾಡಿ, ಬಂಧನದ ವಾರಂಟ್​​ ಜಾರಿ ಮಾಡಿತ್ತು. ಈ ವೇಳೆ, ಕೂಡ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬಂಧಿಸಲು ಆಗಿರಲಿಲ್ಲ. ಸೇವಾ ಪುಸ್ತಕದ ತನಿಖೆ ವೇಳೆ ಕಾನ್ಸ್​ಟೇಬಲ್​ ತಪ್ಪಾದ ವಿಳಾಸ ನೀಡಿದ್ದು ಬಯಲಾಗಿತ್ತು.

ಕಡೆಗೆ ಕಾನ್ಸ್​ಟೇಬಲ್​ ರಹಸ್ಯ ಬಯಲಾಗಿದೆ. ಸಹರ್ಸದ ವಿಶೇಷ ಮೇಲ್ವಿಚಾರಣಾ ನ್ಯಾಯಾಧೀಶರಾದ ಸುದೇಶ ಶ್ರೀವಾತ್ಸವ್​​ ಬಿಹಾರ್​ ಡಿಜಿಪಿಗೆ ಪತ್ರ ಬರೆದು ನಾಪತ್ತೆಯಾಗಿರುವ ಕಾನ್ಸ್​ಟೇಬಲ್​ ಬಂಧಿಸಿ, ಕೋರ್ಟ್​​ಗೆ ಹಾಜರು ಪಡಿಸುವಂತೆ ಸೂಚಿಸಿದರು. 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಆರೋಪದಲ್ಲಿ ಈ ಬಂಧನ ಮಾಡಲಾಗಿದೆ. ನ್ಯಾಯಾಲಯ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಬಲವಾದ ಸಂದೇಶ ನೀಡಿದೆ. ಆದರೆ, ಪ್ರಕರಣವನ್ನು ಇಷ್ಟು ವರ್ಷ ಎಳೆದ ಕುರಿತು ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ: ಶಿವಸೇನೆ UBT ಮಾಜಿ ಕಾರ್ಪೊರೇಟರ್ ಘೋಸಾಲ್ಕರ್ ಹತ್ಯೆ: ತನಿಖೆಯ ಹೊಣೆ ಸಿಬಿಐಗೆ ವರ್ಗಾವಣೆ

ಪಾಟ್ನಾ : 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಪೊಲೀಸ್​ ಕಾನ್ಸ್​​ಟೇಬಲ್​​​ ಬಂಧಿಸುವಂತೆ ಬಿಹಾರ ಕೋರ್ಟ್​ ಆದೇಶಿಸಿದೆ. ಸಹರ್ಸ ಜಿಲ್ಲೆಯಲ್ಲಿ 34 ವರ್ಷದ ಹಿಂದೆ ಕಾನ್ಸ್​​ಟೇಬಲ್​ ಮೇಲೆ ಲಂಚ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಹರ್ಸದ ವಿಶೇಷ ನಿರ್ವಹಣಾ ನ್ಯಾಯಾಲಯ 20 ರೂ ಲಂಚ ಪಡೆದ ಆರೋಪದ ಮೇಲೆ ಬಂಧಿಸುವಂತೆ ಆದೇಶಿಸಿದೆ.

ಏನಿದು ಪ್ರಕರಣ?: 1990ರ ಮೇ 6ರಂದು ಹವಿಲ್ದಾರ್​ ಸುರೇಶ್​ ಪ್ರಸಾದ್​ ಸಹರ್ಸ ರೈಲ್ವೆ ನಿಲ್ದಾಣದಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಬಳಿ 20 ರೂ ಲಂಚ ಪಡೆದಿದ್ದರು. ಈ ವೇಳೆ, ಪೊಲೀಸ್​ ಯೂನಿಫಾರ್ಮ್​ನಲ್ಲಿ ಕೆಲಸ ನಿರ್ವಹಿಸುವಾಗಲೇ 20 ರೂ ಹಣ ಪಡೆದ ಹಿನ್ನೆಲೆ ಸಹರ್ಸ ರೈಲ್ವೆ ನಿಲ್ದಾಣದ ಅಧಿಕಾರಿಗಳ ಜೊತೆಗಿನ ಪೊಲೀಸ್​ ತಂಡ ಅವರನ್ನು ವಶಕ್ಕೆ ಪಡೆದಿತ್ತು.

