ಬಿಜೆಪಿಯವರು ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ - Former minister Kimmane Ratnakar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13978589-thumbnail-3x2-sanju.jpg)
ದೇಶ ಉಳಿಬೇಕು, ಸಮಗ್ರತೆ ಕಾಪಾಡಬೇಕು ಅಂದ್ರೆ ಬಿಜೆಪಿ ಸಿದ್ಧಾಂತ ಸೋಲಬೇಕು. ಬಿಜೆಪಿಯವರು ಈ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಜನರ ಮನಸ್ಸಿನ ಭಾವನೆಗಳನ್ನ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲಾ ಜಾತಿ-ಧರ್ಮದ ಜನ ಒಟ್ಟಾಗಿ ಬಾಳದಂತೆ ಬಿಜೆಪಿ ಬೆಂಕಿ ಹಚ್ಚಿದ್ದಾರೆ. ಅವರು ಜಾತಿ-ಧರ್ಮದ ಆಧಾರದ ಮೇಲೆ ವೋಟು ಕೇಳುತ್ತಿದ್ದಾರೆ. ಅವರು ಕಾರ್ಯಕ್ರಮದ ಮೂಲಕ ಎಂದೂ ವೋಟು ಕೇಳಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಹೇಳಿದರು.