ಮಲೆನಾಡಲ್ಲಿ ಭೂ ಕುಸಿತಕ್ಕೆ ಕಾರಣ ಏನು? ಕಂಡು ಹಿಡಿಯಲು ಬಂದಿದೆ ವಿಜ್ಞಾನಿಗಳ ತಂಡ
ಈ ವರ್ಷದ ಮಹಾಮಳೆಗೆ ರಾಜ್ಯದಲ್ಲೇ ಅತಿ ಹೆಚ್ಚು ಭೂ ಕುಸಿತ ಕಂಡಿರುವ ಜಿಲ್ಲೆ ಚಿಕ್ಕಮಗಳೂರು. ಆದ್ರೆ ಈವರೆಗೂ ಅಷ್ಟು ದೊಡ್ಡ ಪ್ರಮಾಣದ ಭೂ ಕುಸಿತಕ್ಕೆ ನಿಖರವಾದ ಕಾರಣವೇನು ಅನ್ನೋದು ಮಾತ್ರ ನಿಗೂಢವಾಗಿದೆ. ಗುಟ್ಟಾಗಿ ಉಳಿದಿರುವ ಪ್ರಕೃತಿಯ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳ ತಂಡವೊಂದು ಮಲೆನಾಡಿಗೆ ಹೆಜ್ಜೆ ಹಾಕಿದೆ.