ETV Bharat / state

ಗುಡ್ಡದಿಂದ ಹೆದ್ದಾರಿಗೆ ಉರುಳಿದ ಕಲ್ಲು: ಅದೃಷ್ಟವಶಾತ್ ಬೈಕ್ ಸವಾರ ಪಾರು!

author img

By

Published : Jun 11, 2020, 1:32 PM IST

ಹೊನ್ನಾವರದ ಹೊಸಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಗುಡ್ಡದಿಂದ ಕಲ್ಲು ಉರುಳಿ ಬಿದ್ದಿದೆ. ಆ ಕಲ್ಲು ಬೈಕ್​​ಗೆ ಬಡಿದಿದ್ದು, ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

stone fall down in karwar
ರಸ್ತೆಗೆ ಉರುಳಿದ ಕಲ್ಲು

ಕಾರವಾರ: ಗುಡ್ಡದಿಂದ ಬೃಹತ್ ಕಲ್ಲೊಂದು ಉರುಳಿ ಹೆದ್ದಾರಿಗೆ ಬಿದ್ದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪಾರಾಗಿದ್ದಾನೆ. ಈ ಘಟನೆ ಹೊನ್ನಾವರದ ಹೊಸ ಪಟ್ಟಣದ ಬಳಿ ಇಂದು ಬೆಳಗ್ಗೆ ನಡೆದಿದೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ನಾಯ್ಕ ಎಂಬುವರ ಬೈಕ್​​​​​ಗೆ ಇದೇ ವೇಳೆ ಕಲ್ಲು ಬಡಿದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ.

stone fall down in karwar
ಘಟನೆಯಿಂದ ಪಾರಾದ ಬೈಕ್​ ಸವಾರ

ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ ಗುಡ್ಡಗಳನ್ನು ತೆರವುಗೊಳಿಸಿದ್ದು, ಅವೈಜ್ಞಾನಿಕವಾಗಿ ಕೊರೆದ ಗುಡ್ಡದಿಂದ ಕಲ್ಲು ಉರುಳಿದೆ ಎನ್ನಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡಗಳು ಕುಸಿದು ಅನಾಹುತ ಸಂಭವಿಸುತ್ತಿದ್ದರೂ ಗುತ್ತಿಗೆ ಕಂಪನಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಗೆ ಉರುಳಿದ ಕಲ್ಲು

ಕಾರವಾರ: ಗುಡ್ಡದಿಂದ ಬೃಹತ್ ಕಲ್ಲೊಂದು ಉರುಳಿ ಹೆದ್ದಾರಿಗೆ ಬಿದ್ದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪಾರಾಗಿದ್ದಾನೆ. ಈ ಘಟನೆ ಹೊನ್ನಾವರದ ಹೊಸ ಪಟ್ಟಣದ ಬಳಿ ಇಂದು ಬೆಳಗ್ಗೆ ನಡೆದಿದೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ನಾಯ್ಕ ಎಂಬುವರ ಬೈಕ್​​​​​ಗೆ ಇದೇ ವೇಳೆ ಕಲ್ಲು ಬಡಿದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದಾರೆ.

stone fall down in karwar
ಘಟನೆಯಿಂದ ಪಾರಾದ ಬೈಕ್​ ಸವಾರ

ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ ಗುಡ್ಡಗಳನ್ನು ತೆರವುಗೊಳಿಸಿದ್ದು, ಅವೈಜ್ಞಾನಿಕವಾಗಿ ಕೊರೆದ ಗುಡ್ಡದಿಂದ ಕಲ್ಲು ಉರುಳಿದೆ ಎನ್ನಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಗುಡ್ಡಗಳು ಕುಸಿದು ಅನಾಹುತ ಸಂಭವಿಸುತ್ತಿದ್ದರೂ ಗುತ್ತಿಗೆ ಕಂಪನಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಗೆ ಉರುಳಿದ ಕಲ್ಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.