ದೀಪಾವಳಿ ಹಬ್ಬಕ್ಕೆ ರೈತರಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್.. ಧಾನ್ಯಗಳ ಬೆಂಬಲ ದರದಲ್ಲಿ ₹ 325 ಹೆಚ್ಚಳ - Cabinet Committee on Economic Affairs
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4848588-thumbnail-3x2-wheat.jpg)
ಕೇಂದ್ರ ಸರ್ಕಾರವು ರೈತರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಗೋಧಿ ಮತ್ತು ದ್ವಿದಳ ಧಾನ್ಯಗಳ ಬೆಂಬಲ ಬೆಲೆಯಲ್ಲಿ ಕ್ವಿಂಟಲ್ಗೆ 325 ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. 2019-20ನೇ ಕೃಷಿ ವರ್ಷದಲ್ಲಿ ಗೋಧಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕ್ವಿಂಟಲ್ಗೆ 85 ರೂ. ಏರಿಕೆ ಮಾಡಿದೆ. ಇದರ ಜೊತೆಗೆ ದಿದ್ವಳ ಧಾನ್ಯಗಳಾದ ಗೋಧಿ, ಕಡಲೆ, ಹೆಸರು ಹಾಗೂ ಎಣ್ಣೆ ಬೀಜ ಕುಸುಬೆಯ ಬೆಂಬಲ ಬೆಲೆ ಹೆಚ್ಚಿಸಲು ಸಹಮತಿ ನೀಡಿದೆ.