ETV Bharat / state

ನನ್ನ ಭೇಟಿಗೆ ಎಲ್ಲರಿಗೂ ಅವಕಾಶ ನೀಡುತ್ತೇನೆ: ಸಚಿವ ಆನಂದ ಸಿಂಗ್​ ವಿಚಾರ ಕುರಿತು ಸ್ಪೀಕರ್​ ಕಾಗೇರಿ ಸ್ಪಷ್ಟನೆ

author img

By

Published : Aug 11, 2021, 1:35 PM IST

Updated : Aug 11, 2021, 2:25 PM IST

ಊರಲ್ಲಿ ಇದ್ದಾಗ ಸ್ಥಳೀಯರಿಗೆ ಸಿಗುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ಇದ್ದಾಗ ಯಾರ್ಯಾರಿಗೆ ಅಗತ್ಯ ಇದೆಯೋ ಅವರನ್ನು ಭೇಟಿ ಆಗುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

speaker-vishweshwara-hegde
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ : ನಾನು ನನ್ನ ಮನೆ ಹಾಗೂ ಕಚೇರಿಯಲ್ಲಿ ಜನರಿಗೆ ಅಥವಾ ಜನಪ್ರತಿನಿಧಿಗಳಿಗೆ ಸದಾ ಲಭ್ಯವಿರುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಸಚಿವ ಆನಂದ್ ಸಿಂಗ್ ಸಮಯ ಕೇಳಿದ್ದರ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಊರಲ್ಲಿ ಇದ್ದಾಗ ಸ್ಥಳೀಯರಿಗೆ ಸಿಗುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ಇದ್ದಾಗ ಯಾರ್ಯಾರಿಗೆ ಅಗತ್ಯ ಇದೆಯೋ ಅವರು ಬಂದು ಭೇಟಿ ಆಗಬಹುದು ಎಂದರು.‌

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ನನ್ನ ಭೇಟಿಗೆ ಅವಕಾಶ ಕೇಳಿದವರಿಗೆ ನಿಶ್ಚಿತವಾಗಿಯೂ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ಸಚಿವ ಆನಂದ್​ ಸಿಂಗ್ ಅವಕಾಶ ಕೇಳಿದ್ದಾರೋ, ಇಲ್ಲವೋ ಎಂಬುದರ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸಲು ನಿರಾಕರಿಸಿದರು.

ಶಿರಸಿ : ನಾನು ನನ್ನ ಮನೆ ಹಾಗೂ ಕಚೇರಿಯಲ್ಲಿ ಜನರಿಗೆ ಅಥವಾ ಜನಪ್ರತಿನಿಧಿಗಳಿಗೆ ಸದಾ ಲಭ್ಯವಿರುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಸಚಿವ ಆನಂದ್ ಸಿಂಗ್ ಸಮಯ ಕೇಳಿದ್ದರ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಊರಲ್ಲಿ ಇದ್ದಾಗ ಸ್ಥಳೀಯರಿಗೆ ಸಿಗುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ಇದ್ದಾಗ ಯಾರ್ಯಾರಿಗೆ ಅಗತ್ಯ ಇದೆಯೋ ಅವರು ಬಂದು ಭೇಟಿ ಆಗಬಹುದು ಎಂದರು.‌

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ನನ್ನ ಭೇಟಿಗೆ ಅವಕಾಶ ಕೇಳಿದವರಿಗೆ ನಿಶ್ಚಿತವಾಗಿಯೂ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ಸಚಿವ ಆನಂದ್​ ಸಿಂಗ್ ಅವಕಾಶ ಕೇಳಿದ್ದಾರೋ, ಇಲ್ಲವೋ ಎಂಬುದರ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸಲು ನಿರಾಕರಿಸಿದರು.

Last Updated : Aug 11, 2021, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.