ETV Bharat / state

ಉಡುಪಿ: ಕುಂದಾಪುರದ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್​ಗೆ ಬಿದ್ದ ಚಿರತೆ!

author img

By

Published : May 27, 2021, 8:55 AM IST

Updated : May 27, 2021, 1:05 PM IST

ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್​ಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಚಿರತೆಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

Leopard
Leopard

ಉಡುಪಿ: ಕುಂದಾಪುರದ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.

ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್​ಗೆ ಚಿರತೆ ಬಿದ್ದಿತ್ತು. ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಹಾರ ಹುಡುಕಿಕೊಂಡು ಬಂದ ಚಿರತೆ ನೀರಿನ ಟ್ಯಾಂಕ್​ಗೆ ಮುಂಜಾನೆ ವೇಳೆಗೆ ಬಿದ್ದಿದೆ. ಮಧ್ಯಾಹ್ನ ಮನೆಯವರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸದ್ಯ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ.

ನೀರಿನ ಟ್ಯಾಂಕ್​ಗೆ ಬಿದ್ದ ಚಿರತೆ

ಇದನ್ನೂ ಓದಿ: HS Doreswamy: ನಾಡು ಮೆಚ್ಚಿದ 'ದೊರೆ'ಗೂ ತಪ್ಪಲಿಲ್ಲ ಅಪಸ್ವರ

ಉಡುಪಿ: ಕುಂದಾಪುರದ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.

ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್​ಗೆ ಚಿರತೆ ಬಿದ್ದಿತ್ತು. ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಹಾರ ಹುಡುಕಿಕೊಂಡು ಬಂದ ಚಿರತೆ ನೀರಿನ ಟ್ಯಾಂಕ್​ಗೆ ಮುಂಜಾನೆ ವೇಳೆಗೆ ಬಿದ್ದಿದೆ. ಮಧ್ಯಾಹ್ನ ಮನೆಯವರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆಯನ್ನು ಸದ್ಯ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ.

ನೀರಿನ ಟ್ಯಾಂಕ್​ಗೆ ಬಿದ್ದ ಚಿರತೆ

ಇದನ್ನೂ ಓದಿ: HS Doreswamy: ನಾಡು ಮೆಚ್ಚಿದ 'ದೊರೆ'ಗೂ ತಪ್ಪಲಿಲ್ಲ ಅಪಸ್ವರ

Last Updated : May 27, 2021, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.