ETV Bharat / state

ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಯ್ತು ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಚಿಕಿತ್ಸೆ - ಶಿರಸಿ ಉಚಿತ ಆಪರೇಷನ್​ ಸುದ್ದಿ

ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂ. ಖರ್ಚಾಗುವ ಆಪರೇಷನ್ ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆದಿದ್ದು, ಚಿಕಿತ್ಸೆಗೆ ಒಳಗಾದ ಮಹಿಳೆ ಸುರಕ್ಷಿತವಾಗಿದ್ದಾಳೆ.

government hospital
ಉಚಿತ ಆಪರೇಶನ್
author img

By

Published : Dec 12, 2019, 11:02 PM IST

ಶಿರಸಿ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರಿಗೆ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾದರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂ. ಖರ್ಚಾಗುವ ಆಪರೇಷನ್​ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆದಿದ್ದು, ಚಿಕಿತ್ಸೆಗೆ ಒಳಗಾದ ಮಹಿಳೆ ಕ್ಷೇಮವಾಗಿದ್ದಾಳೆ.

ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೂರುವರೆ ತಾಸು ಆಪರೇಷನ್​ ನಡೆಸಿ, ಮಹಿಳೆಯ ಮೂತ್ರನಾಳ ಕಸಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಬೆಳಗಾವಿಯ ಮಹಿಳೆ ಡೆಲಿವರಿ ಸಂದರ್ಭದಲ್ಲಿ ಸಿಜೇರಿನ್​ ಮಾಡಿಸಿದ್ದು, ಆಗ ಮೂತ್ರ ನಾಳಕ್ಕೆ ಘಾಸಿಯಾಗಿತ್ತು. 6 ತಿಂಗಳಿಂದ ನಿಯಂತ್ರಣ ಇಲ್ಲದೇ ಮೂತ್ರ ಸೋರಿಕೆ ಆಗುತ್ತಿತ್ತು. ಗಾಬರಿಗೊಂಡ ಮಹಿಳೆಯು ಹಲವು ಕಡೆ ತೋರಿಸಿದ್ದರೂ ಪ್ರಯೋಜನ ಆಗದೇ ಸಂಕಷ್ಟದಲ್ಲಿದ್ದಳು. ನಂತರ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿ ಚಿಕಿತ್ಸೆ ಪಡೆದು ಈಗ ಸುರಕ್ಷಿತವಾಗಿದ್ದಾಳೆ.

ಮಹಿಳೆಗೆ ಯಾರೋ ಕೊಟ್ಟ ಮಾಹಿತಿಯಂತೆ ಶಿರಸಿ ಆಸ್ಪತ್ರೆಯ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ಸಂಪರ್ಕಿಸಲು ಶಿರಸಿ ಆಸ್ಪತ್ರೆಗೆ ಬಂದರು. ನಂತರ ಡಾ.ಗಜಾನನ ಭಟ್ಟರು ಸರ್ಕಾರಿ ಆಸ್ಪತ್ರೆ ವೈದ್ಯರಾದ ಬಸವಗೌಡ, ಡಾ.ಪದ್ಮಿನಿ, ಡಾ.ರೇವಣಕರ, ಡಾ.ನೇತ್ರಾವತಿ, ನರ್ಸ್​ ರಾಣಿ, ಸಹಾಯಕ ನರಸಿಂಹ ಅವರ ಸಹಕಾರದಿಂದ ಕಳೆದ ವಾರ ಶಿರಸಿ ಆಸ್ಪತ್ರೆಯಲ್ಲಿ ಆಪರೇಷನ್ ಅನ್ನು ಯಶಸ್ವಿಯಾಗಿ ಮಾಡಿದ್ದಾರೆ. ಶಿರಸಿ ಆಸ್ಪತ್ರೆಯಲ್ಲಿ ಐಸಿಯು ಇರದೇ ಇದ್ದರೂ ಇತರೆ ಸವಾಲಿನ ನಡುವೆ ಮಹಿಳೆ ಸಾಕಷ್ಟು ಸುಧಾರಣೆಯಾಗಿದ್ದಾಳೆಂದು ವೈದ್ಯ ಗಜಾನನ ಭಟ್ಟ ತಿಳಿಸಿದರು.

ಇನ್ನು, ಇದೇ ಆಪರೇಷನ್ ಖಾಸಗಿ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ.ಗಿಂತ ಹೆಚ್ಚು ಬಿಲ್ ಆಗುತ್ತಿತ್ತು. ನಾವು ಉಚಿತವಾಗಿ ಮಾಡಿದ್ದು, 5000 ರೂಪಾಯಿಯನ್ನು ವೈದ್ಯರೇ ಭರಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗೆ ಎಲ್ಲ ಉತ್ತಮ ಸೌಲಭ್ಯ ಸಿಕ್ಕರೆ ಇನ್ನಷ್ಟು ಸವಾಲಿನ ಆಪರೇಷನ್​ ಮಾಡಲು ಸಿದ್ಧರಿದ್ದೇವೆ. ರೋಗಿಗಳು ಸಹ ನಂಬಿಕೆಯಿಂದ ಬರಬೇಕು ಎಂದು ವಐದ್ಯರು ತಿಳಿಸಿದ್ದಾರೆ.

