ಕುದಿಯುವ ಸಾಂಬಾರ್ನಲ್ಲಿ ಬಿದ್ದ ಮಗು... ಪಾಲಕರ ನಿರ್ಲಕ್ಷಕ್ಕೆ ಬಲಿಯಾಯ್ತು ಕಂದಮ್ಮ!? - ಸಂಗಾರೆಡ್ಡಿಯಲ್ಲಿ ಸಾಂಬಾರ್ನಲ್ಲಿ ಬಿದ್ದು ಮಗು ಸಾವು
🎬 Watch Now: Feature Video
ಆ ಒಂದು ನಿರ್ಲಕ್ಷ್ಯ ಬಾಲಕನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಮಕ್ಕಳ ಬಗ್ಗೆ ಜಾಗೃತರಾಗಿರಬೇಕಾಗಿದ್ದ ಪೋಷಕರು ಮೈಮರೆತರೇ ಏನಾಗುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಂಗಾರೆಡ್ಡಿ ಜಿಲ್ಲೆಯ ಸಿರಿಪಲ್ಲಿ ಗ್ರಾಮದ ನಿವಾಸಿ ಸುರೇಶ್ ತನ್ನ ಮೂರು ವರ್ಷದ ಮಗ ಹರೀಶ್ ಜೊತೆ ರಂಗಾರೆಡ್ಡಿ ಜಿಲ್ಲೆಯ ಸರ್ದಾರಣಗರ್ ಗ್ರಾಮದ ಬಂಧುಗಳ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅಲ್ಲಿ ಹರೀಶ್ ಮೇಲೆ ಬಿಸಿ ಬಿಸಿ ಸಾಂಬಾರ್ ಬಿದ್ದಿದೆ. ತೀವ್ರ ಗಾಯಗೊಂಡಿದ್ದ ಹರೀಶ್ನನ್ನು ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.