ETV Bharat / state

ಕೌನ್ ಬನೇಗಾ ಕರೋಡ್​ಪತಿ ಹೆಸರಲ್ಲಿ ವಂಚನೆ: ಇವರು ಕಳೆದುಕೊಂಡ ಹಣವೆಷ್ಟು?

author img

By

Published : Sep 22, 2019, 4:48 PM IST

ಗೌಂಡಿ ಕೆಲಸ ಮಾಡುವ ಕಾರ್ಮಿಕನೊಬ್ಬ ನಕಲಿ ಕರೆ ನಂಬಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

ಅಬ್ದುಲ್ ಖಾದರ್

ಕಾರವಾರ: ಹಿಂದಿಯ ಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್​ಪತಿ' ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಬಂದ ನಕಲಿ ಕರೆ ನಂಬಿ ಕಾರ್ಮಿಕನೊಬ್ಬ ಕೈ ಸುಟ್ಟುಕೊಂಡಿದ್ದಾನೆ!

ಮೋಸಹೋದ ವ್ಯಕ್ತಿ ಅಬ್ದುಲ್ ಖಾದರ್

ಬಾಲಿವುಡ್ ನಟ ಅಮಿತಾ ಬಚ್ಚನ್ ನಡೆಸಿ ಕೊಡುವ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಬಂದ ನಕಲಿ ಕರೆಯನ್ನೇ ಶಿರಸಿಯ ಹವಾಲ್ದಾರ ಗಲ್ಲಿಯ ಅಬ್ದುಲ್ ಖಾದರ್ ನಂಬಿ ಮೋಸ ಹೋಗಿದ್ದಾರೆ. ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದವನಿಗೆ ಲಕ್ಷಾಧಿಪತಿಯಾಗುವ ಆಸೆ ಚಿಗುರಿದೆ. ಇದೀಗ ಕಾರ್ಮಿಕ ಕಣ್ಣೀರು ಹಾಕೋದು ಬಿಟ್ಟು ಬೇರೇನೂ ಉಳಿದಿಲ್ಲ.

ಆಗಿದ್ದೇನು?

ಇದೇ ಸೆ.17 ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ‘ಕೌನ್ ಬನೇಗಾ ಕರೋಡ್‌ಪತಿ’ ಯಲ್ಲಿ ನಿಮಗೆ 25 ಲಕ್ಷ ಲಾಟರಿ ಬಂದಿದೆ. ಶುಭಾಶಯಗಳು! ಎಂದು ಹೇಳಿ ಮಾತು ಬೆಳೆಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಾಟ್ಸಪ್​ಗೆ ಕಳುಹಿಸುವುದಾಗಿ ಹೇಳಿ, ಹೆಚ್ಚಿನ ಮಾಹಿತಿಗಾಗಿ ಕೌನ್ ಬನೇಗಾ ಕರೋಡ್ ಪತಿ ವ್ಯವಸ್ಥಾಪಕ ರಾಣಾ ಪ್ರತಾಪ ಸಿಂಗ್ ಅವರನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ತಿಳಿಸಿದ್ದ ಎಂದು ವಂಚನೆಗೊಳಗಾದ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಇದನ್ನು ನಂಬಿದ ಅವರು ಮಾರನೇ ದಿನವೇ ರಾಣಾ ಪ್ರತಾಪ್ ಸಿಂಗ್​ಗೆ ಕರೆ ಮಾಡಿದ್ದಾರೆ. ಈ ವೇಳೆ ಹೌದು, ನಿಮಗೆ ಲಾಟರಿ ಬಂದಿದೆ ಎಂದು ಸುಳ್ಳು ಹೇಳಿ ನಂಬಿಸಲಾಗಿದೆ. ಮತ್ತೊಂದಿನ ಬಳಿಕ ಮತ್ತೆ ಕರೆ ಮಾಡಿ ಆಯ್ಕೆ ಶುಲ್ಕವಾಗಿ 7 ಸಾವಿರ ರೂ ತುಂಬಬೇಕು ಎಂದು ಅಕೌಂಟ್ ನಂಬರ್ ನೀಡಿದ್ದಾರೆ.

ಇದಕ್ಕೆ ಒಪ್ಪಿದ ಅಬ್ದುಲ್ ಹಣವನ್ನು ಮೋಸಗಾರರು ನೀಡಿದ ಅಕೌಂಟ್ ಹಣ ತುಂಬಿದ್ದಾರೆ. ಮತ್ತೆ ಕರೆ ಮಾಡಿ ಜಿಎಸ್ ಟಿ ಚಾರ್ಜ್ 25 ಸಾವಿರ ತುಂಬಲು ಹೇಳಿದ್ದು, ಅದನ್ನೂ ತುಂಬಿದ್ದಾರೆ. ಮತ್ತದೇ ಕರೆ! 25 ಸಾವಿರ ಶುಲ್ಕ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಅಷ್ಟೊಂದು ಹಣ ತನ್ನಲ್ಲಿಲ್ಲ ಎಂದು ಹೇಳಿ ಹಾಗೂ ಸಾಲ ಮಾಡಿ 8 ಸಾವಿರ ತುಂಬಿದ್ದಾರೆ.

ಇದೀಗ ಆ ನಂಬರ್​ಗೆ ಕರೆ ಮಾಡಿದರೇ ಸ್ವಿಚ್ ಆಫ್ ಬರುತ್ತಿದ್ದು, ಒಟ್ಟು 40 ಸಾವಿರ ರೂ ಹಣ ಕಳೆದುಕೊಂಡ ಅರಿವಾಗಿ ಅಬ್ದುಲ್ ಕಂಗಾಲಾಗಿದ್ದಾರೆ. ಈ ಬಗ್ಗೆ ತಕ್ಷಣ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರನ್ನು ಬಂಧಿಸಿ ತಮ್ಮ ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಕಾರವಾರ: ಹಿಂದಿಯ ಜನಪ್ರಿಯ ಟಿವಿ ಶೋ 'ಕೌನ್ ಬನೇಗಾ ಕರೋಡ್​ಪತಿ' ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಬಂದ ನಕಲಿ ಕರೆ ನಂಬಿ ಕಾರ್ಮಿಕನೊಬ್ಬ ಕೈ ಸುಟ್ಟುಕೊಂಡಿದ್ದಾನೆ!

ಮೋಸಹೋದ ವ್ಯಕ್ತಿ ಅಬ್ದುಲ್ ಖಾದರ್

ಬಾಲಿವುಡ್ ನಟ ಅಮಿತಾ ಬಚ್ಚನ್ ನಡೆಸಿ ಕೊಡುವ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಬಂದ ನಕಲಿ ಕರೆಯನ್ನೇ ಶಿರಸಿಯ ಹವಾಲ್ದಾರ ಗಲ್ಲಿಯ ಅಬ್ದುಲ್ ಖಾದರ್ ನಂಬಿ ಮೋಸ ಹೋಗಿದ್ದಾರೆ. ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದವನಿಗೆ ಲಕ್ಷಾಧಿಪತಿಯಾಗುವ ಆಸೆ ಚಿಗುರಿದೆ. ಇದೀಗ ಕಾರ್ಮಿಕ ಕಣ್ಣೀರು ಹಾಕೋದು ಬಿಟ್ಟು ಬೇರೇನೂ ಉಳಿದಿಲ್ಲ.

ಆಗಿದ್ದೇನು?

ಇದೇ ಸೆ.17 ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ‘ಕೌನ್ ಬನೇಗಾ ಕರೋಡ್‌ಪತಿ’ ಯಲ್ಲಿ ನಿಮಗೆ 25 ಲಕ್ಷ ಲಾಟರಿ ಬಂದಿದೆ. ಶುಭಾಶಯಗಳು! ಎಂದು ಹೇಳಿ ಮಾತು ಬೆಳೆಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಾಟ್ಸಪ್​ಗೆ ಕಳುಹಿಸುವುದಾಗಿ ಹೇಳಿ, ಹೆಚ್ಚಿನ ಮಾಹಿತಿಗಾಗಿ ಕೌನ್ ಬನೇಗಾ ಕರೋಡ್ ಪತಿ ವ್ಯವಸ್ಥಾಪಕ ರಾಣಾ ಪ್ರತಾಪ ಸಿಂಗ್ ಅವರನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ತಿಳಿಸಿದ್ದ ಎಂದು ವಂಚನೆಗೊಳಗಾದ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಇದನ್ನು ನಂಬಿದ ಅವರು ಮಾರನೇ ದಿನವೇ ರಾಣಾ ಪ್ರತಾಪ್ ಸಿಂಗ್​ಗೆ ಕರೆ ಮಾಡಿದ್ದಾರೆ. ಈ ವೇಳೆ ಹೌದು, ನಿಮಗೆ ಲಾಟರಿ ಬಂದಿದೆ ಎಂದು ಸುಳ್ಳು ಹೇಳಿ ನಂಬಿಸಲಾಗಿದೆ. ಮತ್ತೊಂದಿನ ಬಳಿಕ ಮತ್ತೆ ಕರೆ ಮಾಡಿ ಆಯ್ಕೆ ಶುಲ್ಕವಾಗಿ 7 ಸಾವಿರ ರೂ ತುಂಬಬೇಕು ಎಂದು ಅಕೌಂಟ್ ನಂಬರ್ ನೀಡಿದ್ದಾರೆ.

