ETV Bharat / state

ಲಾಕ್​​ಡೌನ್ ವೇಳೆ ಕಲ್ಪತರು ನಾಡಲ್ಲಿ ಇಳಿಮುಖವಾದ ಅಪಘಾತ ಪ್ರಕರಣಗಳು - ತುಮಕೂರು ಅಪಘಾತಗಳು

ಕೊರೊನಾ ಲಾಕ್​​​ಡೌನ್​ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕೆಲ ತಿಂಗಳುಗಳ ಕಾಲ ಇಳಿಮುಖವಾಗಿತ್ತು.

The number of casualties during the lockdown at Tumkur is low
ಲಾಕ್​​ಡೌನ್ ವೇಳೆ ಕಲ್ಪತರು ನಾಡಲ್ಲಿ ಇಳಿಮುಖವಾದ ಅಪಘಾತ ಪ್ರಕರಣಗಳು
author img

By

Published : Sep 24, 2020, 7:13 PM IST

ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಜಾರಿಯಾಗಿದ್ದ ಲಾಕ್​​​​ಡೌನ್​ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕೆಲ ತಿಂಗಳುಗಳ ಕಾಲ ಇಳಿಮುಖವಾಗಿತ್ತು.

ಮಾರ್ಚ್ ತಿಂಗಳ ಕೊನೆಯಲ್ಲಿ ಲಾಕ್​​​ಡೌನ್​ ಜಾರಿಗೆ ಬಂದಿತ್ತು. ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಕೇವಲ 46 ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನು ನಾಲ್ವರು ಗಂಭೀರವಾಗಿ ಗಾಯ ಗೊಂಡಿದ್ದರು, 32 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

ಲಾಕ್​​ಡೌನ್ ವೇಳೆ ಕಲ್ಪತರು ನಾಡಲ್ಲಿ ಇಳಿಮುಖವಾದ ಅಪಘಾತ ಪ್ರಕರಣಗಳು

ಇನ್ನು ಮಾರ್ಚ್ ತಿಂಗಳಲ್ಲಿ 189 ವಿವಿಧ ರೀತಿಯ ಅಪಘಾತಗಳು ನಡೆದಿವೆ. ಅದರಲ್ಲಿ 70 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 18ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 208 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.

ಜನವರಿ ತಿಂಗಳಲ್ಲಿ ಜಿಲ್ಲೆಯಲ್ಲಿ 208 ವಿವಿಧ ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 60 ಮಂದಿ ಅಸುನೀಗಿದ್ದಾರೆ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 210 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ 206 ಅನೇಕ ರೀತಿಯ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದು, ಅದರಲ್ಲಿ 72 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ 23 ಮಂದಿ ಗಂಭೀರವಾಗಿ ಗಾಯಗೊಂಡು 206 ಮುಂದಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದವು.

ಇನ್ನು ಹಂತಹಂತವಾಗಿ ಲಾಕ್​​​ಡೌನ್​ ಸಡಿಲಿಕೆ ಮಾಡಲಾಗುತ್ತಿತ್ತು. ಮೇ ತಿಂಗಳಲ್ಲಿ 159 ವಿವಿಧ ಅಪಘಾತ ಪ್ರಕರಣಗಳು ಘಟಿಸಿದ್ದು, ಅದರಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಇನ್ನು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 163 ಮಂದಿ ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದರು.

ಜೂನ್ ತಿಂಗಳಲ್ಲಿ 153 ವಿವಿಧ ರೀತಿಯ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದು, ಅದರಲ್ಲಿ 57ಮಂದಿ ಅಸುನೀಗಿದ್ದಾರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸಣ್ಣಪುಟ್ಟ ಗಾಯಗಳಾಗಿದ್ದ 162 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇನ್ನು ಜುಲೈ ತಿಂಗಳಲ್ಲಿ 159 ಅನೇಕ ಬಗೆಯ ಅಪರಾಧ ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 53 ಮಂದಿ ಮೃತಪಟ್ಟಿದ್ದಾರೆ ಇನ್ನು 152 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ 282 ಅಪಘಾತ ಪ್ರಕರಣಗಳು ನಡೆದಿದ್ದು, ಅದರಲ್ಲಿ 61 ಮಂದಿ ಮೃತಪಟ್ಟಿದ್ದಾರೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 155 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಒಟ್ಟಾರೆ ಲಾಕ್​​ಡೌನ್​ ಸಂದರ್ಭದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಎಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಬಹುತೇಕ ಜನರು ಮನೆಯಿಂದ ಹೊರಗೆ ಬರದೇ ಇದ್ದದ್ದು, ಇದಕ್ಕೆ ಕಾರಣವಾಗಿದೆ. ಇನ್ನೂ ಪ್ರವಾಸಿಗರೂ ಸಹ ಪ್ರವಾಸಿ ಕೇಂದ್ರಕ್ಕೆ ಕೇಂದ್ರಗಳಿಗೆ ಹೋಗದೇ ಸ್ತಬ್ಧವಾಗಿರುವ ಕೂಡ ಬಹುಮುಖ್ಯವಾಗಿದೆ.

ಇನ್ನು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 88 ಆಕ್ಸಿಡೆಂಟ್ ಹಾಟ್ ಸ್ಟಾಪ್ ಗಳೆಂದು ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಗುರುತಿಸಿದೆ. ಲಾಕ್​​​ಡೌನ್​​ ಸಂದರ್ಭದಲ್ಲಿಯೂ ಇಂತಹ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಆಕ್ಸಿಡೆಂಟ್ ಹಾಟ್​​​​​ಸ್ಪಾಟ್​ಗಳಲ್ಲಿ ತೆಗೆದುಕೊಂಡಂತಹ ಮುಂಜಾಗ್ರತೆ ಕ್ರಮಗಳು ಸಹ ಅಪಘಾತ ಪ್ರಕರಣಗಳಲ್ಲಿ ಇಳಿಮುಖ ಆಗಲು ಸಹಕಾರಿಯಾಗಿದೆ ಎಂಬುದು ಪೊಲೀಸ್ ಇಲಾಖೆ ಮೂಲಗಳ ಸ್ಪಷ್ಟನೆ ನೀಡಿವೆ.

ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದ ಜಾರಿಯಾಗಿದ್ದ ಲಾಕ್​​​​ಡೌನ್​ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕೆಲ ತಿಂಗಳುಗಳ ಕಾಲ ಇಳಿಮುಖವಾಗಿತ್ತು.

ಮಾರ್ಚ್ ತಿಂಗಳ ಕೊನೆಯಲ್ಲಿ ಲಾಕ್​​​ಡೌನ್​ ಜಾರಿಗೆ ಬಂದಿತ್ತು. ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಕೇವಲ 46 ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಇನ್ನು ನಾಲ್ವರು ಗಂಭೀರವಾಗಿ ಗಾಯ ಗೊಂಡಿದ್ದರು, 32 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

ಲಾಕ್​​ಡೌನ್ ವೇಳೆ ಕಲ್ಪತರು ನಾಡಲ್ಲಿ ಇಳಿಮುಖವಾದ ಅಪಘಾತ ಪ್ರಕರಣಗಳು

ಇನ್ನು ಮಾರ್ಚ್ ತಿಂಗಳಲ್ಲಿ 189 ವಿವಿಧ ರೀತಿಯ ಅಪಘಾತಗಳು ನಡೆದಿವೆ. ಅದರಲ್ಲಿ 70 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 18ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 208 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.

ಜನವರಿ ತಿಂಗಳಲ್ಲಿ ಜಿಲ್ಲೆಯಲ್ಲಿ 208 ವಿವಿಧ ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 60 ಮಂದಿ ಅಸುನೀಗಿದ್ದಾರೆ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 210 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ 206 ಅನೇಕ ರೀತಿಯ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದು, ಅದರಲ್ಲಿ 72 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ 23 ಮಂದಿ ಗಂಭೀರವಾಗಿ ಗಾಯಗೊಂಡು 206 ಮುಂದಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದವು.

ಇನ್ನು ಹಂತಹಂತವಾಗಿ ಲಾಕ್​​​ಡೌನ್​ ಸಡಿಲಿಕೆ ಮಾಡಲಾಗುತ್ತಿತ್ತು. ಮೇ ತಿಂಗಳಲ್ಲಿ 159 ವಿವಿಧ ಅಪಘಾತ ಪ್ರಕರಣಗಳು ಘಟಿಸಿದ್ದು, ಅದರಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಇನ್ನು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 163 ಮಂದಿ ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದರು.

ಜೂನ್ ತಿಂಗಳಲ್ಲಿ 153 ವಿವಿಧ ರೀತಿಯ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದು, ಅದರಲ್ಲಿ 57ಮಂದಿ ಅಸುನೀಗಿದ್ದಾರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸಣ್ಣಪುಟ್ಟ ಗಾಯಗಳಾಗಿದ್ದ 162 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇನ್ನು ಜುಲೈ ತಿಂಗಳಲ್ಲಿ 159 ಅನೇಕ ಬಗೆಯ ಅಪರಾಧ ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 53 ಮಂದಿ ಮೃತಪಟ್ಟಿದ್ದಾರೆ ಇನ್ನು 152 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ 282 ಅಪಘಾತ ಪ್ರಕರಣಗಳು ನಡೆದಿದ್ದು, ಅದರಲ್ಲಿ 61 ಮಂದಿ ಮೃತಪಟ್ಟಿದ್ದಾರೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 155 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಒಟ್ಟಾರೆ ಲಾಕ್​​ಡೌನ್​ ಸಂದರ್ಭದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಎಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ಬಹುತೇಕ ಜನರು ಮನೆಯಿಂದ ಹೊರಗೆ ಬರದೇ ಇದ್ದದ್ದು, ಇದಕ್ಕೆ ಕಾರಣವಾಗಿದೆ. ಇನ್ನೂ ಪ್ರವಾಸಿಗರೂ ಸಹ ಪ್ರವಾಸಿ ಕೇಂದ್ರಕ್ಕೆ ಕೇಂದ್ರಗಳಿಗೆ ಹೋಗದೇ ಸ್ತಬ್ಧವಾಗಿರುವ ಕೂಡ ಬಹುಮುಖ್ಯವಾಗಿದೆ.

ಇನ್ನು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 88 ಆಕ್ಸಿಡೆಂಟ್ ಹಾಟ್ ಸ್ಟಾಪ್ ಗಳೆಂದು ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಗುರುತಿಸಿದೆ. ಲಾಕ್​​​ಡೌನ್​​ ಸಂದರ್ಭದಲ್ಲಿಯೂ ಇಂತಹ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಆಕ್ಸಿಡೆಂಟ್ ಹಾಟ್​​​​​ಸ್ಪಾಟ್​ಗಳಲ್ಲಿ ತೆಗೆದುಕೊಂಡಂತಹ ಮುಂಜಾಗ್ರತೆ ಕ್ರಮಗಳು ಸಹ ಅಪಘಾತ ಪ್ರಕರಣಗಳಲ್ಲಿ ಇಳಿಮುಖ ಆಗಲು ಸಹಕಾರಿಯಾಗಿದೆ ಎಂಬುದು ಪೊಲೀಸ್ ಇಲಾಖೆ ಮೂಲಗಳ ಸ್ಪಷ್ಟನೆ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.