ETV Bharat / state

ಎಎಸ್​ಪಿ ಮೇಲೆಯೇ ಹಲ್ಲೆಗೆ ಯತ್ನ; ಆರೋಪಿಗಳಿಗೆ ರಸ್ತೆ ಉದ್ದಕ್ಕೂ ಲಾಠಿ ರುಚಿ ತೋರಿಸಿದ ಪೊಲೀಸರು!

author img

By

Published : Mar 30, 2021, 7:31 AM IST

Updated : Apr 2, 2021, 4:55 PM IST

ಕಾರವಾರದ ಐಆರ್‌ಬಿ ಟೋಲ್‌ನಲ್ಲಿ ಗಲಾಟೆ ಮಾಡಿಕೊಂಡು ಎಎಸ್​ಪಿ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಲಾಠಿ ರುಚಿ ತೋರಿಸಿದ್ದಾರೆ.

assault attempt on ASP
ಎಎಸ್​ಪಿ ಮೇಲೆಯೇ ಹಲ್ಲೆಗೆ ಯತ್ನ

ಕಾರವಾರ: ಟೋಲ್ ಗೇಟ್ ಬಳಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮೇಲೆಯೇ ರಾಜಕೀಯ ಮುಖಂಡ ಹಾಗೂ ಮತ್ತವನ ತಂಡ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.

ಹಟ್ಟಿಕೇರಿ ಗ್ರಾಮದ ಬಳಿಯ ಐಆರ್‌ಬಿ ಟೋಲ್‌ನಲ್ಲಿ ನಿನ್ನೆ ಮಧ್ಯಾಹ್ನ ಗಲಾಟೆಯೊಂದು ನಡೆಯುತ್ತಿತ್ತು. ಟೋಲ್ ಗೇಟ್ ದಾಟುವಾಗ ಕಾರನ್ನು ತಡೆದರು ಎನ್ನುವ ಕಾರಣಕ್ಕೆ ಅಂಕೋಲಾದ ಕಾಂಗ್ರೆಸ್ ಮುಖಂಡ ಹಾಗೂ ಸಾಕ್ಷಿತ್ ಹಾರ್ಡವೇರ್ ಮಾಲೀಕ ಸುರೇಶ್ ನಾಯಕ ಅಲಗೇರಿ ಹಾಗೂ ಕಾರಿನಲ್ಲಿದ್ದವರು ಟೋಲ್ ಗೇಟ್‌ನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎಎಸ್‌ಪಿ ಭದ್ರಿನಾಥ್ ಅವರು ಅದೇ ಮಾರ್ಗವಾಗಿ ಕುಮಟಾಕ್ಕೆ ತೆರಳುವಾಗ ಗಲಾಟೆಯಾಗುವುದನ್ನು ಕಂಡು ಸೈರನ್ ಹಾಕಿಕೊಂಡು ಗುಂಪು ಚದುರಿಸಿ ಹೋಗುವಂತೆ ತಿಳಿಸಿದ್ದಾರೆ. ಆದರೆ ಗುಂಪು ಚದುರಿ ಹೋಗದ ಹಿನ್ನೆಲೆ ತಾವೇ ಕೆಳಗೆ ಇಳಿದು ಯಾಕೆ ಗಲಾಟೆ ಮಾಡುವುದಾಗಿ ಪ್ರಶ್ನಿಸಲು ಮುಂದಾದಾಗ, ಕಾರಿನಲ್ಲಿದ್ದವರು ಎಎಸ್‌ಪಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ‘ನಮಗೆ ಕೇಳಲು ನೀವ್ಯಾರು?’ ಎಂದು ಎಎಸ್‌ಪಿಯವರನ್ನೇ ಪ್ರಶ್ನೆ ಮಾಡಿದ್ದಾರೆ.

