ETV Bharat / state

ಯಾದಗಿರಿಯಲ್ಲಿ ನೆರೆ: ಒಪ್ಪತ್ತಿನ ಊಟಕ್ಕಾಗಿ ಕೃಷಿ ಕಾರ್ಮಿಕರ ಪರದಾಟ !

ನಾವು ಬದುಕಬೇಕಾದರೆ ಕೂಲಿ‌ ಮಾಡಲೇಬೇಕು. ಮಕ್ಕಳನ್ನು ಶಾಲೆಗೆ ಕಳಿಸದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದೇವೆ ಎಂದು ಮಹಿಳೆಯೋರ್ವಳು ಅಳಲು ತೋಡಿಕೊಂಡಿದ್ಧಾಳೆ.

author img

By

Published : Aug 12, 2019, 11:45 PM IST

ಕೂಲಿ ಕಾರ್ಮಿಕ ಮಹಿಳೆ

ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಕೃಷಿ ಕಾರ್ಮಿಕರ ಜೀವನ ಮಂಕಾಗಿದೆ.

ನಾವು ಒಪ್ಪತ್ತಿನ ಊಟಕ್ಕಾಗಿ ಪರದಾಡುವಂತಾಗಿದೆ. ಮಕ್ಕಳನ್ನು ಶಾಲೆಗೆ ಹೇಗೆ ಕಳಿಸಬೇಕು? ನಾವು ಮಕ್ಕಳನ್ನು ಹೇಗೆ ಸಾಕಬೇಕು? ಎಂದು ಸುರಪೂರ ತಾಲೂಕಿನ ನಗನೂರ ಗ್ರಾಮದ ಹನುಮಂತಿ ಎಂಬುವವರು ಕಣ್ಣೀರಿಡುತ್ತ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ನಾವು ದಿನಾಲೂ ಕೂಲಿ ಮಾಡಿ ಬದುಕಬೇಕು. ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದೇವೆ. 50 ರೂಪಾಯಿ ದುಡಿಯುವುದಕ್ಕೂ ಕೂಡ ಒಂದು ದಿನಪೂರ್ತಿ ಜಮೀನಿನಲ್ಲಿ ಕೆಲಸ ‌ಮಾಡಬೇಕು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಊಟಕ್ಕಾಗಿ ಮಹಿಳೆ ಪರದಾಟ

ನಾವು ಬದುಕಬೇಕಾದರೆ ಕೂಲಿ‌ ಮಾಡಲೇಬೇಕು. ಮಕ್ಕಳನ್ನು ಶಾಲೆಗೆ ಕಳಿಸದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದೇವೆ. ನಮಗೆ ಮನೆಯಿಲ್ಲ, ಜಮೀನಿಲ್ಲ ಹೀಗಾಗಿ ಸರ್ಕಾರ ಸಾಲಮನ್ನಾ ಮಾಡಿದರೂ ನಮಗೆ ಉಪಯೋಗವಿಲ್ಲ. ಒಂದು ಎಕರೆ ಜಮೀನು, ಒಂದು ಮನೆ ಕೊಡಬೇಕು ಅಂದಾಗ ಮಾತ್ರ ನಮ್ಮಂತವರು ಬದುಕಲು ಸಾಧ್ಯ ಎಂದು ಸರ್ಕಾರಕ್ಕೆ ಹನುಮಂತಿ ಮನವಿ ಮಾಡಿದ್ದಾರೆ.

ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಕೃಷಿ ಕಾರ್ಮಿಕರ ಜೀವನ ಮಂಕಾಗಿದೆ.

ನಾವು ಒಪ್ಪತ್ತಿನ ಊಟಕ್ಕಾಗಿ ಪರದಾಡುವಂತಾಗಿದೆ. ಮಕ್ಕಳನ್ನು ಶಾಲೆಗೆ ಹೇಗೆ ಕಳಿಸಬೇಕು? ನಾವು ಮಕ್ಕಳನ್ನು ಹೇಗೆ ಸಾಕಬೇಕು? ಎಂದು ಸುರಪೂರ ತಾಲೂಕಿನ ನಗನೂರ ಗ್ರಾಮದ ಹನುಮಂತಿ ಎಂಬುವವರು ಕಣ್ಣೀರಿಡುತ್ತ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ನಾವು ದಿನಾಲೂ ಕೂಲಿ ಮಾಡಿ ಬದುಕಬೇಕು. ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದೇವೆ. 50 ರೂಪಾಯಿ ದುಡಿಯುವುದಕ್ಕೂ ಕೂಡ ಒಂದು ದಿನಪೂರ್ತಿ ಜಮೀನಿನಲ್ಲಿ ಕೆಲಸ ‌ಮಾಡಬೇಕು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಊಟಕ್ಕಾಗಿ ಮಹಿಳೆ ಪರದಾಟ

