ETV Bharat / state

ಸೈರನ್ ಸದ್ದಿಗೂ ಬಂದ್​ ಆಗದ ಅಂಗಡಿ: ಲಾಠಿ ರುಚಿ ತೋರಿಸಿದ ಪೊಲೀಸರು

author img

By

Published : May 7, 2021, 12:01 PM IST

ಪೊಲೀಸ್ ಸೈರನ್ ಸದ್ದು ಕೇಳಿದರೂ ಬಂದ್ ಮಾಡದೆ ಉಡಾಫೆ ಪ್ರದರ್ಶಿಸುತ್ತಿದ್ದ ಅಂಗಡಿಕಾರರು ಹಾಗೂ ಮೀನುಗಾರ ಮಹಿಳೆಯರಿಗೆ ಎಚ್ಚರಿಸಿದ ಪೊಲೀಸರು ಲಾಠಿ ಬಿಸಿ ತೋರಿಸಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

Karwar
ಬಂದ್​ ಆಗದ ಅಂಗಡಿ: ಲಾಠಿ ಮೂಲಕ ಬಿಸಿ ಮುಟ್ಟಿಸಿದ ಪೊಲೀಸರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಿದ್ದು, ಅವಧಿ ಮುಗಿದರೂ ಅಂಗಡಿ ಬಂದ್ ಮಾಡದ ವ್ಯಾಪಾರಿಗಳಿಗೆ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ಬಂದ್​ ಆಗದ ಅಂಗಡಿ: ಲಾಠಿ ಮೂಲಕ ಬಿಸಿ ಮುಟ್ಟಿಸಿದ ಪೊಲೀಸರು

ನಗರದ ಗಾಂಧಿ ಬಜಾರ್, ಸವಿತಾ ಸರ್ಕಲ್ ಸೇರಿದಂತೆ ಇನ್ನಿತರ ಭಾಗದಲ್ಲಿ ಅವಧಿ ಮುಗಿದರೂ ಕಿರಾಣಿ ಅಂಗಡಿ, ಮೀನು ಸೇರಿದಂತೆ ಇನ್ನಿತರ ವ್ಯಾಪಾರ ಮಾಡತೊಡಗಿದ್ದರು. ಪೊಲೀಸ್ ಸೈರನ್ ಸದ್ದು ಕೇಳಿದರೂ ಬಂದ್ ಮಾಡದೆ ಉಡಾಫೆ ಪ್ರದರ್ಶಿಸುತ್ತಿದ್ದ ಅಂಗಡಿಕಾರರು ಹಾಗೂ ಮೀನುಗಾರ ಮಹಿಳೆಯರಿಗೆ ಎಚ್ಚರಿಸಿದ ಪೊಲೀಸರು ಲಾಠಿ ಬಿಸಿ ತೋರಿಸಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ 12 ಗಂಟೆವರೆಗೆ ಕಿರಾಣಿ ಅಂಗಡಿಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿದ್ದನ್ನೇ ದುರುಪಯೋಗಪಡಿಸಿಕೊಂಡು ಕೆಲವರು 12 ಗಂಟೆವರೆಗೂ ಅಡ್ಡಾಡತೊಡಗಿದ್ದರು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಲಹೆಯಂತೆ ಮತ್ತೆ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಅನಗತ್ಯವಾಗಿ ಓಡಾಡುವವರ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ ಜತೆಗೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಿದ್ದು, ಅವಧಿ ಮುಗಿದರೂ ಅಂಗಡಿ ಬಂದ್ ಮಾಡದ ವ್ಯಾಪಾರಿಗಳಿಗೆ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ಬಂದ್​ ಆಗದ ಅಂಗಡಿ: ಲಾಠಿ ಮೂಲಕ ಬಿಸಿ ಮುಟ್ಟಿಸಿದ ಪೊಲೀಸರು

ನಗರದ ಗಾಂಧಿ ಬಜಾರ್, ಸವಿತಾ ಸರ್ಕಲ್ ಸೇರಿದಂತೆ ಇನ್ನಿತರ ಭಾಗದಲ್ಲಿ ಅವಧಿ ಮುಗಿದರೂ ಕಿರಾಣಿ ಅಂಗಡಿ, ಮೀನು ಸೇರಿದಂತೆ ಇನ್ನಿತರ ವ್ಯಾಪಾರ ಮಾಡತೊಡಗಿದ್ದರು. ಪೊಲೀಸ್ ಸೈರನ್ ಸದ್ದು ಕೇಳಿದರೂ ಬಂದ್ ಮಾಡದೆ ಉಡಾಫೆ ಪ್ರದರ್ಶಿಸುತ್ತಿದ್ದ ಅಂಗಡಿಕಾರರು ಹಾಗೂ ಮೀನುಗಾರ ಮಹಿಳೆಯರಿಗೆ ಎಚ್ಚರಿಸಿದ ಪೊಲೀಸರು ಲಾಠಿ ಬಿಸಿ ತೋರಿಸಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ 12 ಗಂಟೆವರೆಗೆ ಕಿರಾಣಿ ಅಂಗಡಿಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿದ್ದನ್ನೇ ದುರುಪಯೋಗಪಡಿಸಿಕೊಂಡು ಕೆಲವರು 12 ಗಂಟೆವರೆಗೂ ಅಡ್ಡಾಡತೊಡಗಿದ್ದರು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಲಹೆಯಂತೆ ಮತ್ತೆ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಅನಗತ್ಯವಾಗಿ ಓಡಾಡುವವರ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ ಜತೆಗೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.