ETV Bharat / state

ಲಾಕ್‌ಡೌನ್‌ ಮಧ್ಯೆ ಮೃತಪಟ್ಟ ಹಸುಗೂಸು: ಶವ ಸಂಸ್ಕಾರಕ್ಕೆ ಪೌರಕಾರ್ಮಿಕರ ನೆರವು - ಯಾದಗಿರಿ ಲೇಟೆಸ್ಟ್ ನ್ಯೂಸ್​

ಯಾದಗಿರಿಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಮಗುವಿನ ಅಂತ್ಯಸಂಸ್ಕಾರ ನಡೆಸಲು ಪರದಾಡುತ್ತಿದ್ದ ದಂಪತಿಗೆ ಪೌರ ಕಾರ್ಮಿಕರು ನೆರವು ನೀಡಿ ಮಾನವೀಯತೆ ಮೆರೆದರು.

Civic labour help to Baby Funeral at Yadgir
ಮಗುವಿನ ಶವ ಸಂಸ್ಕಾರಕ್ಕೆ ನೆರವು ನೀಡಿದ ಪೌರಕಾರ್ಮಿಕರು
author img

By

Published : Mar 29, 2020, 8:03 AM IST

ಯಾದಗಿರಿ : ಇಡೀ ದೇಶವೇ ಲಾಕ್​ಡೌನ್​ನಿಂದ ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಮಗು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಈ ವೇಳೆ ಪೌರ ಕಾರ್ಮಿಕರು ನೆರವಿಗೆ ಧಾವಿಸಿ ಮಗುವಿನ ಅಂತ್ಯಕ್ರಿಯೆ ನೆರೆವೇರಿಸಿ ಮಾನವೀಯತೆ ತೋರಿಸಿದರು.

ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಎಂಬುವವರ 25 ದಿನದ ಹಸುಗೂಸು ಅನಾರೋಗ್ಯದಿಂದ ಮೃತಪಟ್ಟಿದೆ. ಮಗುವಿನ ಶವ ಸಂಸ್ಕಾರ ಮಾಡವುದಕ್ಕೂ ಆಗದೆ ಪೋಷಕರು ಸಂಕಷ್ಟದಲ್ಲಿದ್ದರು. ಈ ವಿಚಾರ ತಿಳಿದ ಸ್ಥಳೀಯ ಎಸ್​ಡಿಪಿಐ ನಾಯಕರು ಹಾಗೂ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ಧಾವಿಸಿ ಅಂತಿಮ ಕಾರ್ಯ ಮುಗಿಸಲು ನೆರವಾದರು.

ಯಾದಗಿರಿ : ಇಡೀ ದೇಶವೇ ಲಾಕ್​ಡೌನ್​ನಿಂದ ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಮಗು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಈ ವೇಳೆ ಪೌರ ಕಾರ್ಮಿಕರು ನೆರವಿಗೆ ಧಾವಿಸಿ ಮಗುವಿನ ಅಂತ್ಯಕ್ರಿಯೆ ನೆರೆವೇರಿಸಿ ಮಾನವೀಯತೆ ತೋರಿಸಿದರು.

ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಎಂಬುವವರ 25 ದಿನದ ಹಸುಗೂಸು ಅನಾರೋಗ್ಯದಿಂದ ಮೃತಪಟ್ಟಿದೆ. ಮಗುವಿನ ಶವ ಸಂಸ್ಕಾರ ಮಾಡವುದಕ್ಕೂ ಆಗದೆ ಪೋಷಕರು ಸಂಕಷ್ಟದಲ್ಲಿದ್ದರು. ಈ ವಿಚಾರ ತಿಳಿದ ಸ್ಥಳೀಯ ಎಸ್​ಡಿಪಿಐ ನಾಯಕರು ಹಾಗೂ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ಧಾವಿಸಿ ಅಂತಿಮ ಕಾರ್ಯ ಮುಗಿಸಲು ನೆರವಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.