ETV Bharat / state

ಅಂಡಮಾನ್-ನಿಕೋಬಾರ್​ದಲ್ಲಿ ಅಂಕೋಲಾದ ನೌಕಾಸೇನೆ ಸಿಬ್ಬಂದಿ ಸಾವು: ನಾಳೆ ಹುಟ್ಟೂರಿಗೆ ಪಾರ್ಥಿವ ಶರೀರ

author img

By

Published : Jan 4, 2023, 10:02 PM IST

ಆಕಸ್ಮಿಕ ದುರಂತದಲ್ಲಿ ಮೃತಪಟ್ಟ ನೌಕಾಸೇನಾ ಸಿಬ್ಬಂದಿ- ಕರ್ತವ್ಯ ನಿರ್ವಹಿಸುತ್ತಿರುವಾಗಲೆ ಅಸುನೀಗಿದ ಯೋಧ- ಸೇವಾ ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗಲೇ ಸಾವು.

ankola-navy-personnel-killed-in-andaman-nicobar-body-to-return-home-tomorrow
ಅಂಡಮಾನ್-ನಿಕೋಬಾರ್​ದಲ್ಲಿ ಅಂಕೋಲಾದ ನೌಕಾಸೇನೆ ಸಿಬ್ಬಂದಿ ಸಾವು: ನಾಳೆ ಹುಟ್ಟೂರಿಗೆ ಪಾರ್ಥಿವ ಶರೀರ

ಕಾರವಾರ: ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕೋಲಾ ತಾಲೂಕಿನ ಲಕ್ಷ್ಮೀಶ್ವರ ಮೂಲದ ನಾಗರಾಜ ಮುಕುಂದ(33) ಮೃತಪಟ್ಟಿದ್ದಾರೆ.

ಅಕಾಲಿಕವಾಗಿ ನಿಧನರಾಗಿರುವ ನೌಕಾಸೇನಾ ಸಿಬ್ಬಂದಿ. ಕಳೆದ 4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿಗಳ ಮೂಲಕ ತಿಳಿದು ಬಂದಿದೆ. ನಾಗರಾಜ ಅವರ ಪಾರ್ಥಿವ ಶರೀರವನ್ನು ಗುರುವಾರ ಹುಟ್ಟೂರಿಗೆ ತರಲಾಗುತ್ತಿದೆ. ಭುವನೇಶ್ವರದಲ್ಲಿರುವ ಐಎನ್ಎಸ್ ಚಿಲಕ ನೌಕಾದಳ ತರಬೇತಿ ಕೇಂದ್ರದಲ್ಲಿ 2010ರಲ್ಲಿ ತರಬೇತಿಯನ್ನು ಪಡೆದು, ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಿದ್ದರು.

ಬಳಿಕ ಮುಂಬೈನಲ್ಲಿ ಸೇವೆ ಸಲ್ಲಿಸಿ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಸೇವಾ ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ದುರ್ದೈವವಶಾತ್ ಅಸುನೀಗಿದ್ದಾರೆ. ಪಾರ್ಥಿವ ಶರೀರವನ್ನು ಗುರುವಾರ ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಲಕ್ಷ್ಮೀಶ್ವರದಲ್ಲಿರುವ ನಾಗರಾಜ ಮುಕುಂದ ಕಳಸ ಅವರ ಮೂಲ ಮನೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 2 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರು ರೈಲ್ವೇ ನಿಲ್ದಾಣದ ಡ್ರಮ್​ವೊಂದರಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆ!

ಕಾರವಾರ: ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕೋಲಾ ತಾಲೂಕಿನ ಲಕ್ಷ್ಮೀಶ್ವರ ಮೂಲದ ನಾಗರಾಜ ಮುಕುಂದ(33) ಮೃತಪಟ್ಟಿದ್ದಾರೆ.

ಅಕಾಲಿಕವಾಗಿ ನಿಧನರಾಗಿರುವ ನೌಕಾಸೇನಾ ಸಿಬ್ಬಂದಿ. ಕಳೆದ 4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿಗಳ ಮೂಲಕ ತಿಳಿದು ಬಂದಿದೆ. ನಾಗರಾಜ ಅವರ ಪಾರ್ಥಿವ ಶರೀರವನ್ನು ಗುರುವಾರ ಹುಟ್ಟೂರಿಗೆ ತರಲಾಗುತ್ತಿದೆ. ಭುವನೇಶ್ವರದಲ್ಲಿರುವ ಐಎನ್ಎಸ್ ಚಿಲಕ ನೌಕಾದಳ ತರಬೇತಿ ಕೇಂದ್ರದಲ್ಲಿ 2010ರಲ್ಲಿ ತರಬೇತಿಯನ್ನು ಪಡೆದು, ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಿದ್ದರು.

ಬಳಿಕ ಮುಂಬೈನಲ್ಲಿ ಸೇವೆ ಸಲ್ಲಿಸಿ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಸೇವಾ ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ದುರ್ದೈವವಶಾತ್ ಅಸುನೀಗಿದ್ದಾರೆ. ಪಾರ್ಥಿವ ಶರೀರವನ್ನು ಗುರುವಾರ ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಲಕ್ಷ್ಮೀಶ್ವರದಲ್ಲಿರುವ ನಾಗರಾಜ ಮುಕುಂದ ಕಳಸ ಅವರ ಮೂಲ ಮನೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 2 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರು ರೈಲ್ವೇ ನಿಲ್ದಾಣದ ಡ್ರಮ್​ವೊಂದರಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.