ETV Bharat / state

ತುಮಕೂರು: ತಾಳಿ ಕಟ್ಟಿಸಿಕೊಳ್ಳುವ ಶುಭ ವೇಳೆ ಉಲ್ಟಾ ಹೊಡೆದ ವಧು.. ಮುರಿದು ಬಿದ್ದ ಮದುವೆ

ವರ ತಾಳಿ ಕಟ್ಟಲು ಮುಂದಾದಾಗ ವಧು ನಿರಾಕರಿಸಿದ್ದರಿಂದ ಮದುವೆ ಮುರಿದುಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

author img

By ETV Bharat Karnataka Team

Published : Aug 27, 2023, 5:22 PM IST

ಮದುವೆ
ಮದುವೆ

ತುಮಕೂರು : ಮದುವೆಯ ಎಲ್ಲಾ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದ್ದವು. ಇನ್ನೇನು ವರ ತಾಳಿ ಕಟ್ಟುವಾಗ ವಧು ನಿರಾಕರಿಸಿದ್ದರಿಂದ ಮದುವೆ ಮುರಿದುಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಜೊತೆ ಮದುವೆ ಸಂಬಂಧ ಮುಂದುವರೆಸಲು ನಿರಾಕರಿಸಿದ ವರ ಹಾಗೂ ಕುಟುಂಬಸ್ಥರು ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ.

ಅಲ್ಲದೆ ಒಂದು ಲಕ್ಷ ಹಣ ವರನ ಕಡೆಯವರಿಗೆ ನೀಡಲು ವಧುವಿನ ತಂದೆ ಒಪ್ಪಿದ್ದಾರೆ. ಮದುವೆಗೆ ನೀಡಿದ ಚಿನ್ನಾಭರಣ ವಾಪಸ್ ಕೊಟ್ಟಿದ್ದಾರೆ. ಇನ್ನು ಕೋಳಾಲ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅವರ ಸಮ್ಮುಖದಲ್ಲಿ ರಾಜೀ ಸಂಧಾನ ನಡೆದಿದೆ. ಮದುವೆ ಖರ್ಚಿಗೆಂದು ಒಂದು ಲಕ್ಷ ರೂಪಾಯಿ ಪಡೆದ ವರನ ಕಡೆಯವರು, ಮದುವೆ ಮುರಿದು ಬಿದ್ದ ನಂತರ ತಮ್ಮ ತಮ್ಮ ಮನೆಗಳತ್ತ ಹೊರಟು ಹೋಗಿದ್ದಾರೆ.

ವಧು ತನ್ನ ಮಾವನ ಮಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮದುವೆಗೆ ನಿರಾಕರಿಸಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ವಧುವಿನ ಪ್ರಿಯಕರ ಪೊಲೀಸ್ ಠಾಣೆಗೆ ಹೋಗಿದ್ದ. ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದ. ಪ್ರಿಯಕರನನ್ನ ಕಂಡು ವದು ಮದುವೆಗೆ ನಿರಾಕರಿಸಿದ್ದಳು. ತಾಳಿ ಕಟ್ಟಿಸಿಕೊಳ್ಳುವ ವೇಳೆ ವಧುವಿನ ನಿರ್ಧಾರವನ್ನು ಕೇಳಿ ವರನ ಕಡೆಯವರು ದಂಗಾಗಿ ಹೋಗಿದ್ದಾರೆ. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಯುವತಿ : ನಿಶ್ಚಿತಾರ್ಥ ಮುಗಿಸಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ಹೊತ್ತಲ್ಲಿ, ಯುವಕ ಮದುವೆಯಾಗಲು ನಿರಾಕರಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಇಂಟಿತೊಳಲು ಗ್ರಾಮದಲ್ಲಿ (ಮಾರ್ಚ್​ 12-2023) ನಡೆದಿತ್ತು. ಯುವತಿ ಹಾಗೂ ಆಕೆಯ ಪೋಷಕರು ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ಇಂಟಿತೊಳಲು ಗ್ರಾಮದ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರ ಚನ್ನಿಗ ಗ್ರಾಮದ ನಿಶ್ಚಿನ್ ಎಂಬಾತನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು.

ಮದುವೆ ನಿಶ್ಚಯವಾಗುವ ಮುನ್ನವೇ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ನಿಶ್ಚಿನ್ ಗೋವಾಕ್ಕೆ ಟ್ರಿಪ್ ಕರೆದುಕೊಂಡು ಹೋಗಿದ್ದ. ಅಲ್ಲಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿದ್ದಾನಂತೆ. ಮದುವೆಗೂ ಮುನ್ನ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿತ್ತು.