ಇದಕ್ಕೆ ಒಪ್ಪಿದ ಅಬ್ದುಲ್ ಹಣವನ್ನು ಮೋಸಗಾರರು ನೀಡಿದ ಅಕೌಂಟ್ ಹಣ ತುಂಬಿದ್ದಾರೆ. ಮತ್ತೆ ಕರೆ ಮಾಡಿ ಜಿಎಸ್ ಟಿ ಚಾರ್ಜ್ 25 ಸಾವಿರ ತುಂಬಲು ಹೇಳಿದ್ದು, ಅದನ್ನೂ ತುಂಬಿದ್ದಾರೆ. ಮತ್ತದೇ ಕರೆ! 25 ಸಾವಿರ ಶುಲ್ಕ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಅಷ್ಟೊಂದು ಹಣ ತನ್ನಲ್ಲಿಲ್ಲ ಎಂದು ಹೇಳಿ ಹಾಗೂ ಸಾಲ ಮಾಡಿ 8 ಸಾವಿರ ತುಂಬಿದ್ದಾರೆ.

ಇದೀಗ ಆ ನಂಬರ್​ಗೆ ಕರೆ ಮಾಡಿದರೇ ಸ್ವಿಚ್ ಆಫ್ ಬರುತ್ತಿದ್ದು, ಒಟ್ಟು 40 ಸಾವಿರ ರೂ ಹಣ ಕಳೆದುಕೊಂಡ ಅರಿವಾಗಿ ಅಬ್ದುಲ್ ಕಂಗಾಲಾಗಿದ್ದಾರೆ. ಈ ಬಗ್ಗೆ ತಕ್ಷಣ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರನ್ನು ಬಂಧಿಸಿ ತಮ್ಮ ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

Intro:KN_KWR_01_MOSA HODA KARMIKA_7202800

(ಕೌನ್ ಬನೇಗಾ ಕೋಟ್ಯಾಧಿಪತಿ ಪೋಟೊ ಬಳಸಲು ಮನವಿ)

ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ನಕಲಿ ಕರೆ... ನಂಬಿ ಮೋಸ ಹೋದ ಗೌಂಡಿ ಕೆಲಸಗಾರ ಕಳೆದುಕೊಂಡ ಹಣ ಎಷ್ಟು ಗೊತ್ತಾ...?


ಕಾರವಾರ: ಕೌನ್ ಬನೇಗಾ ಕರೋಡಪತಿ ಹೆಸರಿನಲ್ಲಿ ಬಂದ ನಕಲಿ ಕರೆಯಿಂದಾಗಿ ಲಕ್ಷಾದಿಪತಿಯಾಗಲು ಹೋಗಿ ಕಾರ್ಮಿಕನೋರ್ವ ೪೦ ಸಾವಿರ ರೂ ಕಳೆದುಕೊಂಡಿರುವ ಘಟನೆ ಶಿರಸಿಯಲ್ಲಿ ನಡೆದಿದೆ.
ಹೌದು, ಅಮಿತಾಬಚ್ಚನ್ ನಡೆಸಿಕೊಡುವ ಹಿಂದಿಯ ಜನಪ್ರೀಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ಬಂದ ನಕಲಿ ಕರೆಯನ್ನೆ ನಂಬಿದ ಗೌಂಡಿ ಕೆಲಸ ಮಾಡುತ್ತಿದ್ದ ಶಿರಸಿಯ ಹವಲ್ದಾರ ಗಲ್ಲಿಯ ಅಬ್ದುಲ್ ಖಾದರ್ ಮೋಸ ಹೋಗಿದ್ದಾರೆ. ತನ್ನ ಪಾಡಿಗೆ ತಾನು ಕೆಲ ಮಾಡಿಕೊಂಡು ಇದ್ದವನಿಗೆ ಲಕ್ಷಾದಿಪತಿಯಾಗುವ ಆಸೆ ಹುಟ್ಟಿಸಿ ಮೋಸ ಮಾಡಿದ್ದು, ಇದೀಗ ಕಾರ್ಮಿಕ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

