ETV Bharat / sukhibhava

ದೀಪಾವಳಿ ಬಳಿಕ ಮತ್ತಷ್ಟು ಮಬ್ಬಾಯ್ತು ದೆಹಲಿ; ವಾಯು ಗುಣಮಟ್ಟ ತೀವ್ರ ಕಳಪೆ - ಎಕ್ಯೂಐ ಹೆಚ್ಚಿನ ಕಳಪೆ ವರ್ಗದಲ್ಲಿ

Delhi air quality: ಬುಧವಾರ ಬೆಳಿಗ್ಗೆ ಇಂಡಿಯಾ ಗೇಟ್​ ಮತ್ತು ಲೋಧಿ ರಸ್ತೆ ಹೆಚ್ಚು ಮಬ್ಬಿನಿಂದ ಕೂಡಿದ್ದು, ವೀಕ್ಷಣಾ ಅಂತರ ಕುಸಿದಿದೆ. ಇದರ ನಡುವೆಯೇ ಜನರು ತಮ್ಮ ದೈನಂದಿನ ದಿನಚರಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.

delhi Air quality in severe category after diwali
delhi Air quality in severe category after diwali
author img

By ETV Bharat Karnataka Team

Published : Nov 15, 2023, 10:51 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಟ್ಟ ತೀವ್ರವಾಗಿದೆ. ಇಂದು ಬೆಳಿಗ್ಗೆ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಇನ್ನೂ ಹೆಚ್ಚಿನ ಕಳಪೆ ವರ್ಗದಲ್ಲಿ ದಾಖಲಾಯಿತು. ಎಸ್‌ಎಎಫ್​ಎಆರ್​ ದತ್ತಾಂಶದ ಪ್ರಕಾರ, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 370 ದಾಖಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದತ್ತಾಂಶದ ಅನುಸಾರ, ಆರ್​.ಕೆ.ಪುರಂನಲ್ಲಿ ವಾಯು ಗುಣಮಟ್ಟ 420 ಇದ್ದರೆ, ಹೊಸ ಮೋತಿ ಬಾಗ್​ನಲ್ಲಿ 404 ಇದೆ. ಐಜಿಐ ವಿಮಾನ ನಿಲ್ದಾಣ ಪ್ರದೇಶ ಮತ್ತು ನೆಹರು ನಗರದಲ್ಲೂ ಕಳಪೆ ಮಟ್ಟದಲ್ಲಿದ್ದು, 433 ದಾಖಲಾಗಿದೆ.

ದೀಪಾವಳಿಯ ರಾತ್ರಿ ಪಟಾಕಿಗಳ ಮಾಲಿನ್ಯದಿಂದಾಗಿ ನಗರ ಸಂಪೂರ್ಣವಾಗಿ ದಟ್ಟ ಹೊಗೆಯಿಂದ ಆವರಿಸಿತ್ತು. ಸುಪ್ರೀಂ ಕೋರ್ಟ್​ ಆದೇಶದ ಹೊರತಾಗಿಯೂ ಜನರು ಪಟಾಕಿ ಸಿಡಿಸಿದ್ದು, ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಮಬ್ಬು ಆವರಿಸಿತು.

ಹಿಂದಿನ ವರ್ಷಕ್ಕಿಂತಲೂ ಕಳಪೆ: ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ದೇಶದ (ದೀಪಾವಳಿ ಸಂದರ್ಭದಲ್ಲಿ) 11ರ ಪೈಕಿ 9 ನಗರಗಳ ರಾಜಧಾನಿಗಳು ಹೆಚ್ಚು ಮಾಲಿನ್ಯದಿಂದ ಕೂಡಿದ್ದವು ಎಂದು ವರದಿಯಾಗಿದೆ. ರಾಷ್ಟ್ರೀಯ ಶುದ್ದ ವಾಯು ಕಾರ್ಯಕ್ರಮ (ಎನ್​ಸಿಎಪಿ) ವಿಶ್ಲೇಷಿಸಿರುವಂತೆ, ದೇಶದ 11 ರಾಜಧಾನಿಗಳಲ್ಲಿ ವಾಯು ಗುಣಮಟ್ಟ ಪಿಎಂ 2.5 ಆಗಿದೆ. ಇದರಲ್ಲಿ ನವದೆಹಲಿಯಲ್ಲಿ ಅತಿ ಹೆಚ್ಚು ಮಾಲಿನ್ಯ ನವೆಂಬರ್​ 13ರ ಮಧ್ಯಾಹ್ನ 1.30ಕ್ಕೆ ದಾಖಲಾಗಿದೆ.