ಇದಾದ ಬಳಿಕ ಮತ್ತೊಂದು ವರಸೆ ತೆಗೆದ ನಿಶ್ಚಿನ್, ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಮಾಡಿಕೊಡುವಂತೆ ಮತ್ತು ತಾನು ಹೇಳಿದ ರೀತಿಯದ್ದೇ ಭೋಜನ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದ. ಆತನ ಬೇಡಿಕೆಯಂತೆ ಹುಡುಗಿ ಮನೆಯವರು ಬೇಲೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಸಿದ್ದರು. ಮದುವೆ ಸಮೀಪಿಸುತ್ತಿದ್ದಂತೆ ನಿಶ್ಚಿನ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದ ಎಂದು ಆರೋಪಿಸಲಾಗಿತ್ತು.

''ಮೇ 9ಕ್ಕೆ ಎರಡೂ ಮನೆಯವರು ಮದುವೆ ನಿಶ್ಚಯ ಮಾಡಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಿದ್ದೆವು. ಆದರೆ, ಇದೀಗ ಹುಡುಗ ಮದುವೆ ಬೇಡ ಅಂತಿದ್ದಾನೆ. ನಾನು ಮದುವೆಯಾಗಬೇಕೆಂದರೆ ನೀನು ಕೆಲಸ ಬಿಡಬೇಕು ಎಂದು ಹೇಳಿ ಹುಡುಗಿಯನ್ನೂ ಕೆಲಸದಿಂದಲೂ ಬಿಡಿಸಿದ್ದಾನೆ. ಇವೆಲ್ಲಾ ಆದಮೇಲೆ ನನ್ನಿಷ್ಟದಂತೆ ನೀನು ನಡೆದುಕೊಳ್ಳುತ್ತಿಲ್ಲ ಎಂದು ಹೇಳಿ ಮದುವೆ ಬೇಡ ಎನ್ನುತ್ತಿದ್ದಾನೆ. ನನ್ನ ಮರ್ಯಾದೆ ಹೋಯ್ತು ಎಂದು ನೊಂದು ಹುಡುಗಿ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಪೊಲೀಸ್ ಠಾಣೆಯ ಮಟ್ಟಿಲೇರಿದ್ದಾಳೆ'' ಎಂದು ಹುಡುಗಿಯ ಕುಟುಂಬಸ್ಥರು ಹೇಳಿದ್ದು, ಬೇಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ನಿಶ್ಚಿತಾರ್ಥ ಬಳಿಕ ಮದುವೆ ನಿರಾಕರಿಸಿದ ಯುವಕ : ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಯುವತಿ

ತುಮಕೂರು : ಮದುವೆಯ ಎಲ್ಲಾ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದ್ದವು. ಇನ್ನೇನು ವರ ತಾಳಿ ಕಟ್ಟುವಾಗ ವಧು ನಿರಾಕರಿಸಿದ್ದರಿಂದ ಮದುವೆ ಮುರಿದುಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಜೊತೆ ಮದುವೆ ಸಂಬಂಧ ಮುಂದುವರೆಸಲು ನಿರಾಕರಿಸಿದ ವರ ಹಾಗೂ ಕುಟುಂಬಸ್ಥರು ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ.

ಅಲ್ಲದೆ ಒಂದು ಲಕ್ಷ ಹಣ ವರನ ಕಡೆಯವರಿಗೆ ನೀಡಲು ವಧುವಿನ ತಂದೆ ಒಪ್ಪಿದ್ದಾರೆ. ಮದುವೆಗೆ ನೀಡಿದ ಚಿನ್ನಾಭರಣ ವಾಪಸ್ ಕೊಟ್ಟಿದ್ದಾರೆ. ಇನ್ನು ಕೋಳಾಲ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅವರ ಸಮ್ಮುಖದಲ್ಲಿ ರಾಜೀ ಸಂಧಾನ ನಡೆದಿದೆ. ಮದುವೆ ಖರ್ಚಿಗೆಂದು ಒಂದು ಲಕ್ಷ ರೂಪಾಯಿ ಪಡೆದ ವರನ ಕಡೆಯವರು, ಮದುವೆ ಮುರಿದು ಬಿದ್ದ ನಂತರ ತಮ್ಮ ತಮ್ಮ ಮನೆಗಳತ್ತ ಹೊರಟು ಹೋಗಿದ್ದಾರೆ.

