ETV Bharat / state

ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕ ಸಾವು

author img

By

Published : Feb 13, 2020, 9:05 PM IST

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಖಾಸಗಿ ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ.

sirsi
ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕ ಸಾವು

ಶಿರಸಿ: ಖಾಸಗಿ ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಜೆ.ಎನ್.ರಸ್ತೆ ಸಿನಿಮಾ ಮಂದಿರದ ಬಳಿ ನಡೆದಿದೆ.

ದಾಂಡೇಲಿಯ ಮಾರುತಿ ನಗರದ ಮಹಾದೇವ ಪದ್ಮಣ್ಣ ಕಾಂಬಳೆ (54) ಮೃತ ವ್ಯಕ್ತಿ. ಬೆಂಗಳೂರಿನಿಂದ ಆಗಮಿಸುವ ಖಾಸಗಿ ಬಸ್‍ನ್ನು ಜೆ.ಎನ್.ರಸ್ತೆಯ ಖಜಾನೆ ಕಾರ್ಯಾಲಯದ ಬಳಿ ನಿತ್ಯ ಪಾರ್ಕಿಂಗ್ ಮಾಡಲಾಗುತ್ತಿತ್ತು. ನಿತ್ಯದಂತೆಯೇ ಅಲ್ಲಿ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ಬಸ್ ಚಾಲಕ ಬಸ್ಸನ್ನು ಹಿಮ್ಮುಖದಲ್ಲಿ ಚಲಾಯಿಸುವಾಗ ಈ ದುರ್ಘಟನೆ ನಡೆದಿದೆ.

ಬಸ್ಸಿನ ಹಿಂಬದಿ ಮಹಾದೇವನಿಗೆ ಬಡಿದ ಪರಿಣಾಮ ಆತ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದ್ದು, ಖಾಸಗಿ ಬಸ್‍ ಚಾಲಕ ಸವದತ್ತಿಯ ಉಮೇಶ ಹನುಮಂತ ಹೊಸಮನಿಯನ್ನು ಬಂಧಿಸಲಾಗಿದೆ.

ಶಿರಸಿ: ಖಾಸಗಿ ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಜೆ.ಎನ್.ರಸ್ತೆ ಸಿನಿಮಾ ಮಂದಿರದ ಬಳಿ ನಡೆದಿದೆ.

ದಾಂಡೇಲಿಯ ಮಾರುತಿ ನಗರದ ಮಹಾದೇವ ಪದ್ಮಣ್ಣ ಕಾಂಬಳೆ (54) ಮೃತ ವ್ಯಕ್ತಿ. ಬೆಂಗಳೂರಿನಿಂದ ಆಗಮಿಸುವ ಖಾಸಗಿ ಬಸ್‍ನ್ನು ಜೆ.ಎನ್.ರಸ್ತೆಯ ಖಜಾನೆ ಕಾರ್ಯಾಲಯದ ಬಳಿ ನಿತ್ಯ ಪಾರ್ಕಿಂಗ್ ಮಾಡಲಾಗುತ್ತಿತ್ತು. ನಿತ್ಯದಂತೆಯೇ ಅಲ್ಲಿ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ಬಸ್ ಚಾಲಕ ಬಸ್ಸನ್ನು ಹಿಮ್ಮುಖದಲ್ಲಿ ಚಲಾಯಿಸುವಾಗ ಈ ದುರ್ಘಟನೆ ನಡೆದಿದೆ.

ಬಸ್ಸಿನ ಹಿಂಬದಿ ಮಹಾದೇವನಿಗೆ ಬಡಿದ ಪರಿಣಾಮ ಆತ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದ್ದು, ಖಾಸಗಿ ಬಸ್‍ ಚಾಲಕ ಸವದತ್ತಿಯ ಉಮೇಶ ಹನುಮಂತ ಹೊಸಮನಿಯನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.