Body:ಆಗಿದ್ದೇನು?
ಸೆ.17ರಂದು ಕರೆ ಮಾಡಿದ್ದ ವ್ಯಕ್ತಿಯೊರ್ವ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ನಿಮಗೆ ೨೫ ಲಕ್ಷ ಲಾಟರಿ ತಾಗಿದೆ ಕಂಗ್ರಾಟ್ಸ್ ಎಂದು ನಂಬಿಸಿದ್ದಾನೆ. ಅಲ್ಲದೆ ಇದಕ್ಕೆ ಇದಕ್ಕೆ ಸಂಬಂಧಿಸಿ ವಿಡಿಯೊವನ್ನೂ ವಾಟ್ಸಪ್ ಗೆ ಕಳುಹಿಸುವುದಾಗಿ ಹೇಳಿ, ಹೆಚ್ಚಿನ ಮಾಹಿತಿಗಾಗಿ ಕೌನ್ ಬನೇಗಾ ಕರೋಡ್ ಪತಿ ವ್ಯವಸ್ಥಾಪಕ ರಾಣಾ ಪ್ರತಾಪ ಸಿಂಗ್ ಅವರನ್ನು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ನೀಡಿದ್ದ.
ಇದನ್ನು ನಂವಿದ ಕಾರ್ಮಿಕ ಮಾರನೇ ದಿನವೇ ರಾಣಾ ಪ್ರತಾಪ್ ಸಿಂಗ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಹೌದು ನಿಮಗೆ ಲಾಟರಿ ತಾಗಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದಾರೆ. ದಿನದ ಬಳಿಕ ಮತ್ತೆ ಕರೆ ಮಾಡಿ ಆಯ್ಕೆ ಶುಲ್ಕವಾಗಿ ಏಳು ಸಾವಿರ ತುಂಬಬೇಕು ಎಂದು ಅಕೌಂಟ್ ನಂಬರ್ ನೀಡಿದ್ದಾರೆ. ಇದಕ್ಕೆ ಒಪ್ಪಿದ ಅಬ್ದುಲ್ ಹಣವನ್ನು ತುಂಬಿದ್ದಾರೆ. ಮಾರನೆ ದಿನ ಕರೆ ಮಾಡಿ ಜಿಎಸ್ ಟಿ ಚಾರ್ಜ್ ೨೫ ಸಾವಿರ ತುಂಬಲು ಹೇಳಿದ್ದು, ಅದನ್ನು ತುಂಬಿದ್ದಾರೆ. ಮತ್ತೆ ಮೂರನೇ ದಿನ ಕರೆ ಮಾಡಿ ೨೫ ಸಾವಿರ ಶುಲ್ಕ ಕಟ್ಟುವಂತೆ ತಿಳಿಸಿದ್ದು ಆದರೆ ಅಷ್ಟೊಂದು ಹಣ ಇಲ್ಲ ಎಂದು ಹೇಳಿ ಅಲ್ಲಿ ಇಲ್ಲಿ ಸಾಲ ಮಾಡಿ ೮ ಸಾವಿರ ತುಂಬಿದ್ದಾರೆ.
ಆದರೆ ಇದೀಗ ಆ ನಂಬರ್ ಗೆ ಕರೆ ಮಾಡಿದರೇ ಸ್ವೀಚ್ ಆಫ್ ಬರುತ್ತಿದ್ದು, ಹಣವನ್ನು ಕಳೆದುಕೊಂಡ ಅರಿವಾಗಿ ಅಬ್ದುಲ್ ಕಂಗಾಲಾಗಿದ್ದಾರೆ. ಅಲ್ಲದೆ ಈ ಬಗ್ಗೆ ತಕ್ಷಣ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೋಸ ಮಾಡಿದವರನ್ನು ಬಂಧಿಸಿ ತಮ್ಮ ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಬೈಟ್ (೧) : ಅಬ್ದುಲ್ ಖಾದರ್ , ಮೋಸ ಹೋದ ವ್ಯಕ್ತಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.