thumbnail

By

Published : Mar 6, 2022, 8:30 PM IST

Updated : Feb 3, 2023, 8:18 PM IST

ETV Bharat / Videos

ಉಕ್ರೇನ್​ನಿಂದ ಸುರಕ್ಷಿತವಾಗಿ ಬಂದಿಳಿದ ಕೊಡಗಿನ ಕುವರಿ ಅಕ್ಷಿತಾ

ಕೊಡಗು: ಉಕ್ರೇನ್​ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದ ಕೊಡಗಿನ ವಿದ್ಯಾರ್ಥಿನಿ ಸುರಕ್ಷಿತವಾಗಿ ಆಗಮಿಸಿದ್ದಾರೆ. ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ಅಕ್ಷಿತಾ ಅಕ್ಕಮ್ಮ ತಾಯ್ನಾಡಿಗೆ ವಾಪ್ಪಸಾಗಿದ್ದಾರೆ. ಐಮುಡಿಯಂಡ ರಮೇಶ್​ರ ಪುತ್ರಿ ಅಕ್ಷಿತಾ ಅಕ್ಕಮ್ಮ ಕಾರ್ಖೀವ್​ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಸುರಕ್ಷಿತವಾಗಿ ಮನೆಗೆ ತಲುಪಿದ್ದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು. ಅಕ್ಷಿತಾ ಮಾತನಾಡಿ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಉಕ್ರೇನ್​ನಿಂದ ಮನೆ ತಲುಪುವವರೆಗೂ ಸಂಪರ್ಕದಲ್ಲೇ ಇದ್ದು, ಧೈರ್ಯ ತುಂಬುತ್ತಿದ್ದರು ಎಂದು ಹೇಳಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.