ETV Bharat / state

ಯತ್ನಾಳ್​​ಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರಾ ಸಿಎಂ..? - MLA Basanagouda Yatna outrage aganist bjp

ಉತ್ತರ ಕರ್ನಾಟಕದ ಬಿಜೆಪಿ ಫೈರ್​ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ಅವರಿಗೆ ಕೊನೆಗೂ ಸಚಿವ ಸ್ಥಾನ ನೀಡುವ ಆಶ್ವಾಸನೆಯನ್ನ ಸಚಿವರೊಬ್ಬರ ಮೂಲಕ ಸಿಎಂ ಬಿಎಸ್‍ವೈ ಪರೋಕ್ಷವಾಗಿ ನೀಡಿದ್ದಾರೆ ಎನ್ನಲಾಗಿದೆ. ಇದು ಯತ್ನಾಳ ನಡೆಸಿದ ಸಿಎಂ ವಿರುದ್ದದ ಸಾಮಾಜಿಕ ತಾಣದ ಹೋರಾಟದ ಪರಿಣಾಮ ಎನ್ನುವುದು ಸಹಜವಾಗಿ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಆದರೆ ಯತ್ನಾಳ ಸಿಎಂ ವಿರುದ್ಧ ಸಾಮಾಜಿಕ ತಾಣದಲ್ಲಿ ನಡೆಸಿದ ಹೋರಾಟಕ್ಕೂ ಒಂದು ಕಾರಣವಿದೆ. ಅದು ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯಿಸಿರುವುದು. ಅದರಲ್ಲಿಯೂ ವಿಜಯಪುರ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡದಿರುವ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾರಣ ಎನ್ನಲಾಗಿದೆ.

ಯತ್ನಾಳ್​ ಭೇಟಿ ಮಾಡಿದ ಸಚಿವ ವಿ. ಸೋಮಣ್ಣ
ಯತ್ನಾಳ್​ ಭೇಟಿ ಮಾಡಿದ ಸಚಿವ ವಿ. ಸೋಮಣ್ಣ
author img

By

Published : Nov 12, 2020, 4:30 PM IST

Updated : Nov 12, 2020, 5:43 PM IST

ವಿಜಯಪುರ: ಆಪರೇಷನ್ ಕಮಲ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಾಗ ನಡೆದ ಸಚಿವ ಸ್ಥಾನದ ಲೆಕ್ಕಾಚಾರವೇ ತಪ್ಪಾಗಿ ಆರಂಭವಾಯಿತು. ಕೇವಲ ಬೆಂಗಳೂರು ಸುತ್ತಮುತ್ತಲೂ, ಹಿರಿಯ ಮುಖಂಡರು ಹಾಗೂ ಹೊರಗಡೆಯಿಂದ ಬಂದವರಿಗೆ ಸಚಿವ ಸ್ಥಾನ ನೀಡಿದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಸಹಜವಾಗಿ ಅಸಮಾಧಾನದ ಹೊಗೆ ಆಡಲು ಆರಂಭವಾಗಿತ್ತು.

ಬಿಜೆಪಿ ಫೈರ್​ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ವಿಜಯಪುರ ಜಿಲ್ಲೆಯಿಂದ ಮೂವರು ಬಿಜೆಪಿ ಪಕ್ಷದಿಂದ ಜಯಗಳಿಸಿದ್ದರು. ಇವರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಹೋಗಲಿ ಯಾವುದೇ ಸ್ಥಾನ ಮಾನ ನೀಡದಿರುವುದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೆಲ್ಲಾ ನೋಡಿಕೊಂಡೇ ಶಾಸಕ ಯತ್ನಾಳ್​​ ಸಿಎಂ ಬಿಎಸ್ ವೈ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಲು ಆರಂಭಿಸಿದ್ದರು. ಇದು ಸಹಜವಾಗಿ ಸಿಎಂ ಬಿಎಸ್​ವೈ ನಿದ್ದೆಗೆಡಿಸಿತ್ತು. ಸಾಕಷ್ಟು ಬಾರಿ ಪರೋಕ್ಷವಾಗಿ ಪಕ್ಷದ ನಾಯಕರು ಯತ್ನಾಳ ಅವರಿಗೆ ಎಚ್ಚರಿಕೆ ನೀಡಿದ್ದರು. ಇವರ ಈ ನಡೆ ರಾಷ್ಟ್ರೀಯ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಆದರೂ ಸಹ ಯತ್ನಾಳ್​​ ಮಾತ್ರ ತಮ್ಮ ವಾಗ್ದಾಳಿ ಮುಂದುವರೆಸಿದ್ದರು.

