ಪ್ರವಾಹದ ನೀರಲ್ಲಿ ಹಾವುಗಳ ಪರದಾಟ... ಗಂಗಾವತಿಯಲ್ಲಿ ವಿವಿಧ ಹಾವುಗಳನ್ನು ರಕ್ಷಿಸಿದ ಸ್ನೇಕ್ ಶಿವು
ತುಂಗಭದ್ರಾ ನದಿ ನೀರಿನ ಪ್ರವಾಹಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರದಲ್ಲಿ ಪರದಾಡುತ್ತಿದ್ದ ಹಾವುಗಳನ್ನು ಉರಗಪ್ರೇಮಿ ಸ್ನೇಕ್ ಶಿವು ರಕ್ಷಣೆ ಮಾಡಿದ್ದಾರೆ. ನೀರಿನ ರಭಸಕ್ಕೆ ಪರದಾಡುತ್ತಿದ್ದ ಹೆಬ್ಬಾವು ಸೇರಿ ನಾಲ್ಕೈದು ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ನೀರಿನ ರಭಸಕ್ಕೆ ಹೊರ ಬರುತ್ತಿದ್ದ ಹಾವುಗಳನ್ನು ಸ್ನೇಕ್ ಶಿವು ರಕ್ಷಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ನದಿ ಪ್ರವಾಹದ ಹಿನ್ನೆಲೆಯಲ್ಲಿ ಈ ಸರಿಸೃಪಗಳು ಎಲ್ಲೆಂದರಲ್ಲಿ ಕಂಡು ಬರುತ್ತಿವೆ.
Last Updated : Aug 13, 2019, 1:02 PM IST