ETV Bharat / state

ಇಂಡಿಯಲ್ಲಿ ಮದ್ಯ ಸೇವನೆಗೆ ಕರೆದು ಯುವಕನ ಕೊಲೆ.. ಪ್ರೇಯಸಿಯ ಸಹೋದರನಿಂದಲೇ ಕೃತ್ಯ

author img

By

Published : Jan 12, 2022, 11:30 AM IST

ಇಂಡಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಯುವಕನೊಬ್ಬನ ಕೊಲೆ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

accused-arrested-in-indi-young-man-murder-case
ಇಂಡಿ ಯುವಕನ ಕೊಲೆ ಪ್ರಕರ

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ಜ.4ರಂದು ನಡೆದ ಯುವಕನೊಬ್ಬನ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಯುವಕನನ್ನು ಪ್ರೇಯಸಿಯ ಸಹೋದರನೇ ಕೊಲೆ ಮಾಡಿರುವುದು ಪೊಲೀಸ್​ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇಂಡಿ ಪಟ್ಟಣದಲ್ಲಿ ನಿತೇಶ ಮಾಶ್ಯಾಳಕರ (26) ಎಂಬ ಯುವಕನ ಕೊಲೆಯಾಗಿತ್ತು. ನಿತೀಶ ಹಾಗೂ ಯುವತಿಯೊಬ್ಬಳು ಕಳೆದ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಟ್ಟಿಗೆ ಪದವಿ ಓದುವಾಗಿನಿಂದಲೇ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಯುವತಿಯನ್ನು ಮಹಾರಾಷ್ಟ್ರದ ಯುವಕನೊಬ್ಬನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು.

ಮದುವೆಯಾದ ಬಳಿಕ ನಿತೇಶ ಮದ್ಯ ಸೇವಿಸಿ ಯುವತಿಗೆ ಕರೆ ಮಾಡುತ್ತಿದ್ದ. ಇದರಿಂದ ಮದುವೆಯಾದ ಕೆಲ ದಿನಗಳಲ್ಲೇ ಯುವತಿಯು ಪತಿಯನ್ನು ಬಿಟ್ಟು ಆತನ ಜೊತೆ ಬಂದಿದ್ದಳು. ಇಬ್ಬರೂ ಹೊಸ ಜೀವನಕ್ಕೆ ಆರಂಭಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಜನವರಿ 4ರಂದು ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದವರು ಯಾರು ಎಂಬ ಬಗ್ಗೆ ಖಾಕಿಗೆ ಸವಾಲು ಎದುರಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರಿಗೆ, ಯುವತಿ ಹಾಗೂ ನಿತೇಶ ಜೀವನ ಅವರು ಅಂದುಕೊಂಡಂತೆ ಇರಲಿಲ್ಲ. ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ನಿತೇಶ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ.‌ ಅಲ್ಲದೆ, ಇಬ್ಬರ ಜಗಳ ಬಿಡಿಸಲು ಬಂದಿದ್ದ ಯುವತಿಯ ಸಹೋದರನಾದ ಶಾಂತೇಶ ಕಂಬಾರ ಜೊತೆಗೂ ಜಗಳವಾಡಿದ್ದ ಎಂಬುದು ತಿಳಿದಿದೆ.

ಬಳಿಕ ಘಟನೆಯಿಂದ ಕುಪಿತಗೊಂಡ ಶಾಂತೇಶ, ಎರಡು ದಿನಗಳ‌ ಬಳಿಕ ಮದ್ಯ ಸೇವಿಸಲು ನಿತೀಶನನ್ನು ಕರೆದುಕೊಂಡು ಹೋಗಿ ಇಂಡಿ ಹೊರವಲಯದ ದಾಬಾ ಬಳಿ ಕೊಲೆ ಮಾಡಿದ್ದ. ಇದೀಗ ಪೊಲೀಸರು ಯುವತಿಯ ವಿಚಾರಣೆ ನಡೆಸಿದ್ದು, ಆಕೆಯ ಸಹೋದರ ಶಾಂತೇಶನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರು ಬಂದಾಗ ಬಾಗಿಲು ಹಾಕಿದ್ದ ಠಾಣೆ:‌ ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ಜ.4ರಂದು ನಡೆದ ಯುವಕನೊಬ್ಬನ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಯುವಕನನ್ನು ಪ್ರೇಯಸಿಯ ಸಹೋದರನೇ ಕೊಲೆ ಮಾಡಿರುವುದು ಪೊಲೀಸ್​ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇಂಡಿ ಪಟ್ಟಣದಲ್ಲಿ ನಿತೇಶ ಮಾಶ್ಯಾಳಕರ (26) ಎಂಬ ಯುವಕನ ಕೊಲೆಯಾಗಿತ್ತು. ನಿತೀಶ ಹಾಗೂ ಯುವತಿಯೊಬ್ಬಳು ಕಳೆದ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಟ್ಟಿಗೆ ಪದವಿ ಓದುವಾಗಿನಿಂದಲೇ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಯುವತಿಯನ್ನು ಮಹಾರಾಷ್ಟ್ರದ ಯುವಕನೊಬ್ಬನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು.

ಮದುವೆಯಾದ ಬಳಿಕ ನಿತೇಶ ಮದ್ಯ ಸೇವಿಸಿ ಯುವತಿಗೆ ಕರೆ ಮಾಡುತ್ತಿದ್ದ. ಇದರಿಂದ ಮದುವೆಯಾದ ಕೆಲ ದಿನಗಳಲ್ಲೇ ಯುವತಿಯು ಪತಿಯನ್ನು ಬಿಟ್ಟು ಆತನ ಜೊತೆ ಬಂದಿದ್ದಳು. ಇಬ್ಬರೂ ಹೊಸ ಜೀವನಕ್ಕೆ ಆರಂಭಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಜನವರಿ 4ರಂದು ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದವರು ಯಾರು ಎಂಬ ಬಗ್ಗೆ ಖಾಕಿಗೆ ಸವಾಲು ಎದುರಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರಿಗೆ, ಯುವತಿ ಹಾಗೂ ನಿತೇಶ ಜೀವನ ಅವರು ಅಂದುಕೊಂಡಂತೆ ಇರಲಿಲ್ಲ. ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ನಿತೇಶ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ.‌ ಅಲ್ಲದೆ, ಇಬ್ಬರ ಜಗಳ ಬಿಡಿಸಲು ಬಂದಿದ್ದ ಯುವತಿಯ ಸಹೋದರನಾದ ಶಾಂತೇಶ ಕಂಬಾರ ಜೊತೆಗೂ ಜಗಳವಾಡಿದ್ದ ಎಂಬುದು ತಿಳಿದಿದೆ.

ಬಳಿಕ ಘಟನೆಯಿಂದ ಕುಪಿತಗೊಂಡ ಶಾಂತೇಶ, ಎರಡು ದಿನಗಳ‌ ಬಳಿಕ ಮದ್ಯ ಸೇವಿಸಲು ನಿತೀಶನನ್ನು ಕರೆದುಕೊಂಡು ಹೋಗಿ ಇಂಡಿ ಹೊರವಲಯದ ದಾಬಾ ಬಳಿ ಕೊಲೆ ಮಾಡಿದ್ದ. ಇದೀಗ ಪೊಲೀಸರು ಯುವತಿಯ ವಿಚಾರಣೆ ನಡೆಸಿದ್ದು, ಆಕೆಯ ಸಹೋದರ ಶಾಂತೇಶನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರು ಬಂದಾಗ ಬಾಗಿಲು ಹಾಕಿದ್ದ ಠಾಣೆ:‌ ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.