ETV Bharat / state

ಎರಡು ತಿಂಗಳಿನಿಂದ ಮಾಸಾಶನವಿಲ್ಲ; ಶಾಸಕರೆದುರು ಕಷ್ಟ ಹೇಳಿಕೊಂಡ ವೃದ್ಧೆ - MLA AS Patil Nadahalli helped old lady

ತಾಲೂಕಿನ ಯರಝರಿ ಗ್ರಾಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವೃದ್ಧೆಯೊಬ್ಬರ ಅಳಲು ಆಲಿಸಿದರು.

MLA AS Patil Nadahalli
ಎರಡು ತಿಂಗಳಿನಿಂದ ಮಾಶಾಸನವಿಲ್ಲ-ಶಾಸಕರೆದುರು ಕಷ್ಟ ಹೇಳಿಕೊಂಡ ವೃದ್ಧೆ
author img

By

Published : Jun 12, 2020, 11:30 PM IST

ಮುದ್ದೇಬಿಹಾಳ: ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ಮಾಸಾಶನ ಬಂದಿಲ್ಲವೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಎದುರಿಗೆ ವೃದ್ಧೆಯೊಬ್ಬರು ಅಳಲು ತೋಡಿಕೊಂಡ ಘಟನೆ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದ ವೇಳೆ ಯರಝರಿ ಗ್ರಾಮದ ಸಿದ್ಧವ್ವ ಹೊಸಮನಿ ಎಂಬ ವೃದ್ಧೆ ತನಗೆ ಎರಡು ತಿಂಗಳ ಮಾಸಾಶನ ಬರಬೇಕು ಎಂದು ಗೋಳು ತೋಡಿಕೊಂಡರು. ತಕ್ಷಣ ಶಾಸಕರು ವೃದ್ಧೆಯ ಕೈಯ್ಯಲ್ಲಿದ್ದ ಪಾಸ್​ಬುಕ್​ ಪರಿಶೀಲನೆ ನಡೆಸಿದರು. ಅಲ್ಲದೆ ಆಕೆಗೆ 1000 ರೂ. ವೈಯಕ್ತಿಕ ಧನಸಹಾಯವನ್ನು ಮಾಡಿದರು.

ಎರಡು ದಿನಗಳಲ್ಲಿ ಬಾಕಿ ಮಾಸಾಶನದ ಹಣವನ್ನು ಅಧಿಕಾರಿಗಳ ಮೂಲಕ ಖಾತೆಗೆ ಜಮಾ ಮಾಡಿಸುವುದಾಗಿ ತಿಳಿಸಿದರು. ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಓ ಶಶಿಕಾಂತ ಶಿವಪುರೆ ಇತರರು ಇದ್ದರು.

ಮುದ್ದೇಬಿಹಾಳ: ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ಮಾಸಾಶನ ಬಂದಿಲ್ಲವೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಎದುರಿಗೆ ವೃದ್ಧೆಯೊಬ್ಬರು ಅಳಲು ತೋಡಿಕೊಂಡ ಘಟನೆ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದ ವೇಳೆ ಯರಝರಿ ಗ್ರಾಮದ ಸಿದ್ಧವ್ವ ಹೊಸಮನಿ ಎಂಬ ವೃದ್ಧೆ ತನಗೆ ಎರಡು ತಿಂಗಳ ಮಾಸಾಶನ ಬರಬೇಕು ಎಂದು ಗೋಳು ತೋಡಿಕೊಂಡರು. ತಕ್ಷಣ ಶಾಸಕರು ವೃದ್ಧೆಯ ಕೈಯ್ಯಲ್ಲಿದ್ದ ಪಾಸ್​ಬುಕ್​ ಪರಿಶೀಲನೆ ನಡೆಸಿದರು. ಅಲ್ಲದೆ ಆಕೆಗೆ 1000 ರೂ. ವೈಯಕ್ತಿಕ ಧನಸಹಾಯವನ್ನು ಮಾಡಿದರು.

ಎರಡು ದಿನಗಳಲ್ಲಿ ಬಾಕಿ ಮಾಸಾಶನದ ಹಣವನ್ನು ಅಧಿಕಾರಿಗಳ ಮೂಲಕ ಖಾತೆಗೆ ಜಮಾ ಮಾಡಿಸುವುದಾಗಿ ತಿಳಿಸಿದರು. ಈ ವೇಳೆ ತಹಶೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಓ ಶಶಿಕಾಂತ ಶಿವಪುರೆ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.