ಸುಪ್ರೀಂ ಕೋರ್ಟ್​ ಪಟಾಕಿ ಹೊಡೆಯಲು ನಿಷೇಧ ಹೇರಿರುವ ನಡುವೆಯೂ ರಾಷ್ಟ್ರ ರಾಜಧಾನಿ ಮತ್ತು ದೇಶದ ಪ್ರಮುಖ ನಗರದಲ್ಲಿ ಪಟಾಕಿ ಸಿಡಿಸುವಿಕೆಯಿಂದ ವಾಯು ಗುಣಮಟ್ಟ ಹೆಚ್ಚಾಗಿದ್ದು, ಇದೊಂದು ಎಚ್ಚರಿಕೆ ಗಂಟೆ ಎಂದು ಪರಿಸರಪ್ರೇಮಿಗಳು ಹೇಳಿದ್ದಾರೆ.

ಈ ನಡುವೆ ದೆಹಲಿ ಕಾರ್ಮಿಕ ಸಚಿವ ರಾಜ್ ಕುಮಾರ್ ಆನಂದ್ ಅವರು ಜೊಂಟಿ ಗಡಿ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಂಜಾವಾಲಾ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನದ ಬಗ್ಗೆ ಕೂಡ ಪರಿಶೀಲನೆ ನಡೆಸಿದರು.

ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟ ಏರಿಕೆ ಕಂಡಿದೆ. ನಗರದಲ್ಲಿ ಮಾಲಿನ್ಯ ಮಟ್ಟವನ್ನು ತಗ್ಗಿಸಬೇಕಿದೆ. ನಮ್ಮ ಸರ್ಕಾರ ಇದಕ್ಕಾಗಿ ನಿರಂತರ ಕೆಲಸ ಮಾಡುತ್ತಿದೆ ಎಂದು ರಾಜ್​ ಕುಮಾರ್​ ಆನಂದ್​ ಎಎನ್​ಐಗೆ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಟ್ಟ ತೀವ್ರವಾಗಿದೆ. ಇಂದು ಬೆಳಿಗ್ಗೆ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಇನ್ನೂ ಹೆಚ್ಚಿನ ಕಳಪೆ ವರ್ಗದಲ್ಲಿ ದಾಖಲಾಯಿತು. ಎಸ್‌ಎಎಫ್​ಎಆರ್​ ದತ್ತಾಂಶದ ಪ್ರಕಾರ, ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 370 ದಾಖಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದತ್ತಾಂಶದ ಅನುಸಾರ, ಆರ್​.ಕೆ.ಪುರಂನಲ್ಲಿ ವಾಯು ಗುಣಮಟ್ಟ 420 ಇದ್ದರೆ, ಹೊಸ ಮೋತಿ ಬಾಗ್​ನಲ್ಲಿ 404 ಇದೆ. ಐಜಿಐ ವಿಮಾನ ನಿಲ್ದಾಣ ಪ್ರದೇಶ ಮತ್ತು ನೆಹರು ನಗರದಲ್ಲೂ ಕಳಪೆ ಮಟ್ಟದಲ್ಲಿದ್ದು, 433 ದಾಖಲಾಗಿದೆ.