ವಧು ತನ್ನ ಮಾವನ ಮಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮದುವೆಗೆ ನಿರಾಕರಿಸಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ವಧುವಿನ ಪ್ರಿಯಕರ ಪೊಲೀಸ್ ಠಾಣೆಗೆ ಹೋಗಿದ್ದ. ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದ. ಪ್ರಿಯಕರನನ್ನ ಕಂಡು ವದು ಮದುವೆಗೆ ನಿರಾಕರಿಸಿದ್ದಳು. ತಾಳಿ ಕಟ್ಟಿಸಿಕೊಳ್ಳುವ ವೇಳೆ ವಧುವಿನ ನಿರ್ಧಾರವನ್ನು ಕೇಳಿ ವರನ ಕಡೆಯವರು ದಂಗಾಗಿ ಹೋಗಿದ್ದಾರೆ. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಯುವತಿ : ನಿಶ್ಚಿತಾರ್ಥ ಮುಗಿಸಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ಹೊತ್ತಲ್ಲಿ, ಯುವಕ ಮದುವೆಯಾಗಲು ನಿರಾಕರಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಇಂಟಿತೊಳಲು ಗ್ರಾಮದಲ್ಲಿ (ಮಾರ್ಚ್​ 12-2023) ನಡೆದಿತ್ತು. ಯುವತಿ ಹಾಗೂ ಆಕೆಯ ಪೋಷಕರು ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ಇಂಟಿತೊಳಲು ಗ್ರಾಮದ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರ ಚನ್ನಿಗ ಗ್ರಾಮದ ನಿಶ್ಚಿನ್ ಎಂಬಾತನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು.

ಮದುವೆ ನಿಶ್ಚಯವಾಗುವ ಮುನ್ನವೇ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ನಿಶ್ಚಿನ್ ಗೋವಾಕ್ಕೆ ಟ್ರಿಪ್ ಕರೆದುಕೊಂಡು ಹೋಗಿದ್ದ. ಅಲ್ಲಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿದ್ದಾನಂತೆ. ಮದುವೆಗೂ ಮುನ್ನ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿತ್ತು.

ಇದಾದ ಬಳಿಕ ಮತ್ತೊಂದು ವರಸೆ ತೆಗೆದ ನಿಶ್ಚಿನ್, ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಮಾಡಿಕೊಡುವಂತೆ ಮತ್ತು ತಾನು ಹೇಳಿದ ರೀತಿಯದ್ದೇ ಭೋಜನ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದ. ಆತನ ಬೇಡಿಕೆಯಂತೆ ಹುಡುಗಿ ಮನೆಯವರು ಬೇಲೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಸಿದ್ದರು. ಮದುವೆ ಸಮೀಪಿಸುತ್ತಿದ್ದಂತೆ ನಿಶ್ಚಿನ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದ ಎಂದು ಆರೋಪಿಸಲಾಗಿತ್ತು.

''ಮೇ 9ಕ್ಕೆ ಎರಡೂ ಮನೆಯವರು ಮದುವೆ ನಿಶ್ಚಯ ಮಾಡಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಿದ್ದೆವು. ಆದರೆ, ಇದೀಗ ಹುಡುಗ ಮದುವೆ ಬೇಡ ಅಂತಿದ್ದಾನೆ. ನಾನು ಮದುವೆಯಾಗಬೇಕೆಂದರೆ ನೀನು ಕೆಲಸ ಬಿಡಬೇಕು ಎಂದು ಹೇಳಿ ಹುಡುಗಿಯನ್ನೂ ಕೆಲಸದಿಂದಲೂ ಬಿಡಿಸಿದ್ದಾನೆ. ಇವೆಲ್ಲಾ ಆದಮೇಲೆ ನನ್ನಿಷ್ಟದಂತೆ ನೀನು ನಡೆದುಕೊಳ್ಳುತ್ತಿಲ್ಲ ಎಂದು ಹೇಳಿ ಮದುವೆ ಬೇಡ ಎನ್ನುತ್ತಿದ್ದಾನೆ. ನನ್ನ ಮರ್ಯಾದೆ ಹೋಯ್ತು ಎಂದು ನೊಂದು ಹುಡುಗಿ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಪೊಲೀಸ್ ಠಾಣೆಯ ಮಟ್ಟಿಲೇರಿದ್ದಾಳೆ'' ಎಂದು ಹುಡುಗಿಯ ಕುಟುಂಬಸ್ಥರು ಹೇಳಿದ್ದು, ಬೇಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ನಿಶ್ಚಿತಾರ್ಥ ಬಳಿಕ ಮದುವೆ ನಿರಾಕರಿಸಿದ ಯುವಕ : ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.