ಈ ವೇಳೆ ಹವಿಲ್ದಾರ್​ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್​ ತಾವು ಸಹರ್ಸನಲ್ಲಿ ಮಹೇಶ್ಕುಂತ್​ನಲ್ಲಿನ ವಿಳಾಸ ನೀಡಿದ್ದರು. ಆದರೆ, ಅವರು ಲಖಿಸರೈ ಜಿಲ್ಲೆಯ ಬಿಜೋಯ್​ ಗ್ರಾಮದಲ್ಲಿ ನೆಲೆಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, ಸುರೇಶ್​ ಕೋರ್ಟ್​​ಗೆ ಹಾಜರಾಗಿರಲಿಲ್ಲ, ಅಲ್ಲದೇ ತಪ್ಪಾದ ವಿಳಾಸದ ಹಿನ್ನೆಲೆ ಆತನ ಪತ್ತೆ ಕೂಡ ಸಾಧ್ಯವಾಗಿರಲಿಲ್ಲ.

1999ರಲ್ಲಿ ಬಂಧನದ ವಾರಂಟ್​​ ಜಾರಿ: ಸಮನ್ಸ್​ ಬಳಿಕ ಸುರೇಶ್​ ಕೋರ್ಟ್​​ ಮುಂದೆ ಹಾಜರಾಗಲಿಲ್ಲ. 1999ರಲ್ಲಿ ಆತನ ಜಾಮೀನು ಬಾಂಡ್​ ಅನ್ನು ಕೋರ್ಟ್​ ರದ್ದು ಮಾಡಿ, ಬಂಧನದ ವಾರಂಟ್​​ ಜಾರಿ ಮಾಡಿತ್ತು. ಈ ವೇಳೆ, ಕೂಡ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬಂಧಿಸಲು ಆಗಿರಲಿಲ್ಲ. ಸೇವಾ ಪುಸ್ತಕದ ತನಿಖೆ ವೇಳೆ ಕಾನ್ಸ್​ಟೇಬಲ್​ ತಪ್ಪಾದ ವಿಳಾಸ ನೀಡಿದ್ದು ಬಯಲಾಗಿತ್ತು.

ಕಡೆಗೆ ಕಾನ್ಸ್​ಟೇಬಲ್​ ರಹಸ್ಯ ಬಯಲಾಗಿದೆ. ಸಹರ್ಸದ ವಿಶೇಷ ಮೇಲ್ವಿಚಾರಣಾ ನ್ಯಾಯಾಧೀಶರಾದ ಸುದೇಶ ಶ್ರೀವಾತ್ಸವ್​​ ಬಿಹಾರ್​ ಡಿಜಿಪಿಗೆ ಪತ್ರ ಬರೆದು ನಾಪತ್ತೆಯಾಗಿರುವ ಕಾನ್ಸ್​ಟೇಬಲ್​ ಬಂಧಿಸಿ, ಕೋರ್ಟ್​​ಗೆ ಹಾಜರು ಪಡಿಸುವಂತೆ ಸೂಚಿಸಿದರು. 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಆರೋಪದಲ್ಲಿ ಈ ಬಂಧನ ಮಾಡಲಾಗಿದೆ. ನ್ಯಾಯಾಲಯ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಬಲವಾದ ಸಂದೇಶ ನೀಡಿದೆ. ಆದರೆ, ಪ್ರಕರಣವನ್ನು ಇಷ್ಟು ವರ್ಷ ಎಳೆದ ಕುರಿತು ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ: ಶಿವಸೇನೆ UBT ಮಾಜಿ ಕಾರ್ಪೊರೇಟರ್ ಘೋಸಾಲ್ಕರ್ ಹತ್ಯೆ: ತನಿಖೆಯ ಹೊಣೆ ಸಿಬಿಐಗೆ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.