ಅನಿವಾರ್ಯವಾಗಿ ಸಿಎಂ ಬಿಎಸ್‍ವೈ , ಸಚಿವ ಸೋಮಣ್ಣ ಮೂಲಕ ಸಂಧಾನ ನಡೆಸಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಈ ನಡುವೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಹ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಕಾರಣ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರ ಜತೆ ಇತ್ತೀಚೆಗೆ ವಿಜಯಪುರಕ್ಕೆ ಆಗಮಿಸಿದ್ದ ಅವರು ಮಾತುಕತೆ ಸಹ ನಡೆಸಿದ್ದರು. ಆಗಲೂ ಸಹ ಯತ್ನಾಳ ತಮಗೆ ಸಚಿವ ಸ್ಥಾನ ಬೇಕಾಗಿಲ್ಲ, ವಿಜಯಪುರ ನಗರಕ್ಕೆ ಹೆಚ್ಚಿನ ಅನುದಾನ ದೊರಕಿಸಿಕೊಡುವಂತೆ ಒತ್ತಾಯಿಸಿದ್ದರು. ಇದರ ಪರಿಣಾಮ ಸಚಿವೆ ಶಶಿಕಲಾ ಜೊಲ್ಲೆ ಖುದ್ದು ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಶಾಸಕರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದರ ಜತೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ನಡೆಸಿದ ಹೋರಾಟದ ಪ್ರತಿಫಲವಾಗಿ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ಸಿಎಂ ಮಂಜೂರು ಮಾಡಿದ್ದರು.

ಸದ್ಯ ಯತ್ನಾಳ ನ.25ರವರೆಗೆ ಬಿಜೆಪಿ ಸರ್ಕಾರಕ್ಕೆ ಗಡುವು ನೀಡಿದ್ದು, ಅದರಲ್ಲಿ ಸಿಎಂ ಬಿಎಸ್​ವೈ ಶಾಸಕ ಯತ್ನಾಳರಿಗೆ ಸಚಿವ ಸ್ಥಾನದ ಜತೆ ವಿಜಯಪುರ ಜಿಲ್ಲಾ ಉಸ್ತುವಾರಿ ನೀಡದಿದ್ದರೇ ಮತ್ತೆ ಬಿಜೆಪಿ ಸರ್ಕಾರಕ್ಕೆ ಕಂಟಕ ಕಾಯ್ದಿದೆ ಎನ್ನುವುದು ಯತ್ನಾಳ್​​ ಬೆಂಬಲಿಗರ ಮಾತು.

ವಿಜಯಪುರ: ಆಪರೇಷನ್ ಕಮಲ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಾಗ ನಡೆದ ಸಚಿವ ಸ್ಥಾನದ ಲೆಕ್ಕಾಚಾರವೇ ತಪ್ಪಾಗಿ ಆರಂಭವಾಯಿತು. ಕೇವಲ ಬೆಂಗಳೂರು ಸುತ್ತಮುತ್ತಲೂ, ಹಿರಿಯ ಮುಖಂಡರು ಹಾಗೂ ಹೊರಗಡೆಯಿಂದ ಬಂದವರಿಗೆ ಸಚಿವ ಸ್ಥಾನ ನೀಡಿದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಸಹಜವಾಗಿ ಅಸಮಾಧಾನದ ಹೊಗೆ ಆಡಲು ಆರಂಭವಾಗಿತ್ತು.

