ETV Bharat / state

'ಮತ್ಸ್ಯಸಂಪದ ಯೋಜನೆಯಡಿ ಸವಳು-ಜವಳು ಜಮೀನಿನಲ್ಲಿ ಮೀನುಗಾರಿಕೆ ಮಾಡಿ'

ಕೋಳೂರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಪೂಜಾ ಹಾಗೂ ರಸಮಂಜರಿ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತ್ಸ್ಯಸಂಪದ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.

author img

By

Published : Oct 26, 2020, 10:13 PM IST

MLA AS Patil Nadadhalli
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ: ತಾಲೂಕಿನಲ್ಲಿ ನೀರಾವರಿ ಕಾಲುವೆಗಳ ಅಕ್ಕಪಕ್ಕದಲ್ಲಿ ಕೆಲವಷ್ಟು ಜಮೀನುಗಳು ಸವಳು ಜವಳು ಆಗಿದ್ದು ಅಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಿದೆ. ಈ ದೆಸೆಯಲ್ಲಿ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ತಾಲೂಕಿನ ಕೋಳೂರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಪೂಜಾ ಹಾಗೂ ರಸಮಂಜರಿ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಮತ್ಸ್ಯಸಂಪದ ಯೋಜನೆಯಡಿ ಎಕರೆಗೆ 4 ಲಕ್ಷ ರೂ.ಆದಾಯ ಗಳಿಸುವ ಅವಕಾಶ ಇದೆ ಎಂದು ಮೀನುಗಾರಿಕಾ ಕ್ಷೇತ್ರದಲ್ಲಿರುವ ತಜ್ಞರೇ ಹೇಳುತ್ತಿದ್ದು ಈ ಯೋಜನೆಯ ಬಗ್ಗೆ ಗ್ರಾಮೀಣ ಭಾಗದ ಯುವಕರಿಗೆ ಮಾಹಿತಿ ಇಲ್ಲ. ಇದರ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಇನ್ನು ಯುವಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು. ಕೋವಿಡ್-19 ಸಮಯದಲ್ಲಿ ತಾಂಡಾದ ಶಿಕ್ಷಣ ಪ್ರೇಮಿ ರವಿ ನಾಯಕ ಅವರು ನೀಡಿದ ಸಹಕಾರವನ್ನು ಶಾಸಕರು ಸ್ಮರಿಸಿದರು.

ಎಸ್.ಎಸ್. ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ ರವಿ ನಾಯಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ, ಮುಖಂಡ ಶರಣು ಬೂದಿಹಾಳಮಠ, ಪಿಎಸೈ ಮಲ್ಲಪ್ಪ ಮಡ್ಡಿ, ಜಯರಾಂ ನಾಯಕ, ತಾಪಂ ಸದಸ್ಯ ಪ್ರೇಮಸಿಂಗ ಚವ್ಹಾಣ ಹಾಗೂ ಗೋಪಾಲ ಇಂಚಗೇರಿ ನೇತೃತ್ವದ ಕಲಾಸಿಂಚನ ಮೆಲೋಡಿಸ್ ತಂಡದಿಂದ ಕೊರೊನಾ ಜಾಗೃತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಮುದ್ದೇಬಿಹಾಳ: ತಾಲೂಕಿನಲ್ಲಿ ನೀರಾವರಿ ಕಾಲುವೆಗಳ ಅಕ್ಕಪಕ್ಕದಲ್ಲಿ ಕೆಲವಷ್ಟು ಜಮೀನುಗಳು ಸವಳು ಜವಳು ಆಗಿದ್ದು ಅಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಿದೆ. ಈ ದೆಸೆಯಲ್ಲಿ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ತಾಲೂಕಿನ ಕೋಳೂರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಪೂಜಾ ಹಾಗೂ ರಸಮಂಜರಿ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಮತ್ಸ್ಯಸಂಪದ ಯೋಜನೆಯಡಿ ಎಕರೆಗೆ 4 ಲಕ್ಷ ರೂ.ಆದಾಯ ಗಳಿಸುವ ಅವಕಾಶ ಇದೆ ಎಂದು ಮೀನುಗಾರಿಕಾ ಕ್ಷೇತ್ರದಲ್ಲಿರುವ ತಜ್ಞರೇ ಹೇಳುತ್ತಿದ್ದು ಈ ಯೋಜನೆಯ ಬಗ್ಗೆ ಗ್ರಾಮೀಣ ಭಾಗದ ಯುವಕರಿಗೆ ಮಾಹಿತಿ ಇಲ್ಲ. ಇದರ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಇನ್ನು ಯುವಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು. ಕೋವಿಡ್-19 ಸಮಯದಲ್ಲಿ ತಾಂಡಾದ ಶಿಕ್ಷಣ ಪ್ರೇಮಿ ರವಿ ನಾಯಕ ಅವರು ನೀಡಿದ ಸಹಕಾರವನ್ನು ಶಾಸಕರು ಸ್ಮರಿಸಿದರು.

ಎಸ್.ಎಸ್. ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ ರವಿ ನಾಯಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ, ಮುಖಂಡ ಶರಣು ಬೂದಿಹಾಳಮಠ, ಪಿಎಸೈ ಮಲ್ಲಪ್ಪ ಮಡ್ಡಿ, ಜಯರಾಂ ನಾಯಕ, ತಾಪಂ ಸದಸ್ಯ ಪ್ರೇಮಸಿಂಗ ಚವ್ಹಾಣ ಹಾಗೂ ಗೋಪಾಲ ಇಂಚಗೇರಿ ನೇತೃತ್ವದ ಕಲಾಸಿಂಚನ ಮೆಲೋಡಿಸ್ ತಂಡದಿಂದ ಕೊರೊನಾ ಜಾಗೃತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.