ETV Bharat / state

ಕೋವಿಡ್ ರೋಗಿಗಳು ಇರುವವರೆಗೂ ಆಹಾರದ ಕಿಟ್​ ನೀಡುತ್ತೇವೆ: ಶಾಸಕ ನಡಹಳ್ಳಿ ಕುಟುಂಬ

ಮೊಳಕೆಯೊಡೆದ ಕಾಳು, ಮೊಟ್ಟೆ, ವಿಟಮಿನ್ ಸಿ ಪ್ರೊಟೀನ್ ಇರುವ ಹಣ್ಣು ಒಳಗೊಂಡಿರುವ ಕಿಟ್‌ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿರಿಗೆ ಹಸ್ತಾಂತರಿಸಿದರು.

author img

By

Published : Apr 28, 2021, 10:20 AM IST

Nutritional Food Kit from MLA Family for Covid Patients, Nutritional Food Kit from MLA Family for Covid Patients news, Nutritional Food Kit, Nutritional Food Kit news, ಕೋವಿಡ್ ರೋಗಿಗಳಿಗೆ ಶಾಸಕ ನಡಹಳ್ಳಿ ಕುಟುಂಬದಿಂದ ಆಹಾರದ ಕಿಟ್, ಕೋವಿಡ್ ರೋಗಿಗಳಿಗೆ ಶಾಸಕ ನಡಹಳ್ಳಿ ಕುಟುಂಬದಿಂದ ಆಹಾರದ ಕಿಟ್ ಸುದ್ದಿ, ಕೋವಿಡ್ ರೋಗಿಗಳಿಗೆ ಆಹಾರದ ಕಿಟ್, ಮುದ್ದೇಬಿಹಾಳ ಸುದ್ದಿ,
ಕೋವಿಡ್ ರೋಗಿಗಳಿಗೆ ಶಾಸಕ ನಡಹಳ್ಳಿ ಕುಟುಂಬದಿಂದ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್

ಮುದ್ದೇಬಿಹಾಳ (ವಿಜಯಪುರ): ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತ ರೋಗಿಗಳು ಇರುವವರೆಗೂ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‌ ಒದಗಿಸುವ ಕಾರ್ಯಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕುಟುಂಬ ಮುಂದಾಗಿದೆ.

ಈ ಕಾರ್ಯಕ್ಕೆ ಪಟ್ಟಣದ ದಾಸೋಹ ನಿಲಯದಲ್ಲಿ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಪುತ್ರ ಭರತಗೌಡ ಪಾಟೀಲ ಚಾಲನೆ ನೀಡಿದರು.

ಮೊಳಕೆಯೊಡೆದ ಕಾಳು, ಮೊಟ್ಟೆ, ವಿಟಮಿನ್ ಸಿ ಪ್ರೊಟೀನ್ ಇರುವ ಹಣ್ಣು ಒಳಗೊಂಡಿರುವ ಕಿಟ್‌ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿರಿಗೆ ಹಸ್ತಾಂತರಿಸಿದರು.

ಕೋವಿಡ್ ರೋಗಿಗಳಿಗೆ ಆಹಾರದ ಕಿಟ್

ಈ ವೇಳೆ ಮಾತನಾಡಿದ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಶಾಸಕರ ಸಲಹೆ ಮೇರೆಗೆ ಕಾರ್ಯ ಪ್ರಾರಂಭಿಸಿದ್ದೇವೆ. ಊಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಿಟ್​ಗಳನ್ನು ನಮ್ಮ ಕುಟುಂಬದಿಂದ ಕೋವಿಡ್ ರೋಗಿಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಮುದ್ದೇಬಿಹಾಳ (ವಿಜಯಪುರ): ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತ ರೋಗಿಗಳು ಇರುವವರೆಗೂ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‌ ಒದಗಿಸುವ ಕಾರ್ಯಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕುಟುಂಬ ಮುಂದಾಗಿದೆ.

ಈ ಕಾರ್ಯಕ್ಕೆ ಪಟ್ಟಣದ ದಾಸೋಹ ನಿಲಯದಲ್ಲಿ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಪುತ್ರ ಭರತಗೌಡ ಪಾಟೀಲ ಚಾಲನೆ ನೀಡಿದರು.

ಮೊಳಕೆಯೊಡೆದ ಕಾಳು, ಮೊಟ್ಟೆ, ವಿಟಮಿನ್ ಸಿ ಪ್ರೊಟೀನ್ ಇರುವ ಹಣ್ಣು ಒಳಗೊಂಡಿರುವ ಕಿಟ್‌ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿರಿಗೆ ಹಸ್ತಾಂತರಿಸಿದರು.

ಕೋವಿಡ್ ರೋಗಿಗಳಿಗೆ ಆಹಾರದ ಕಿಟ್

ಈ ವೇಳೆ ಮಾತನಾಡಿದ ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಶಾಸಕರ ಸಲಹೆ ಮೇರೆಗೆ ಕಾರ್ಯ ಪ್ರಾರಂಭಿಸಿದ್ದೇವೆ. ಊಟಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಿಟ್​ಗಳನ್ನು ನಮ್ಮ ಕುಟುಂಬದಿಂದ ಕೋವಿಡ್ ರೋಗಿಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.