ಎಎಸ್​ಪಿ ಮೇಲೆಯೇ ಹಲ್ಲೆಗೆ ಯತ್ನ

ಎಎಸ್‌ಪಿ ಆರೋಪಿಗಳ ಕಾರನ್ನು ತಡೆಯಲು ಮುಂದಾದಾಗ ಚಾಲಕ ಕಾರನ್ನು ನಿಲ್ಲಿಸದೇ ಹೋಗಲು ಮುಂದಾಗಿದ್ದು, ಈ ವೇಳೆ ಕೆಳಕ್ಕೆ ಬಿದ್ದು, ಕೈಗೆ ಸಣ್ಣ ಗಾಯ ಕೂಡ ಆಗಿತ್ತು. ಈ ನಡುವೆ ತುರ್ತಾಗಿ ಕುಮಟಾಗೆ ತೆರಳಿದ ಎಎಸ್​ಪಿ ಅಂಕೋಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಇದೇ ವೇಳೆ ಟೋಲ್ ಸಿಬ್ಬಂದಿಯೊಬ್ಬ ಸಹ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

assault attempt on ASP
ಎಎಸ್‌ಪಿ ಭದ್ರಿನಾಥ್

ದೂರು ದಾಖಲು:

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಠಾಣೆಯವರೆಗೂ ಬೆತ್ತದ ರುಚಿ ತೋರಿಸಿದ್ದಾರೆ. ಪೊಲೀಸರು ರಸ್ತೆಯಲ್ಲಿಯೇ ಆರೋಪಿಗಳಿಗೆ ಹೊಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ನೋಡಿ ಸಾರ್ವಜನಿಕರು ಕೂಡ ಒಮ್ಮೆ ಕಂಗಾಲಾಗಿದ್ದರು.

ಸದ್ಯ ಟೋಲ್ ಸಿಬ್ಬಂದಿ ನೀಡಿದ ದೂರಿನನ್ವಯ ಬೊಮ್ಮಯ್ಯ ನಾಯಕ, ಸುರೇಶ್ ನಾಯಕ್ ಅಲಗೇರಿ, ಗೋಪಾಲ್ ಗಿರಿಯಣ್ಣ ನಾಯಕ್, ಸುರೇಶ್ ಗಿರಿಯಣ್ಣ ನಾಯಕ್ ಹಾಗೂ ಸುರೇಶ್ ನಾಯಕ ಅಲಗೇರಿಯವರ ಅಪ್ರಾಪ್ತ ಪುತ್ರನ ಮೇಲೆ ದೂರು ದಾಖಲಾಗಿದೆ. ಈ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. (ಇದನ್ನೂ ಓದಿ: ಗಲಾಟೆ ನಿಲ್ಲಿಸಲು ಹೋದ ಎಎಸ್ಪಿ ಮೇಲೆ ಕಾರು ಹತ್ತಿಸಲು ಮುಂದಾದ ಪುಂಡರು- ವಿಡಿಯೋ)

ಕಾರವಾರ: ಟೋಲ್ ಗೇಟ್ ಬಳಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮೇಲೆಯೇ ರಾಜಕೀಯ ಮುಖಂಡ ಹಾಗೂ ಮತ್ತವನ ತಂಡ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ನಡೆದಿದೆ.

ಹಟ್ಟಿಕೇರಿ ಗ್ರಾಮದ ಬಳಿಯ ಐಆರ್‌ಬಿ ಟೋಲ್‌ನಲ್ಲಿ ನಿನ್ನೆ ಮಧ್ಯಾಹ್ನ ಗಲಾಟೆಯೊಂದು ನಡೆಯುತ್ತಿತ್ತು. ಟೋಲ್ ಗೇಟ್ ದಾಟುವಾಗ ಕಾರನ್ನು ತಡೆದರು ಎನ್ನುವ ಕಾರಣಕ್ಕೆ ಅಂಕೋಲಾದ ಕಾಂಗ್ರೆಸ್ ಮುಖಂಡ ಹಾಗೂ ಸಾಕ್ಷಿತ್ ಹಾರ್ಡವೇರ್ ಮಾಲೀಕ ಸುರೇಶ್ ನಾಯಕ ಅಲಗೇರಿ ಹಾಗೂ ಕಾರಿನಲ್ಲಿದ್ದವರು ಟೋಲ್ ಗೇಟ್‌ನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎಎಸ್‌ಪಿ ಭದ್ರಿನಾಥ್ ಅವರು ಅದೇ ಮಾರ್ಗವಾಗಿ ಕುಮಟಾಕ್ಕೆ ತೆರಳುವಾಗ ಗಲಾಟೆಯಾಗುವುದನ್ನು ಕಂಡು ಸೈರನ್ ಹಾಕಿಕೊಂಡು ಗುಂಪು ಚದುರಿಸಿ ಹೋಗುವಂತೆ ತಿಳಿಸಿದ್ದಾರೆ. ಆದರೆ ಗುಂಪು ಚದುರಿ ಹೋಗದ ಹಿನ್ನೆಲೆ ತಾವೇ ಕೆಳಗೆ ಇಳಿದು ಯಾಕೆ ಗಲಾಟೆ ಮಾಡುವುದಾಗಿ ಪ್ರಶ್ನಿಸಲು ಮುಂದಾದಾಗ, ಕಾರಿನಲ್ಲಿದ್ದವರು ಎಎಸ್‌ಪಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ‘ನಮಗೆ ಕೇಳಲು ನೀವ್ಯಾರು?’ ಎಂದು ಎಎಸ್‌ಪಿಯವರನ್ನೇ ಪ್ರಶ್ನೆ ಮಾಡಿದ್ದಾರೆ.

