thumbnail

By

Published : Apr 4, 2022, 6:04 PM IST

Updated : Feb 3, 2023, 8:22 PM IST

ETV Bharat / Videos

ರಾಹುಲ್ ಗಾಂಧಿ ಪ್ರವಾಸಕ್ಕೆ ಬಂದ್ರೆ ಅದರ ಖರ್ಚನ್ನು ನಾನೇ ಭರಿಸುವೆ: ಸಚಿವ ಈಶ್ವರಪ್ಪ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಲಿಟ್ಟ ಕಡೆ ಕಾಂಗ್ರೆಸ್ ಸರ್ವನಾಶವಾಗಿದೆ. ರಾಜ್ಯಕ್ಕೆ ಬಂದ್ರೂ ಅದೇ ಗತಿಯಾಗಲಿದೆ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. ಅಂಕೋಲಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದೆ ಅವರು ರಾಜ್ಯ ಪ್ರವಾಸಕ್ಕೆ ಬರ್ತಾರೆ ಅಂದ್ರೆ ರಾಹುಲ್ ಗಾಂಧಿ ಹೋಗಿ ಬರುವ ಖರ್ಚು-ವೆಚ್ಚವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಅಮಿತ್ ಶಾ ರಾಜ್ಯ ಪ್ರವಾಸದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಜತೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಕುರಿತು ಮಾತನಾಡಿದ ಅವರು, ಕಾದು ನೋಡಿ ಎಂದರು. ಅಲ್ಲದೆ, ಈಗ ಕಾಂಗ್ರೆಸ್​​ನವರಿಗೆ ಢವ ಢವ ಶುರುವಾಗಿದೆ. ಅಮಿತ್ ಶಾ ಬರ್ಬೇಕಿದ್ರೆ ರಾಷ್ಟ್ರದ್ರೋಹಿಗಳ ವಿರುದ್ಧ ಬಾಂಬ್ ತೆಗೆದುಕೊಂಡೇ ಬಂದಿದ್ದಾರೆ ಎಂದರು.
Last Updated : Feb 3, 2023, 8:22 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.