ETV Bharat / state

ಖರ್ಗೆ ಸೋಲಿಸಲೆಂದೆ ಬಿಜೆಪಿ ಪಕ್ಷಕ್ಕೆ ಬಂದೆ:ಬಾಬುರಾವ್​ ಚಿಂಚನಸೂರ - ಖರ್ಗೆ ಸೋಲಿಸಲೆಂದೆ ಬಿಜೆಪಿ ಪಕ್ಷಕ್ಕೆ ಸೇರಿದ್ದೆ .

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಪಕ್ಷಕ್ಕೆ ಬಂದಿರೋದಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ಮಾತನಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಬಾಬುರಾವ್​ ಚಿಂಚನಸೂರ
author img

By

Published : May 25, 2019, 9:31 PM IST

ಯಾದಗಿರಿ: ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೆೇಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಅದರಂತೆ ಅವರಿಗೆ ಸೋಲಿನ ರುಚಿ ತೋರಿಸಲಾಗಿದೆ ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್​ ಚಿಂಚನಸೂರ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಬುರಾವ್​ ಚಿಂಚನಸೂರ ವಿಡಿಯೋ ವೈರಲ್ ಆಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಖರ್ಗೆಯವರನ್ನು ಸೋಲಿಸಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರಿದ್ದೆ.ಅದರಂತೆ ಶಪಥ ಮಾಡಿ ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ್ದೇನೆ ‌ಎಂದಿರುವುದು ವಿಡಿಯೋದಲ್ಲಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪುನಃ ಸಿಎಂ ಮಾಡಬೇಕು. ಜೊತೆಗೆ ಕೋಲಿ ಸಮಾಜವನ್ನು ಎಸ್​ಟಿ ಕೆಟಗರಿಗೆ ಸೇರಿಸಬೇಕಾಗಿರುವುದು ಮುಂದಿನ ಕೆಲಸ ಎಂದವರು ಹೇಳಿದ್ದಾರೆ.

ಇದೇ ವೇಳೆ ದೇವೇಗೌಡರ ವಿರುದ್ಧವೂ ಅವರು ಮಾತನಾಡಿದ್ದಾರೆ. ಅಪ್ಪ,ಮಗನ ಆಟಕ್ಕೂ ಈ ಬಾರಿ ಬ್ರೇಕ್​ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗಿದೆ ಎಂದು ವ್ಯಂಗವಾಡಿದರು. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್​ ಖರ್ಗೆಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಕಿಡಿಕಾರಿದರು.

ಯಾದಗಿರಿ: ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೆೇಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಅದರಂತೆ ಅವರಿಗೆ ಸೋಲಿನ ರುಚಿ ತೋರಿಸಲಾಗಿದೆ ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್​ ಚಿಂಚನಸೂರ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಬುರಾವ್​ ಚಿಂಚನಸೂರ ವಿಡಿಯೋ ವೈರಲ್ ಆಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಖರ್ಗೆಯವರನ್ನು ಸೋಲಿಸಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರಿದ್ದೆ.ಅದರಂತೆ ಶಪಥ ಮಾಡಿ ಸೋಲಿಲ್ಲದ ಸರದಾರನಿಗೆ ಸೋಲುಣಿಸಿದ್ದೇನೆ ‌ಎಂದಿರುವುದು ವಿಡಿಯೋದಲ್ಲಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪುನಃ ಸಿಎಂ ಮಾಡಬೇಕು. ಜೊತೆಗೆ ಕೋಲಿ ಸಮಾಜವನ್ನು ಎಸ್​ಟಿ ಕೆಟಗರಿಗೆ ಸೇರಿಸಬೇಕಾಗಿರುವುದು ಮುಂದಿನ ಕೆಲಸ ಎಂದವರು ಹೇಳಿದ್ದಾರೆ.