ಶಿರಸಿ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರಿಗೆ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾದರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂ. ಖರ್ಚಾಗುವ ಆಪರೇಷನ್​ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆದಿದ್ದು, ಚಿಕಿತ್ಸೆಗೆ ಒಳಗಾದ ಮಹಿಳೆ ಕ್ಷೇಮವಾಗಿದ್ದಾಳೆ.

ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೂರುವರೆ ತಾಸು ಆಪರೇಷನ್​ ನಡೆಸಿ, ಮಹಿಳೆಯ ಮೂತ್ರನಾಳ ಕಸಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಬೆಳಗಾವಿಯ ಮಹಿಳೆ ಡೆಲಿವರಿ ಸಂದರ್ಭದಲ್ಲಿ ಸಿಜೇರಿನ್​ ಮಾಡಿಸಿದ್ದು, ಆಗ ಮೂತ್ರ ನಾಳಕ್ಕೆ ಘಾಸಿಯಾಗಿತ್ತು. 6 ತಿಂಗಳಿಂದ ನಿಯಂತ್ರಣ ಇಲ್ಲದೇ ಮೂತ್ರ ಸೋರಿಕೆ ಆಗುತ್ತಿತ್ತು. ಗಾಬರಿಗೊಂಡ ಮಹಿಳೆಯು ಹಲವು ಕಡೆ ತೋರಿಸಿದ್ದರೂ ಪ್ರಯೋಜನ ಆಗದೇ ಸಂಕಷ್ಟದಲ್ಲಿದ್ದಳು. ನಂತರ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿ ಚಿಕಿತ್ಸೆ ಪಡೆದು ಈಗ ಸುರಕ್ಷಿತವಾಗಿದ್ದಾಳೆ.

ಮಹಿಳೆಗೆ ಯಾರೋ ಕೊಟ್ಟ ಮಾಹಿತಿಯಂತೆ ಶಿರಸಿ ಆಸ್ಪತ್ರೆಯ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ಸಂಪರ್ಕಿಸಲು ಶಿರಸಿ ಆಸ್ಪತ್ರೆಗೆ ಬಂದರು. ನಂತರ ಡಾ.ಗಜಾನನ ಭಟ್ಟರು ಸರ್ಕಾರಿ ಆಸ್ಪತ್ರೆ ವೈದ್ಯರಾದ ಬಸವಗೌಡ, ಡಾ.ಪದ್ಮಿನಿ, ಡಾ.ರೇವಣಕರ, ಡಾ.ನೇತ್ರಾವತಿ, ನರ್ಸ್​ ರಾಣಿ, ಸಹಾಯಕ ನರಸಿಂಹ ಅವರ ಸಹಕಾರದಿಂದ ಕಳೆದ ವಾರ ಶಿರಸಿ ಆಸ್ಪತ್ರೆಯಲ್ಲಿ ಆಪರೇಷನ್ ಅನ್ನು ಯಶಸ್ವಿಯಾಗಿ ಮಾಡಿದ್ದಾರೆ. ಶಿರಸಿ ಆಸ್ಪತ್ರೆಯಲ್ಲಿ ಐಸಿಯು ಇರದೇ ಇದ್ದರೂ ಇತರೆ ಸವಾಲಿನ ನಡುವೆ ಮಹಿಳೆ ಸಾಕಷ್ಟು ಸುಧಾರಣೆಯಾಗಿದ್ದಾಳೆಂದು ವೈದ್ಯ ಗಜಾನನ ಭಟ್ಟ ತಿಳಿಸಿದರು.

ಇನ್ನು, ಇದೇ ಆಪರೇಷನ್ ಖಾಸಗಿ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ.ಗಿಂತ ಹೆಚ್ಚು ಬಿಲ್ ಆಗುತ್ತಿತ್ತು. ನಾವು ಉಚಿತವಾಗಿ ಮಾಡಿದ್ದು, 5000 ರೂಪಾಯಿಯನ್ನು ವೈದ್ಯರೇ ಭರಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗೆ ಎಲ್ಲ ಉತ್ತಮ ಸೌಲಭ್ಯ ಸಿಕ್ಕರೆ ಇನ್ನಷ್ಟು ಸವಾಲಿನ ಆಪರೇಷನ್​ ಮಾಡಲು ಸಿದ್ಧರಿದ್ದೇವೆ. ರೋಗಿಗಳು ಸಹ ನಂಬಿಕೆಯಿಂದ ಬರಬೇಕು ಎಂದು ವಐದ್ಯರು ತಿಳಿಸಿದ್ದಾರೆ.

Intro:
ಶಿರಸಿ :
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರಿಗೆ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾದರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ೧.೫ ಲಕ್ಷ ರೂ. ಖರ್ಚಾಗುವ ಆಪರೇಶನ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಚಿಕಿತ್ಸೆಗೆ ಒಳಗಾದ ಮಹಿಳೆ ಸುರಕ್ಷಿತವಾಗಿದ್ದಾಳೆ.

ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೂರುವರೆ ತಾಸು ಕಾಲ ಆಪರೇಶನ ನಡೆಸಿ, ಮಹಿಳೆಯೊಬ್ಬರ ಮೂತ್ರ ಚೀಲ, ಮೂತ್ರನಾಳ ಕಸಿಯ ಆಪರೇಶನನ್ನು ಯಶಸ್ವಿಯಾಗಿ ಮಾಡಿದ್ದಾರೆ. ಬೆಳಗಾವಿಯ ಮಹಿಳೆಯೊಬ್ಬರು ಡಿಲೇವರಿ ಸಂದರ್ಭದಲ್ಲಿ ಸಿಜೇರಿನ ಮಾಡಿಸಿದ್ದು, ಆಗ ರಕ್ತ ಬಹಳ ಹೋಗಿ ಮೂತ್ರಚೀಲ, ಮೂತ್ರ ನಾಳಕ್ಕೆ ಘಾಸಿಯಾಗಿತ್ತು. 6ತಿಂಗಳಿಂದ ನಿಯಂತ್ರಣ ಇಲ್ಲದೇ ಮೂತ್ರ ಸೋರಿಕೆ ಆಗುತ್ತಿತ್ತು. ಗಾಬರಿಗೊಂಡ ಮಹಿಳೆಯು ಹಲವು ಕಡೆ ತೋರಿಸಿದ್ದರೂ ಪ್ರಯೋಜನ ಆಗದೇ ಸಂಕಷ್ಟದಲ್ಲಿದ್ದಳು. ಆಗ ಸರ್ಕಾರಿ ಆಸ್ಪತ್ರೆ ಸಂರ್ಪಕಿಸಿ ಚಿಕಿತ್ಸೆ ಪಡೆದು ಈಗ ಸುರಕ್ಷಿತವಾಗಿದ್ದಾಳೆ.

ಮಹಿಳೆಗೆ ಯಾರೋ ಕೊಟ್ಟ ಮಾಹಿತಿಯಂತೆ ಶಿರಸಿ ಆಸ್ಪತ್ರೆಯ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ಸಂಪರ್ಕಿಸಲು ಶಿರಸಿ ಆಸ್ಪತ್ರೆಗೆ ಬಂದರು. ನಂತರ ಡಾ.ಗಜಾನನ ಭಟ್ಟರುಸರ್ಕಾರಿ ಆಸ್ಪತ್ರೆ ವೈದ್ಯರಾದ ಬಸವಗೌಡ,ಡಾ.ಪದ್ಮಿನಿ, ಡಾ.ರೇವಣಕರ, ಡಾ.ನೇತ್ರಾವತಿ,ನರ್ಸ ಎಸ್ಟರ ರಾಣಿ, ಸಹಾಯಕ ನರಸಿಂಹ ಅವರ ಸಹಕಾರದಿಂದ ಕಳೆದ ವಾರ ಶಿರಸಿ ಆಸ್ಪತ್ರೆಯಲ್ಲಿ ಆಪರೇಶನ್ ನಡೆಸಿ ಯಶಸ್ವಿಯಾಗಿದ್ದಾರೆ.


Body:ಶಿರಸಿ ಆಸ್ಪತ್ರೆಯಲ್ಲಿ ಐಸಿಯು ಇರದೇ ಇದ್ದರೂ ಇತರ ಸವಾಲಿನ ನಡುವೆ ಮಹಿಳೆ ಸಾಕಷ್ಟು ಸುಧಾರಣೆಯಾಗಿದ್ದಾಳೆಂದು ವೈದ್ಯ ಗಜಾನನ ಭಟ್ಟ ತಿಳಿಸಿದರು. ಇದೇ ಆಪರೇಶನ್ ಖಾಸಗಿ ಆಸ್ಪತ್ರೆಗಳಲ್ಲಿ 1.5ಲಕ್ಷ ರೂಗಿಂತ ಹೆಚ್ಚು ಬಿಲ್ ಆಗುತ್ತಿತ್ತು. ನಾವು ಉಚಿತವಾಗಿ ಮಾಡಿದ್ದೇವೆ. 5000ರೂ ಸ್ಟಂಟನ್ನು ವೈದ್ಯರೇ ಭರಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗೆ ಎಲ್ಲ ಉತ್ತಮ ಸೌಲಭ್ಯ ಸಿಕ್ಕರೆ ಇನ್ನಷ್ಟು ಸವಾಲಿನ ಆಪರೇಶನ ಮಾಡಲು ಸಿದ್ದರಿದ್ದೇವೆ. ರೋಗಿಗಳು ಸಹ ನಂಬಿಕೆಯಿಂದ ಬರಬೇಕು ಎಂದು ಅವರು ತಿಳಿಸಿದರು.
.............
ಸಂದೇಶ ಭಟ್ ಶಿರಸಿ‌
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.