ETV Bharat / state

ಸ್ಪೀಕರ್ ತವರಲ್ಲಿ 3 ವರ್ಷ ಕಳೆದ್ರೂ ಮುಗಿಯದ ಬಸ್ ನಿಲ್ದಾಣದ ಕಾಮಗಾರಿ - ಸಿದ್ದಾಪುರದ ಹೊಸ ಬಸ್ ನಿಲ್ದಾಣದ ಕಾಮಗಾರಿ

ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರ ಸಿದ್ದಾಪುರದಲ್ಲಿ ನಿರ್ಮಾಣ ಆಗುತ್ತಿರುವ ನೂತನ ಬಸ್​ ನಿಲ್ದಾಣ ಕಾಮಗಾರಿಯು ತೆವಳುತ್ತಾ ಸಾಗುತ್ತಿದೆ. ಕೋಟ್ಯಾಂತರ ರೂ. ಅನುದಾನ ಬಿಡುಗಡೆಯಾಗಿ 3 ವರ್ಷಗಳ ಹಿಂದೆಯೇ ಯೋಜನೆ ಚಾಲನೆಗೊಂಡಿದ್ದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರಯಾಣಿಕರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾ ಪ್ರಯಾಣಿಸುತ್ತಿದ್ದಾರೆ.

ಮೂರು ವರ್ಷ ಕಳೆದ್ರೂ ಮುಗಿಯದ ಬಸ್ ನಿಲ್ದಾಣದ ಕಾಮಗಾರಿ
author img

By

Published : Sep 28, 2019, 5:54 AM IST

ಶಿರಸಿ: ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಕ್ಷೇತ್ರ ಸಿದ್ದಾಪುರದಲ್ಲಿನ ಹೊಸ ಬಸ್ ನಿಲ್ದಾಣದ ಕಾಮಗಾರಿಯು ತೆವಳುತ್ತಲ್ಲೆ ಸಾಗುತ್ತಿದೆ. ಕಾಮಗಾರಿ ಆರಂಭಗೊಂದು ಮೂರು ವರ್ಷ ಪೂರೈಸಿದ್ದರೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮೂರು ವರ್ಷ ಕಳೆದರೂ ಮುಗಿಯದ ಸಿದ್ದಾಪುರದ ನೂತನ ಬಸ್ ನಿಲ್ದಾಣದ ಕಾಮಗಾರಿ

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನರಿಗೆ ಅನುಕೂಲವಾಗಲೆಂದು ಹೊಸ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ನಿಲ್ದಾಣದ ಕಾಮಗಾರಿ ಆರಂಭವಾಗಿ 3 ವರ್ಷ ಕಳೆದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಹಳೆ ಬಸ್ ನಿಲ್ದಾಣದಲ್ಲಿ ಜನ ನಿಲ್ಲಲು ಆಗದಂತಹ ಅವ್ಯವಸ್ಥೆಯಿಂದ ಕೂಡಿದೆ. ಒಂದೆಡೆ ಕಟ್ಟಡ ಮಳೆ ನೀರಿನಿಂದ ಸೋರುತ್ತಿದ್ದು, ಸ್ವಲ್ಪವೇ ಮಳೆ ಸುರಿದರು ಬಸ್ ನಿಲ್ದಾಣವೇ ಕೆಸರು ಗದ್ದೆಯಂತಾಗುತ್ತದೆ. ನಿಲ್ದಾಣದ ಒಳಗಡೆ ಸಹ ನೀರು ಸೋರುತ್ತದೆ. ಇನ್ನು ಶೌಚಾಲಯ ಸಾಂಕ್ರಮಿಕ ರೋಗಗಳ ವಾಸ ಸ್ಥಾನವಾಗಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಸಾರ್ವಜನಿಕರು ಗುತ್ತಿಗೆದಾರರನ್ನು ಮನವಿ ಮಾಡಿದ್ದಾರೆ.