ಬಿಜೆಪಿ ಫೈರ್​ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ವಿಜಯಪುರ ಜಿಲ್ಲೆಯಿಂದ ಮೂವರು ಬಿಜೆಪಿ ಪಕ್ಷದಿಂದ ಜಯಗಳಿಸಿದ್ದರು. ಇವರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಹೋಗಲಿ ಯಾವುದೇ ಸ್ಥಾನ ಮಾನ ನೀಡದಿರುವುದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೆಲ್ಲಾ ನೋಡಿಕೊಂಡೇ ಶಾಸಕ ಯತ್ನಾಳ್​​ ಸಿಎಂ ಬಿಎಸ್ ವೈ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಲು ಆರಂಭಿಸಿದ್ದರು. ಇದು ಸಹಜವಾಗಿ ಸಿಎಂ ಬಿಎಸ್​ವೈ ನಿದ್ದೆಗೆಡಿಸಿತ್ತು. ಸಾಕಷ್ಟು ಬಾರಿ ಪರೋಕ್ಷವಾಗಿ ಪಕ್ಷದ ನಾಯಕರು ಯತ್ನಾಳ ಅವರಿಗೆ ಎಚ್ಚರಿಕೆ ನೀಡಿದ್ದರು. ಇವರ ಈ ನಡೆ ರಾಷ್ಟ್ರೀಯ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಆದರೂ ಸಹ ಯತ್ನಾಳ್​​ ಮಾತ್ರ ತಮ್ಮ ವಾಗ್ದಾಳಿ ಮುಂದುವರೆಸಿದ್ದರು.

ಅನಿವಾರ್ಯವಾಗಿ ಸಿಎಂ ಬಿಎಸ್‍ವೈ , ಸಚಿವ ಸೋಮಣ್ಣ ಮೂಲಕ ಸಂಧಾನ ನಡೆಸಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಈ ನಡುವೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಹ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇರುವ ಕಾರಣ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ಅವರ ಜತೆ ಇತ್ತೀಚೆಗೆ ವಿಜಯಪುರಕ್ಕೆ ಆಗಮಿಸಿದ್ದ ಅವರು ಮಾತುಕತೆ ಸಹ ನಡೆಸಿದ್ದರು. ಆಗಲೂ ಸಹ ಯತ್ನಾಳ ತಮಗೆ ಸಚಿವ ಸ್ಥಾನ ಬೇಕಾಗಿಲ್ಲ, ವಿಜಯಪುರ ನಗರಕ್ಕೆ ಹೆಚ್ಚಿನ ಅನುದಾನ ದೊರಕಿಸಿಕೊಡುವಂತೆ ಒತ್ತಾಯಿಸಿದ್ದರು. ಇದರ ಪರಿಣಾಮ ಸಚಿವೆ ಶಶಿಕಲಾ ಜೊಲ್ಲೆ ಖುದ್ದು ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿ ಶಾಸಕರ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದರ ಜತೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ನಡೆಸಿದ ಹೋರಾಟದ ಪ್ರತಿಫಲವಾಗಿ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ಸಿಎಂ ಮಂಜೂರು ಮಾಡಿದ್ದರು.

ಸದ್ಯ ಯತ್ನಾಳ ನ.25ರವರೆಗೆ ಬಿಜೆಪಿ ಸರ್ಕಾರಕ್ಕೆ ಗಡುವು ನೀಡಿದ್ದು, ಅದರಲ್ಲಿ ಸಿಎಂ ಬಿಎಸ್​ವೈ ಶಾಸಕ ಯತ್ನಾಳರಿಗೆ ಸಚಿವ ಸ್ಥಾನದ ಜತೆ ವಿಜಯಪುರ ಜಿಲ್ಲಾ ಉಸ್ತುವಾರಿ ನೀಡದಿದ್ದರೇ ಮತ್ತೆ ಬಿಜೆಪಿ ಸರ್ಕಾರಕ್ಕೆ ಕಂಟಕ ಕಾಯ್ದಿದೆ ಎನ್ನುವುದು ಯತ್ನಾಳ್​​ ಬೆಂಬಲಿಗರ ಮಾತು.

Last Updated : Nov 12, 2020, 5:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.