ETV Bharat / state

ದೋಣಿ ದುರಂತ: ಕಣ್ಮರೆಯಾದವರು ಸಮುದ್ರದಾಳದಲ್ಲಿ ಬಲೆಯೊಳಗೆ ಬಂಧಿ?

ಕಿರಿಮಂಜೇಶ್ವರ ಸಮೀಪದ ಕೊಡೇರಿಯಲ್ಲಿ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮೀನುಗಾರರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಮುದ್ರದಾಳದಲ್ಲಿ ಮೀನುಗಾರರು ಬಲೆಯೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

author img

By

Published : Aug 16, 2020, 10:07 PM IST

Updated : Aug 16, 2020, 11:05 PM IST

udupi-boat-tragedy-rescue-operation-going-on
ಉಡುಪಿ ನಾಡದೋಣಿ ದುರಂತ

ಉಡುಪಿ : ದೋಣಿ ದುರಂತದಲ್ಲಿ ಕಾಣೆಯಾಗಿರುವ ಮೀನುಗಾರರ ರಕ್ಷಣಾ ಕಾರ್ಯ ಮುಂದುವರೆದಿದೆ. ಕಡಲಿನ ಪ್ರಕ್ಷುಬ್ಧ ವಾತಾವರಣ ಮತ್ತು ವಿಪರೀತ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ.

ದೋಣಿ ದುರಂತ: ಕಣ್ಮರೆಯಾದವರು ಸಮುದ್ರದಾಳದಲ್ಲಿ ಬಲೆಯೊಳಗೆ ಬಂಧಿ?

ಬೈಂದೂರಿನ ಕೊಡೇರಿ ಪರಿಸರದಲ್ಲಿ ನಡೆದ ದುರ್ಘಟನೆ ಇದು ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ನಾಲ್ಕೈದು ದೋಣಿಗಳು ಇಲ್ಲಿ ಅಪಘಾತಕ್ಕೀಡಾಗಿದ್ದವು. ಆದರೆ ಈ ಬಾರಿ ನಡೆದ ದುರಂತ ಮಾತ್ರ ನಾಲ್ವರ ಪ್ರಾಣವನ್ನು ಕಸಿದುಕೊಂಡಿದೆ.

ಇದನ್ನೂ ಓದಿ: ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ

ಸ್ಥಳೀಯ ಮೀನುಗಾರರ ಜೊತೆಗೆ ಕರಾವಳಿ ಕಾವಲು ಪಡೆ ಮತ್ತಿತರ ರಕ್ಷಣಾ ಕಾರ್ಯಕರ್ತರು ಕಡಲಿಗಿಳಿದು ಶೋಧ ನಡೆಸುತ್ತಿದ್ದಾರೆ. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರರಿಗೆ ಧೈರ್ಯ ತುಂಬಿದ್ದಾರೆ.

Udupi boat tragedy rescue operation going on
ಕಣ್ಮರೆಯಾದವರು

ಕಾಣೆಯಾದ ನಾಲ್ವರಲ್ಲಿ ಇಬ್ಬರು ಬಲೆಗೆ ಸಿಲುಕಿದ ಕಾರಣ ಈಜಲಾಗದೆ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಇವರಿಬ್ಬರ ದೇಹ ಬಲೆಯಲ್ಲೇ ಸಿಲುಕಿದೆ ಎನ್ನಲಾಗುತ್ತಿದ್ದು, ಮೇಲಕ್ಕೆತ್ತಲು ಹರಸಾಹಸಪಡುತ್ತಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.

ಉಡುಪಿ : ದೋಣಿ ದುರಂತದಲ್ಲಿ ಕಾಣೆಯಾಗಿರುವ ಮೀನುಗಾರರ ರಕ್ಷಣಾ ಕಾರ್ಯ ಮುಂದುವರೆದಿದೆ. ಕಡಲಿನ ಪ್ರಕ್ಷುಬ್ಧ ವಾತಾವರಣ ಮತ್ತು ವಿಪರೀತ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ.

ದೋಣಿ ದುರಂತ: ಕಣ್ಮರೆಯಾದವರು ಸಮುದ್ರದಾಳದಲ್ಲಿ ಬಲೆಯೊಳಗೆ ಬಂಧಿ?

ಬೈಂದೂರಿನ ಕೊಡೇರಿ ಪರಿಸರದಲ್ಲಿ ನಡೆದ ದುರ್ಘಟನೆ ಇದು ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ನಾಲ್ಕೈದು ದೋಣಿಗಳು ಇಲ್ಲಿ ಅಪಘಾತಕ್ಕೀಡಾಗಿದ್ದವು. ಆದರೆ ಈ ಬಾರಿ ನಡೆದ ದುರಂತ ಮಾತ್ರ ನಾಲ್ವರ ಪ್ರಾಣವನ್ನು ಕಸಿದುಕೊಂಡಿದೆ.

ಇದನ್ನೂ ಓದಿ: ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ

ಸ್ಥಳೀಯ ಮೀನುಗಾರರ ಜೊತೆಗೆ ಕರಾವಳಿ ಕಾವಲು ಪಡೆ ಮತ್ತಿತರ ರಕ್ಷಣಾ ಕಾರ್ಯಕರ್ತರು ಕಡಲಿಗಿಳಿದು ಶೋಧ ನಡೆಸುತ್ತಿದ್ದಾರೆ. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರರಿಗೆ ಧೈರ್ಯ ತುಂಬಿದ್ದಾರೆ.

Udupi boat tragedy rescue operation going on
ಕಣ್ಮರೆಯಾದವರು

ಕಾಣೆಯಾದ ನಾಲ್ವರಲ್ಲಿ ಇಬ್ಬರು ಬಲೆಗೆ ಸಿಲುಕಿದ ಕಾರಣ ಈಜಲಾಗದೆ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಇವರಿಬ್ಬರ ದೇಹ ಬಲೆಯಲ್ಲೇ ಸಿಲುಕಿದೆ ಎನ್ನಲಾಗುತ್ತಿದ್ದು, ಮೇಲಕ್ಕೆತ್ತಲು ಹರಸಾಹಸಪಡುತ್ತಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.

Last Updated : Aug 16, 2020, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.