ಎಎಸ್​ಪಿ ಮೇಲೆಯೇ ಹಲ್ಲೆಗೆ ಯತ್ನ

ಎಎಸ್‌ಪಿ ಆರೋಪಿಗಳ ಕಾರನ್ನು ತಡೆಯಲು ಮುಂದಾದಾಗ ಚಾಲಕ ಕಾರನ್ನು ನಿಲ್ಲಿಸದೇ ಹೋಗಲು ಮುಂದಾಗಿದ್ದು, ಈ ವೇಳೆ ಕೆಳಕ್ಕೆ ಬಿದ್ದು, ಕೈಗೆ ಸಣ್ಣ ಗಾಯ ಕೂಡ ಆಗಿತ್ತು. ಈ ನಡುವೆ ತುರ್ತಾಗಿ ಕುಮಟಾಗೆ ತೆರಳಿದ ಎಎಸ್​ಪಿ ಅಂಕೋಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಇದೇ ವೇಳೆ ಟೋಲ್ ಸಿಬ್ಬಂದಿಯೊಬ್ಬ ಸಹ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

assault attempt on ASP
ಎಎಸ್‌ಪಿ ಭದ್ರಿನಾಥ್

ದೂರು ದಾಖಲು:

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಠಾಣೆಯವರೆಗೂ ಬೆತ್ತದ ರುಚಿ ತೋರಿಸಿದ್ದಾರೆ. ಪೊಲೀಸರು ರಸ್ತೆಯಲ್ಲಿಯೇ ಆರೋಪಿಗಳಿಗೆ ಹೊಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ನೋಡಿ ಸಾರ್ವಜನಿಕರು ಕೂಡ ಒಮ್ಮೆ ಕಂಗಾಲಾಗಿದ್ದರು.

ಸದ್ಯ ಟೋಲ್ ಸಿಬ್ಬಂದಿ ನೀಡಿದ ದೂರಿನನ್ವಯ ಬೊಮ್ಮಯ್ಯ ನಾಯಕ, ಸುರೇಶ್ ನಾಯಕ್ ಅಲಗೇರಿ, ಗೋಪಾಲ್ ಗಿರಿಯಣ್ಣ ನಾಯಕ್, ಸುರೇಶ್ ಗಿರಿಯಣ್ಣ ನಾಯಕ್ ಹಾಗೂ ಸುರೇಶ್ ನಾಯಕ ಅಲಗೇರಿಯವರ ಅಪ್ರಾಪ್ತ ಪುತ್ರನ ಮೇಲೆ ದೂರು ದಾಖಲಾಗಿದೆ. ಈ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. (ಇದನ್ನೂ ಓದಿ: ಗಲಾಟೆ ನಿಲ್ಲಿಸಲು ಹೋದ ಎಎಸ್ಪಿ ಮೇಲೆ ಕಾರು ಹತ್ತಿಸಲು ಮುಂದಾದ ಪುಂಡರು- ವಿಡಿಯೋ)

Last Updated : Apr 2, 2021, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.