ETV Bharat / state

ಧೂಳಖೇಡ ಚೆಕ್​​ಪೋಸ್ಟ್ ಮೇಲೆ ಎಸಿಬಿ ದಾಳಿ: ಇಬ್ಬರು ಕಾವಲುಗಾರರ ಬಂಧನ - ಧೂಳಖೇಡ ಚೆಕ್​​ಪೋಸ್ಟ್ ಮೇಲೆ ಎಸಿಬಿ ದಾಳಿ

ಲಾರಿ ಚಾಲಕರಿಂದ ಲಂಚ ಕೇಳಿದ ಗಂಭೀರ ಆರೋಪದಡಿ ಧೂಳಖೇಡ ಚೆಕ್​​​ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕಾವಲುಗಾರರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ACB raid
ಸಾಂದರ್ಭಿಕ ಚಿತ್ರ
author img

By

Published : Dec 1, 2021, 9:30 AM IST

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಚೆಕ್​​ಪೋಸ್ಟ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದರು.

ಲಾರಿ ಚಾಲಕನಿಂದ ಲಂಚ ಕೇಳಿದ ಗಂಭೀರ ಆರೋಪದಡಿ ಧೂಳಖೇಡ ಚೆಕ್​​​ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ ಹವಲಿ ಹಾಗು ಗಂಗಾರಾಮ ಪಾಟೀಲ ಎಂಬಿಬ್ಬರು ಕಾವಲುಗಾರರನ್ನು ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ.

ಗುಜರಾತ್ ಮೂಲದ ಲಾರಿ‌ ತಡೆದ ಆರೋಪಿಗಳು, ಚಾಲಕನಿಂದ ಒಂದು ಸಾವಿರ ರೂ. ಲಂಚ ಕೇಳಿದ್ದರು. ಇದರಿಂದ ಬೇಸತ್ತ ಲಾರಿ ಚಾಲಕ ದ್ವಾರಕೀಶ ಎಂಬಾತ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾನೆ. ತಕ್ಷಣ ಧೂಳಖೇಡ ಚೆಕ್​​ಪೋಸ್ಟ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಚಾಲಕನಿಂದ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿಜಯಪುರ ಎಸಿಬಿ ಡಿವೈಎಸ್​​ಪಿ ಮಾಹಿತಿ ನೀಡಿದರು.

ಇದನ್ನೂ ಓದಿ: ಅಮೆರಿಕ: ಶಾಲೆಯಲ್ಲಿ 15 ವರ್ಷದ ಬಾಲಕನಿಂದ ಗುಂಡಿನ ದಾಳಿ, ಮೂವರು ಸಾವು

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಚೆಕ್​​ಪೋಸ್ಟ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದರು.

ಲಾರಿ ಚಾಲಕನಿಂದ ಲಂಚ ಕೇಳಿದ ಗಂಭೀರ ಆರೋಪದಡಿ ಧೂಳಖೇಡ ಚೆಕ್​​​ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ ಹವಲಿ ಹಾಗು ಗಂಗಾರಾಮ ಪಾಟೀಲ ಎಂಬಿಬ್ಬರು ಕಾವಲುಗಾರರನ್ನು ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ.

ಗುಜರಾತ್ ಮೂಲದ ಲಾರಿ‌ ತಡೆದ ಆರೋಪಿಗಳು, ಚಾಲಕನಿಂದ ಒಂದು ಸಾವಿರ ರೂ. ಲಂಚ ಕೇಳಿದ್ದರು. ಇದರಿಂದ ಬೇಸತ್ತ ಲಾರಿ ಚಾಲಕ ದ್ವಾರಕೀಶ ಎಂಬಾತ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾನೆ. ತಕ್ಷಣ ಧೂಳಖೇಡ ಚೆಕ್​​ಪೋಸ್ಟ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಚಾಲಕನಿಂದ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿಜಯಪುರ ಎಸಿಬಿ ಡಿವೈಎಸ್​​ಪಿ ಮಾಹಿತಿ ನೀಡಿದರು.

ಇದನ್ನೂ ಓದಿ: ಅಮೆರಿಕ: ಶಾಲೆಯಲ್ಲಿ 15 ವರ್ಷದ ಬಾಲಕನಿಂದ ಗುಂಡಿನ ದಾಳಿ, ಮೂವರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.