ETV Bharat / state

ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್... ಉಡುಪಿ ಯುವಕರ ಕಮಾಲ್​! - udupi sea plane

ಪ್ರಧಾನಿ ನರೇಂದ್ರ ಮೋದಿ ಗುಜರಾತ್​​ನಲ್ಲಿ ಭಾರತದ ಮೊದಲ ಸೀಪ್ಲೇನ್​​​​​ ಉದ್ಘಾಟಿಸಿದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಇದೀಗ ಅದೇ ಮಾದರಿಯ ಪ್ಲೇನ್ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಯಶಸ್ವಿಯಾಗಿ ಹಾರಾಡುತ್ತಿದೆ.

A microlight seaplane floating in the water, floating in the water
ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್
author img

By

Published : Mar 19, 2021, 6:04 AM IST

ಉಡುಪಿ: ಭೂಮಿಯಿಂದ ಆಕಾಶಕ್ಕೆ ವಿಮಾನ ಟೇಕಾಫ್​ ಆಗುವುದು ಸರ್ವೇ ಸಾಮಾನ್ಯ. ಆದರೆ ಅದೇ ವಿಮಾನ ಸಮುದ್ರ ಅಥವಾ ನದಿಯ ನೀರಿನ ಮೇಲಿನಿಂದ ಆಗಸಕ್ಕೆ ಹಾರಿದರೆ..! ಆ ಅನುಭವ ಬಲು ರೋಚಕ.

ಹೀಗೆ ನೀರಿನ ಮೇಲೆ ಹಡಗಿನಂತೆ ತೇಲುತ್ತಾ ಬಂದು ಗಗನದತ್ತ ಸಾಗುವ ಸೀಪ್ಲೇನ್​. ಇದು ಸಿದ್ಧವಾಗಿದ್ದು ಕೃಷ್ಣನಗರಿ ಉಡುಪಿಯಲ್ಲಿ. ಇತ್ತೀಚೆಗೆ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತದ ಚರ್ಚೆ ಜೋರಾಗಿಯೇ ನಡೀತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಈ ಮೈಕ್ರೋಲೈಟ್ ಸೀಪ್ಲೇನ್​​​​​ ಯಶಸ್ವಿ ಹಾರಾಟ ಕೂಡ ನಡೆಸಿದೆ.

ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್

ಪ್ರಧಾನಿ ನರೇಂದ್ರ ಮೋದಿ ಗುಜರಾತ್​​ನಲ್ಲಿ ಭಾರತದ ಮೊದಲ ಸೀಪ್ಲೇನ್​​​​​ ಉದ್ಘಾಟಿಸಿದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಇದೀಗ ಅದೇ ಮಾದರಿಯ ಪ್ಲೇನ್ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಯಶಸ್ವಿಯಾಗಿ ಹಾರಾಡುತ್ತಿದೆ. ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್.

ಏರ್ ಮಾಡೆಲಿಂಗ್, ಎನ್​​​ಸಿಸಿ ಇನ್​ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್, 15 ವರ್ಷಗಳ ಕಾಲ ಶ್ರಮ ವಹಿಸಿ ಈ ಮೈಕ್ರೋಲೈಟ್ ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ಧೃತಿ ಎಂಬ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ತಯಾರಿಸಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ಸಿದ್ಧಗೊಳಿಸಿದ ಪುಷ್ಪರಾಜ್, ಮುಂದೆ 7 ಜನ ಕುಳಿತು ಹಾರುವ ಸಾಮರ್ಥ್ಯದ ವಿಮಾನ ತಯಾರಿಸುವ ಕನಸು ಹೊಂದಿದ್ದಾರೆ.

ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ತೂಕ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ, ಸ್ಟೀಲ್​ನಿಂದ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್​​, 33 ಎಚ್​​​​.ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್​​ನ ಮರದ ಪ್ರೊಫೆಲ್ಲರ್ ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಚಲಿಸಿ ಆಗಸಕ್ಕೆ ಹಾರುತ್ತದೆ.