ನಾವು ಬದುಕಬೇಕಾದರೆ ಕೂಲಿ‌ ಮಾಡಲೇಬೇಕು. ಮಕ್ಕಳನ್ನು ಶಾಲೆಗೆ ಕಳಿಸದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದೇವೆ. ನಮಗೆ ಮನೆಯಿಲ್ಲ, ಜಮೀನಿಲ್ಲ ಹೀಗಾಗಿ ಸರ್ಕಾರ ಸಾಲಮನ್ನಾ ಮಾಡಿದರೂ ನಮಗೆ ಉಪಯೋಗವಿಲ್ಲ. ಒಂದು ಎಕರೆ ಜಮೀನು, ಒಂದು ಮನೆ ಕೊಡಬೇಕು ಅಂದಾಗ ಮಾತ್ರ ನಮ್ಮಂತವರು ಬದುಕಲು ಸಾಧ್ಯ ಎಂದು ಸರ್ಕಾರಕ್ಕೆ ಹನುಮಂತಿ ಮನವಿ ಮಾಡಿದ್ದಾರೆ.

Intro:ಯಾದಗಿರಿ : ಒಂದೊಪತ್ತಿನ ಊಟಕ್ಕಾಗಿ ಪರದಾಡುತ್ತಿದ್ದು, ಮಕ್ಕಳನ್ನು ಶಾಲೆಗೆ ಹೇಗೆ ಕಳಿಸಬೇಕು ? ನಾವು ಮಕ್ಕಳನ್ನು ಹೇಗೆ ಬದುಕಿಸಬೇಕು ? ಎಂದು ಆ ಮಾತೆ ಕಣ್ಣಿರಿಡುತ್ತಾ ಸರಕಾರಕ್ಕೆ ಈಡಿ ಶಾಪ ಹಾಕಿದ್ದಾಳೆ. ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ನಗನೂರ ಗ್ರಾಮದ ಮಹೀಳೆ ತನ್ನ ಕಷ್ಟದ ಪರಿಸ್ಥಿತಿಯನ್ನು ಹೇಳುತ್ತಾ ನಾವು ದಿನಾಲು ಕೂಲಿ ಮಾಡಿ ಬದಕಬೇಕು. ಒಂದೋಪತ್ತಿನ ಊಟಕ್ಕಾಗಿ ನಾವು ಪರದಾಡಿತ್ತಿದ್ದೆವೆ. ಐವತ್ತು ರೂಪಾಯಿ ದುಡಿಯುವುಕ್ಕಾಗಿ ಒಂದು ದಿನವೆ ಜಮೀನಿನಲ್ಲಿ ಕೆಲಸ ‌ಮಾಡಬೇಕು ಎಂದು ಕಣ್ಣಿರಿಡುತ್ತಾ ಎಳೆ ಎಳೆಯಾಗಿ ತನ್ನ ಕಷ್ಟವನ್ನು ಬಿಚ್ಚಿಡುತ್ತಾಳೆ. ನಾವು ಕೂಲಿ‌ ಕಾರ್ಮಿಕರು ,‌ನಾವು ಜೀವನದಲ್ಲಿ ಬದುಕಬೇಕಾದ್ರೆ ಕೂಲಿ‌ ಮಾಡಬೇಕು. ನೂರ ರೂಪಾಯಿ ಕೂಲಿ ಕೊಟ್ರೆ ನಮ್ಮ ಜೀವನ ಸಾಗಿಸಬೇಕು. ಮಕ್ಕಳನ್ನು ಶಾಲೆಗೆ ಬಿಡಿಸಿ ಕೂಲಿ ಕೆಲಸಕ್ಕೆ ಕರಕೊಂಡ ಬರುತ್ತಿದ್ದೆವೆ .‌ನಾವು ದುಡಿಯಲಿಲ್ಲವೆಂದ್ರೆ ನಮ್ಮ ಜೀವನ ಕಷ್ಟವಾಗುತ್ತೆ ಎಂದು ಮಹೀಳೆ ರಾಜ್ಯ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾಳೆ.


Body:ಸರಕಾರ ಸಾಲ ಮನ್ನಾ ಮಾಡಿದ್ರೆ ನಮಗೆ ಉಪಯೋಗವಿಲ್ಲ. ನಮ್ಮಗೆ ಮನೆಯಿಲ್ಲ , ಜಮೀನಿಲ್ಲ ಸಾಲ‌ಮನ್ನಾ ಮಾಡಿದ್ರೆ ನಮಗೆ ಉಪಯೋಗವಿಲ್ಲ ಎಂದು ಆ ಮಾತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.


Conclusion:ನಮಗೆ ಬದುಕಲು ಸರಕಾರ ಒಂದೂ ಎಕ್ರೆ ಜಮೀನು ಕೊಡಬೇಕು. ನಮಗೆ ಬದುಕಲು ಒಂದು ಮನೆ ಕೊಡಬೇಕು ಅಂದಾಗ ಮಾತ್ರ ನಾವು ಕೂಲಿ ಕಾರ್ಮಿಕರು ಬದುಕುತ್ತೆವೆ ಎಂದು ಸರಕಾರಕ್ಕೆ ಮನವಿ ಮಾಡಿದ್ದಾಳೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.