ETV Bharat / bharat

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧಾ ಕಣದಲ್ಲಿ - Andhra Pradesh Assembly polls

ಈ ಬಾರಿಯ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ. ಈ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಯಾರು ಮತ್ತು ಅವರ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ.

author img

By ETV Bharat Karnataka Team

Published : Apr 25, 2024, 2:05 PM IST

Childrens of Six former CMs in fray in Andhra Pradesh Assembly polls
Childrens of Six former CMs in fray in Andhra Pradesh Assembly polls

ಹೈದರಾಬಾದ್ : ಆಂಧ್ರಪ್ರದೇಶದ ಆರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ
ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ

ವೈ.ಎಸ್. ಜಗನ್ ಮೋಹನ್ ರೆಡ್ಡಿ : ಹಾಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರು ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪುತ್ರರಾಗಿದ್ದಾರೆ. ರಾಜಶೇಖರ್ ರೆಡ್ಡಿ 1978 ಮತ್ತು 2009 ರ ನಡುವೆ ವೈಎಸ್ಆರ್ ಕುಟುಂಬದ ಭದ್ರಕೋಟೆಯಾದ ಪುಲಿವೆಂದುಲ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ನಂತರ ಅವರು ಸೆಪ್ಟೆಂಬರ್ 2, 2009 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು.

ನಾರಾ ಲೋಕೇಶ್ : ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು 2019 ರಲ್ಲಿ ಮೊದಲ ಬಾರಿಗೆ ಮಂಗಳಗಿರಿಯಿಂದ ಸ್ಪರ್ಧಿಸಿ ಸೋತಿದ್ದರು. ಈಗ ಎರಡನೇ ಬಾರಿಗೆ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಈ ಬಾರಿ ಲೋಕೇಶ್​ಗೆ ವೈಎಸ್​ಆರ್​ಸಿಪಿಯ ಎಂ. ಲಾವಣ್ಯ ನೇರ ಎದುರಾಳಿಯಾಗಿದ್ದಾರೆ. ಲೋಕೇಶ್ ಅವರು 1982 ರಲ್ಲಿ ಟಿಡಿಪಿ ಸ್ಥಾಪಿಸಿದ ಮಾಜಿ ಸಿಎಂ ಮತ್ತು ಟಾಲಿವುಡ್ ದಂತಕಥೆ ಎನ್ ಟಿ ರಾಮರಾವ್ (ಎನ್ ಟಿಆರ್) ಅವರ ಮೊಮ್ಮಗ.

ಎನ್ ಬಾಲಕೃಷ್ಣ: ಟಾಲಿವುಡ್ ನಟ ಮತ್ತು ಮಾಜಿ ಮುಖ್ಯಮಂತ್ರಿ ಎನ್​ಟಿಆರ್ ಅವರ ಪುತ್ರ ಹಿಂದೂಪುರ ಶಾಸಕ ಎನ್ ಬಾಲಕೃಷ್ಣ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎನ್​ಟಿಆರ್ ಕುಟುಂಬದ ಭದ್ರಕೋಟೆಯಾಗಿರುವ ಹಿಂದೂಪುರವನ್ನು ಈ ಹಿಂದೆ ರಾಮರಾವ್ ಮತ್ತು ಅವರ ಹಿರಿಯ ಮಗ ಎನ್ ಹರಿಕೃಷ್ಣ ಪ್ರತಿನಿಧಿಸಿದ್ದರು. 2014 ಮತ್ತು 2019ರಲ್ಲಿ ಹಿಂದೂಪುರ ಕ್ಷೇತ್ರದಿಂದ ಗೆದ್ದಿದ್ದ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ
ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ

ಎನ್ ಮನೋಹರ್ : ಟಿಡಿಪಿ, ಜನಸೇನಾ ಮತ್ತು ಬಿಜೆಪಿಯನ್ನು ಒಳಗೊಂಡ ಎನ್​ಡಿಎ ಪರವಾಗಿ ತೆನಾಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜನಸೇನಾ ನಾಯಕ ಎನ್ ಮನೋಹರ್ ಅವರು ಮಾಜಿ ಸಿಎಂ ಎನ್ ಭಾಸ್ಕರ್ ರಾವ್ ಅವರ ಪುತ್ರ.