ದೀಪಾವಳಿಯ ರಾತ್ರಿ ಪಟಾಕಿಗಳ ಮಾಲಿನ್ಯದಿಂದಾಗಿ ನಗರ ಸಂಪೂರ್ಣವಾಗಿ ದಟ್ಟ ಹೊಗೆಯಿಂದ ಆವರಿಸಿತ್ತು. ಸುಪ್ರೀಂ ಕೋರ್ಟ್​ ಆದೇಶದ ಹೊರತಾಗಿಯೂ ಜನರು ಪಟಾಕಿ ಸಿಡಿಸಿದ್ದು, ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಮಬ್ಬು ಆವರಿಸಿತು.

ಹಿಂದಿನ ವರ್ಷಕ್ಕಿಂತಲೂ ಕಳಪೆ: ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ದೇಶದ (ದೀಪಾವಳಿ ಸಂದರ್ಭದಲ್ಲಿ) 11ರ ಪೈಕಿ 9 ನಗರಗಳ ರಾಜಧಾನಿಗಳು ಹೆಚ್ಚು ಮಾಲಿನ್ಯದಿಂದ ಕೂಡಿದ್ದವು ಎಂದು ವರದಿಯಾಗಿದೆ. ರಾಷ್ಟ್ರೀಯ ಶುದ್ದ ವಾಯು ಕಾರ್ಯಕ್ರಮ (ಎನ್​ಸಿಎಪಿ) ವಿಶ್ಲೇಷಿಸಿರುವಂತೆ, ದೇಶದ 11 ರಾಜಧಾನಿಗಳಲ್ಲಿ ವಾಯು ಗುಣಮಟ್ಟ ಪಿಎಂ 2.5 ಆಗಿದೆ. ಇದರಲ್ಲಿ ನವದೆಹಲಿಯಲ್ಲಿ ಅತಿ ಹೆಚ್ಚು ಮಾಲಿನ್ಯ ನವೆಂಬರ್​ 13ರ ಮಧ್ಯಾಹ್ನ 1.30ಕ್ಕೆ ದಾಖಲಾಗಿದೆ.

ಸುಪ್ರೀಂ ಕೋರ್ಟ್​ ಪಟಾಕಿ ಹೊಡೆಯಲು ನಿಷೇಧ ಹೇರಿರುವ ನಡುವೆಯೂ ರಾಷ್ಟ್ರ ರಾಜಧಾನಿ ಮತ್ತು ದೇಶದ ಪ್ರಮುಖ ನಗರದಲ್ಲಿ ಪಟಾಕಿ ಸಿಡಿಸುವಿಕೆಯಿಂದ ವಾಯು ಗುಣಮಟ್ಟ ಹೆಚ್ಚಾಗಿದ್ದು, ಇದೊಂದು ಎಚ್ಚರಿಕೆ ಗಂಟೆ ಎಂದು ಪರಿಸರಪ್ರೇಮಿಗಳು ಹೇಳಿದ್ದಾರೆ.

ಈ ನಡುವೆ ದೆಹಲಿ ಕಾರ್ಮಿಕ ಸಚಿವ ರಾಜ್ ಕುಮಾರ್ ಆನಂದ್ ಅವರು ಜೊಂಟಿ ಗಡಿ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಂಜಾವಾಲಾ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನದ ಬಗ್ಗೆ ಕೂಡ ಪರಿಶೀಲನೆ ನಡೆಸಿದರು.

ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯು ಗುಣಮಟ್ಟ ಏರಿಕೆ ಕಂಡಿದೆ. ನಗರದಲ್ಲಿ ಮಾಲಿನ್ಯ ಮಟ್ಟವನ್ನು ತಗ್ಗಿಸಬೇಕಿದೆ. ನಮ್ಮ ಸರ್ಕಾರ ಇದಕ್ಕಾಗಿ ನಿರಂತರ ಕೆಲಸ ಮಾಡುತ್ತಿದೆ ಎಂದು ರಾಜ್​ ಕುಮಾರ್​ ಆನಂದ್​ ಎಎನ್​ಐಗೆ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.