ಶಿರಸಿ: ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಕ್ಷೇತ್ರ ಸಿದ್ದಾಪುರದಲ್ಲಿನ ಹೊಸ ಬಸ್ ನಿಲ್ದಾಣದ ಕಾಮಗಾರಿಯು ತೆವಳುತ್ತಲ್ಲೆ ಸಾಗುತ್ತಿದೆ. ಕಾಮಗಾರಿ ಆರಂಭಗೊಂದು ಮೂರು ವರ್ಷ ಪೂರೈಸಿದ್ದರೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮೂರು ವರ್ಷ ಕಳೆದರೂ ಮುಗಿಯದ ಸಿದ್ದಾಪುರದ ನೂತನ ಬಸ್ ನಿಲ್ದಾಣದ ಕಾಮಗಾರಿ

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನರಿಗೆ ಅನುಕೂಲವಾಗಲೆಂದು ಹೊಸ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ನಿಲ್ದಾಣದ ಕಾಮಗಾರಿ ಆರಂಭವಾಗಿ 3 ವರ್ಷ ಕಳೆದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಹಳೆ ಬಸ್ ನಿಲ್ದಾಣದಲ್ಲಿ ಜನ ನಿಲ್ಲಲು ಆಗದಂತಹ ಅವ್ಯವಸ್ಥೆಯಿಂದ ಕೂಡಿದೆ. ಒಂದೆಡೆ ಕಟ್ಟಡ ಮಳೆ ನೀರಿನಿಂದ ಸೋರುತ್ತಿದ್ದು, ಸ್ವಲ್ಪವೇ ಮಳೆ ಸುರಿದರು ಬಸ್ ನಿಲ್ದಾಣವೇ ಕೆಸರು ಗದ್ದೆಯಂತಾಗುತ್ತದೆ. ನಿಲ್ದಾಣದ ಒಳಗಡೆ ಸಹ ನೀರು ಸೋರುತ್ತದೆ. ಇನ್ನು ಶೌಚಾಲಯ ಸಾಂಕ್ರಮಿಕ ರೋಗಗಳ ವಾಸ ಸ್ಥಾನವಾಗಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಸಾರ್ವಜನಿಕರು ಗುತ್ತಿಗೆದಾರರನ್ನು ಮನವಿ ಮಾಡಿದ್ದಾರೆ.

Intro:ಶಿರಸಿ :
ಒಂದೆಡೆ ಹೊಂಡಗುಂಡಿಗಳಿಂದ ತುಂಬಿರೋ ಬಸ್ ನಿಲ್ದಾಣ, ಇನ್ನೊಂದೆಡೆ ಆಮೆಗತಿಯಲ್ಲಿ ಸಾಗ್ತಿರೋ ಹೊಸ ಕಟ್ಟಡ ಕಾಮಗಾರಿ, ಈ ಮಧ್ಯೆ ಹಂಗೂಹಿಂಗೂ ಓಡಾಡ್ತಿರೋ ಪ್ರಯಾಣಿಕರು ಕಾಣ ಸಿಗುವುದು ಯಾವುದೋ ಕುಗ್ರಾಮದಲ್ಲಿ ಅಲ್ಲ. ಬದಲಾಗಿ ತಾಲೂಕಾ ಕೇಂದ್ರದಲ್ಲಿ ಅನ್ನೋದು ವಿಶೇಷ.

ಕಳೆದ ಮೂರು ವರ್ಷಗಳಿಂದ ನಿರ್ಮಾಣವಾಗ್ತಾನೆ ಇದೆ ಈ ಬಸ್ ನಿಲ್ದಾಣ, ಇನ್ನೂ ಕೂಡ ಮುಗಿದಿಲ್ಲ ನಿಲ್ದಾಣದ ಕಾಮಗಾರಿ, ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಗತಿ ದೇವರಿಗೇ ಪ್ರೀತಿ... ಹೌದು, ವಿಧಾನಸಭೆ ಸ್ಪೀಕರ್ ಕ್ಷೇತ್ರ ಸಿದ್ದಾಪುರದ ಹೊಸ ಬಸ್ ನಿಲ್ದಾಣದ ಕಥೆ ಇದಾಗಿದೆ.