ಎನ್. ರಾಮ್ ಕುಮಾರ್ ರೆಡ್ಡಿ : ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಅವರ ಪುತ್ರ ಎನ್. ರಾಮ್ ಕುಮಾರ್ ರೆಡ್ಡಿ ವೆಂಕಟಗಿರಿ ಕ್ಷೇತ್ರದಿಂದ ವೈಎಸ್ಆರ್​ಸಿಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದರೆ, ಮತ್ತೋರ್ವ ಮಾಜಿ ಸಿಎಂ ಕೆ. ವಿಜಯಭಾಸ್ಕರ್ ರೆಡ್ಡಿ ಅವರ ಪುತ್ರ ಕೆ. ಸೂರ್ಯ ಪ್ರಕಾಶ್ ರೆಡ್ಡಿ ಧೋನ್ ಕ್ಷೇತ್ರದಿಂದ ಟಿಡಿಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ವೈ.ಎಸ್​. ಶರ್ಮಿಳಾ : ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪುತ್ರಿಯಾಗಿರುವ ಶರ್ಮಿಳಾ ಅವರು ಕಡಪ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. (ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಶರ್ಮಿಳಾ ಇವರಿಬ್ಬರೂ ವೈಎಸ್ಆರ್ ಅವರ ಮಕ್ಕಳು)

ಪುರಂದೇಶ್ವರಿ: ರಾಜಮಹೇಂದ್ರವರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಅವರು ಮಾಜಿ ಸಿಎಂ ಎನ್​ಟಿಆರ್ ಅವರ ಪುತ್ರಿ. (ಬಾಲಕೃಷ್ಣ ಮತ್ತು ಪುರಂದೇಶ್ವರಿ ಇವರಿಬ್ಬರೂ ಎನ್​ಟಿಆರ್ ಅವರ ಮಕ್ಕಳು. ಲೋಕೇಶ್ ಎನ್​ಟಿಆರ್ ಅವರ ಮೊಮ್ಮಗ)

ಇದನ್ನೂ ಓದಿ : 'ಪಿತ್ರಾರ್ಜಿತ ತೆರಿಗೆ' ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್‌: 'ನನ್ನ ಮಾತು ತಿರುಚಿದ್ದು ದುರದೃಷ್ಟಕರ' ಎಂದ ಪಿತ್ರೋಡಾ - Inheritance Tax

ಹೈದರಾಬಾದ್ : ಆಂಧ್ರಪ್ರದೇಶದ ಆರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ
ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ

ವೈ.ಎಸ್. ಜಗನ್ ಮೋಹನ್ ರೆಡ್ಡಿ : ಹಾಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರು ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪುತ್ರರಾಗಿದ್ದಾರೆ. ರಾಜಶೇಖರ್ ರೆಡ್ಡಿ 1978 ಮತ್ತು 2009 ರ ನಡುವೆ ವೈಎಸ್ಆರ್ ಕುಟುಂಬದ ಭದ್ರಕೋಟೆಯಾದ ಪುಲಿವೆಂದುಲ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ನಂತರ ಅವರು ಸೆಪ್ಟೆಂಬರ್ 2, 2009 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು.

ನಾರಾ ಲೋಕೇಶ್ : ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು 2019 ರಲ್ಲಿ ಮೊದಲ ಬಾರಿಗೆ ಮಂಗಳಗಿರಿಯಿಂದ ಸ್ಪರ್ಧಿಸಿ ಸೋತಿದ್ದರು. ಈಗ ಎರಡನೇ ಬಾರಿಗೆ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಈ ಬಾರಿ ಲೋಕೇಶ್​ಗೆ ವೈಎಸ್​ಆರ್​ಸಿಪಿಯ ಎಂ. ಲಾವಣ್ಯ ನೇರ ಎದುರಾಳಿಯಾಗಿದ್ದಾರೆ. ಲೋಕೇಶ್ ಅವರು 1982 ರಲ್ಲಿ ಟಿಡಿಪಿ ಸ್ಥಾಪಿಸಿದ ಮಾಜಿ ಸಿಎಂ ಮತ್ತು ಟಾಲಿವುಡ್ ದಂತಕಥೆ ಎನ್ ಟಿ ರಾಮರಾವ್ (ಎನ್ ಟಿಆರ್) ಅವರ ಮೊಮ್ಮಗ.