ಈ ವಿಮಾನ ನಿರ್ಮಾಣಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಪುಷ್ಪರಾಜ್​ ಮೈಕ್ರೋಲೈಟ್ ಸೀಪ್ಲೇನ್​ ತಯಾರಿಸಿದ್ದಾರೆ. ಗೆಳೆಯರ ಸಂಬಂಧಿಕರೇ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಯಂತ್ರಗಳಿಗೆ ಸಹಾಯಧನ ನೀಡಬೇಕು ಎಂದು ಯುವಕರು ಮನವಿ ಮಾಡಿದ್ದಾರೆ.

ಉಡುಪಿ: ಭೂಮಿಯಿಂದ ಆಕಾಶಕ್ಕೆ ವಿಮಾನ ಟೇಕಾಫ್​ ಆಗುವುದು ಸರ್ವೇ ಸಾಮಾನ್ಯ. ಆದರೆ ಅದೇ ವಿಮಾನ ಸಮುದ್ರ ಅಥವಾ ನದಿಯ ನೀರಿನ ಮೇಲಿನಿಂದ ಆಗಸಕ್ಕೆ ಹಾರಿದರೆ..! ಆ ಅನುಭವ ಬಲು ರೋಚಕ.

ಹೀಗೆ ನೀರಿನ ಮೇಲೆ ಹಡಗಿನಂತೆ ತೇಲುತ್ತಾ ಬಂದು ಗಗನದತ್ತ ಸಾಗುವ ಸೀಪ್ಲೇನ್​. ಇದು ಸಿದ್ಧವಾಗಿದ್ದು ಕೃಷ್ಣನಗರಿ ಉಡುಪಿಯಲ್ಲಿ. ಇತ್ತೀಚೆಗೆ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತದ ಚರ್ಚೆ ಜೋರಾಗಿಯೇ ನಡೀತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಈ ಮೈಕ್ರೋಲೈಟ್ ಸೀಪ್ಲೇನ್​​​​​ ಯಶಸ್ವಿ ಹಾರಾಟ ಕೂಡ ನಡೆಸಿದೆ.

ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್

ಪ್ರಧಾನಿ ನರೇಂದ್ರ ಮೋದಿ ಗುಜರಾತ್​​ನಲ್ಲಿ ಭಾರತದ ಮೊದಲ ಸೀಪ್ಲೇನ್​​​​​ ಉದ್ಘಾಟಿಸಿದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಇದೀಗ ಅದೇ ಮಾದರಿಯ ಪ್ಲೇನ್ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಯಶಸ್ವಿಯಾಗಿ ಹಾರಾಡುತ್ತಿದೆ. ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್.

ಏರ್ ಮಾಡೆಲಿಂಗ್, ಎನ್​​​ಸಿಸಿ ಇನ್​ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್, 15 ವರ್ಷಗಳ ಕಾಲ ಶ್ರಮ ವಹಿಸಿ ಈ ಮೈಕ್ರೋಲೈಟ್ ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ಧೃತಿ ಎಂಬ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ತಯಾರಿಸಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ಸಿದ್ಧಗೊಳಿಸಿದ ಪುಷ್ಪರಾಜ್, ಮುಂದೆ 7 ಜನ ಕುಳಿತು ಹಾರುವ ಸಾಮರ್ಥ್ಯದ ವಿಮಾನ ತಯಾರಿಸುವ ಕನಸು ಹೊಂದಿದ್ದಾರೆ.

ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ತೂಕ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ, ಸ್ಟೀಲ್​ನಿಂದ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್​​, 33 ಎಚ್​​​​.ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್​​ನ ಮರದ ಪ್ರೊಫೆಲ್ಲರ್ ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಚಲಿಸಿ ಆಗಸಕ್ಕೆ ಹಾರುತ್ತದೆ.

ಈ ವಿಮಾನ ನಿರ್ಮಾಣಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಪುಷ್ಪರಾಜ್​ ಮೈಕ್ರೋಲೈಟ್ ಸೀಪ್ಲೇನ್​ ತಯಾರಿಸಿದ್ದಾರೆ. ಗೆಳೆಯರ ಸಂಬಂಧಿಕರೇ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಯಂತ್ರಗಳಿಗೆ ಸಹಾಯಧನ ನೀಡಬೇಕು ಎಂದು ಯುವಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.