Body:ವಿಶ್ವೇಶ್ವರ ಹೆಗಡೆ ಕಾಗೇರಿಯವ್ರು ಜನರಿಗೆ ಅನುಕೂಲ ಆಗ್ಲಿ ಅಂತ ಹೊಸ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡ್ಸಿದ್ರು. ಏಕೆಂದ್ರೆ ಸಿದ್ದಾಪುರದಲ್ಲಿ ಈಗಿರೋ ಬಸ್ ನಿಲ್ದಾಣ ಪುರಾತನ ಕಾಲದ್ದು. ತಾಲೂಕಾ ಬಸ್ ನಿಲ್ದಾಣವಾದ್ರೂ ಕೂಡ ಸರಿಯಾಗಿ 10 ಬಸ್ ನಿಲ್ಲೋ ಸಾಮರ್ಥ್ಯವಿಲ್ಲ. ನಿಲ್ದಾಣದ ಕಟ್ಟಡ ಕೂಡ ಸೋರುತ್ತಿದ್ದು ಹಳೆಯದಾಗಿತ್ತು. ಇದನ್ನೆಲ್ಲಾ ಮನಗಂಡು ಕಾಗೇರಿ ಅನುದಾನ ತರೋವಲ್ಲಿ ಯಶಸ್ವಿಯಾಗಿದ್ರು. ಆದ್ರೆ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಿ 3 ವರ್ಷ ಕಳೆದರೂ ಕೂಡ ಇನ್ನೂವರೆಗೆ ಅರ್ಧ ಆಗಿಲ್ಲ. ಹಳೇ ಬಸ್ ನಿಲ್ದಾಣದ ಪರಿಸ್ಥಿತಿ ನೋಡಿದ್ರೆ ಜನ ನಿಲ್ಲೋಕಾಗದೆ ಇರೋವಂಥ ಪರಿಸ್ಥಿತಿ. ಕಟ್ಟಡ ಸೋರುತ್ತಿದ್ದು, ಮಳೆ ಬಂದಾಗ ಬಸ್ ನಿಲ್ದಾಣ ಸ್ವಿಮ್ಮಿಂಗ್ ಪೂಲ್ ನಂತಾಗಿರುತ್ತೆ. ಒಳಗಡೆ ನಿಂತ್ರೆ ಸೋರುತ್ತೆ, ಹೊರಗಡೆ ನಿಂತ್ರೆ ಬಸ್ ನಿಂದ ಹಾರೋ ಕೊಳಚೆ ನೀರಿನಿಂದ ಮೈಯೆಲ್ಲಾ ರಾಡಿಯಾಗುತ್ತೆ. ಇನ್ನು ಶೌಚಾಲಯಕ್ಕೆ ಹೋದ್ರೆ ಮೂಗು ಮುಚ್ಚಿಕೊಂಡೇ ಹೊರಬರೋ ಸ್ಥಿತಿ. ಇಷ್ಟೆಲ್ಲ ಇದ್ರೂ ಕೂಡ ಹೊಸ ಬಸ್ ನಿಲ್ದಾಣದ ಕಾಮಗಾರಿ ತ್ವರಿತಗೊಳ್ಳುತ್ತಿಲ್ಲ. ಇದಕ್ಕೆ ಕಾಮಗಾರಿ ಗುತ್ತಿಗೆ ಪಡೆದವರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗ್ತಿದೆ.

ಬೈಟ್ (೧) : ವೀರಭದ್ರ ಗೌಡ ( ಸಾಮಾಜಿಕ ಕಾರ್ಯಕರ್ತ)
..........
ಸಂದೇಶ ಭಟ್ ಶಿರಸಿ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.