ಇದೇ ವೇಳೆ ದೇವೇಗೌಡರ ವಿರುದ್ಧವೂ ಅವರು ಮಾತನಾಡಿದ್ದಾರೆ. ಅಪ್ಪ,ಮಗನ ಆಟಕ್ಕೂ ಈ ಬಾರಿ ಬ್ರೇಕ್​ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗಿದೆ ಎಂದು ವ್ಯಂಗವಾಡಿದರು. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್​ ಖರ್ಗೆಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಕಿಡಿಕಾರಿದರು.

Intro:ಸ್ತಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಖರ್ಗೆ ಸೋಲಿಸಲೆಂದೆ ಬಿಜೆಪಿ ಪಕ್ಷಕ್ಕೆ ಸೇರಿದ್ದೆ.

ನಿರೂಪಕ : ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಸೋಲಿಸಲೆಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ , ಅದರಂತೆ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಲಾಗಿದೆ ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಪ್ತ ಖಾತೆಗಳ ಸಚಿವ ಬಾಬುರಾವ ಚಿಂಚನಸೂರ ಹೇಳಿಕೆ ವೀಡಿಯೋ ಪುಲ್ ವೈರಲ್ ಅಗಿದೆ.

ಇದೀಗ ಲೋಕ ಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆ ಮಾಜಿ ಸಚಿವ ಬಾಬುರಾವ ಚಿಂಚನಸೂರ ಖರ್ಗೆನ ಸೋಲಿಸಬೇಕೆಂದು ಬಿಜೆಪಿ ಪಕ್ಷಕ್ಕೆ ಸೇರಿದ್ದೆ ಅದರಂತೆ ಶಪಥ ಮಾಡಿ ಸೋಲಿಲ್ಲದ ಸರದಾರನಿಗೆ ಸೋಲಿಸಿದ್ದಾನೆ ‌ಎನ್ನುವ ವೀಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ‌.

ಇನ್ನುಳಿದ ಕೆಲಸವೆಂದರೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನ ಪುನಃ ಸಿ ಎಂ ಮಾಡವುದು. ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರ್ಪಡೆ ಮಾಡವುದು. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿ ಎಂ ಆಗ್ತಾರೆ ಅಂತ ಭವಿಷ್ಯ ನುಡಿದ ಅವರು ಕೋಲಿ ಸಮಾಜವನ್ನು ಎಸ ಟಿ ಸೇರ್ಪಡೆ ಮಾಡಲಾಗುವುದೆಂದರು.




Body:ಗುರುಮಿಠಕಲ್ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಎಂದು ಸೋಲಿಸಲಾಯ್ತು, ಅಂದೆ ನಾನು ಖರ್ಗೆನಾ ಸೋಲಿಸಬೇಕೆಂದು ಪಣ ತೊಟ್ಟಿದೆ. ಖರ್ಗೆನಾ ಸೋಲಿಸುವುದಗೋಸ್ಕರವೆ ಜಾಧವನ ರಾಜೀನಾಮೆ ನೀಡಿಸಿದ್ದೆ. ಖರ್ಗೆನ ವಿರುದ್ಧ ಜಾಧವನ ನಿಲ್ಲಿಸಿದ್ದೆ ನಾನು! , ಖರ್ಗೆನಾ ವಿರುದ್ಧ ಜಾಧವನ ಗೆಲ್ಲಿಸಿದ್ದೆ ನಾನು ಎಂದು ಮಾಜಿ‌ಮಂತ್ರಿ ಬಾಬುರಾವ ಚಿಂಚನಸೂರ ಹೇಳಿದ್ದಾರೆ.




Conclusion:ಅಪ್ಪ ಮಗನ ಆಟಕ್ಕೆ ಬ್ರೇಕ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯವೆ ಇಲ್ಲದಂತಾಗಿದೆ ಎಂದು ವ್ಯಂಗವಾಡಿದರು. ಮುಂಬರುವ ವಿಧಾನಸಭಾ ಚುನಾಣೆಯಲ್ಲಿ ಪ್ರೀಯಾಂಖ ಖರ್ಗೆಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಕಿಡಿಕಾರಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.