ಎನ್ ಬಾಲಕೃಷ್ಣ: ಟಾಲಿವುಡ್ ನಟ ಮತ್ತು ಮಾಜಿ ಮುಖ್ಯಮಂತ್ರಿ ಎನ್​ಟಿಆರ್ ಅವರ ಪುತ್ರ ಹಿಂದೂಪುರ ಶಾಸಕ ಎನ್ ಬಾಲಕೃಷ್ಣ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎನ್​ಟಿಆರ್ ಕುಟುಂಬದ ಭದ್ರಕೋಟೆಯಾಗಿರುವ ಹಿಂದೂಪುರವನ್ನು ಈ ಹಿಂದೆ ರಾಮರಾವ್ ಮತ್ತು ಅವರ ಹಿರಿಯ ಮಗ ಎನ್ ಹರಿಕೃಷ್ಣ ಪ್ರತಿನಿಧಿಸಿದ್ದರು. 2014 ಮತ್ತು 2019ರಲ್ಲಿ ಹಿಂದೂಪುರ ಕ್ಷೇತ್ರದಿಂದ ಗೆದ್ದಿದ್ದ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ
ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿ

ಎನ್ ಮನೋಹರ್ : ಟಿಡಿಪಿ, ಜನಸೇನಾ ಮತ್ತು ಬಿಜೆಪಿಯನ್ನು ಒಳಗೊಂಡ ಎನ್​ಡಿಎ ಪರವಾಗಿ ತೆನಾಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜನಸೇನಾ ನಾಯಕ ಎನ್ ಮನೋಹರ್ ಅವರು ಮಾಜಿ ಸಿಎಂ ಎನ್ ಭಾಸ್ಕರ್ ರಾವ್ ಅವರ ಪುತ್ರ.

ಎನ್. ರಾಮ್ ಕುಮಾರ್ ರೆಡ್ಡಿ : ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಅವರ ಪುತ್ರ ಎನ್. ರಾಮ್ ಕುಮಾರ್ ರೆಡ್ಡಿ ವೆಂಕಟಗಿರಿ ಕ್ಷೇತ್ರದಿಂದ ವೈಎಸ್ಆರ್​ಸಿಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದರೆ, ಮತ್ತೋರ್ವ ಮಾಜಿ ಸಿಎಂ ಕೆ. ವಿಜಯಭಾಸ್ಕರ್ ರೆಡ್ಡಿ ಅವರ ಪುತ್ರ ಕೆ. ಸೂರ್ಯ ಪ್ರಕಾಶ್ ರೆಡ್ಡಿ ಧೋನ್ ಕ್ಷೇತ್ರದಿಂದ ಟಿಡಿಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ವೈ.ಎಸ್​. ಶರ್ಮಿಳಾ : ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪುತ್ರಿಯಾಗಿರುವ ಶರ್ಮಿಳಾ ಅವರು ಕಡಪ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. (ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಶರ್ಮಿಳಾ ಇವರಿಬ್ಬರೂ ವೈಎಸ್ಆರ್ ಅವರ ಮಕ್ಕಳು)

ಪುರಂದೇಶ್ವರಿ: ರಾಜಮಹೇಂದ್ರವರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಅವರು ಮಾಜಿ ಸಿಎಂ ಎನ್​ಟಿಆರ್ ಅವರ ಪುತ್ರಿ. (ಬಾಲಕೃಷ್ಣ ಮತ್ತು ಪುರಂದೇಶ್ವರಿ ಇವರಿಬ್ಬರೂ ಎನ್​ಟಿಆರ್ ಅವರ ಮಕ್ಕಳು. ಲೋಕೇಶ್ ಎನ್​ಟಿಆರ್ ಅವರ ಮೊಮ್ಮಗ)

ಇದನ್ನೂ ಓದಿ : 'ಪಿತ್ರಾರ್ಜಿತ ತೆರಿಗೆ' ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್‌: 'ನನ್ನ ಮಾತು ತಿರುಚಿದ್ದು ದುರದೃಷ್ಟಕರ' ಎಂದ ಪಿತ್ರೋಡಾ - Inheritance Tax

ETV Bharat Logo

Copyright © 2024 Ushodaya Enterprises Pvt. Ltd., All Rights Reserved.