ETV Bharat / state

ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ಸಂಭ್ರಮ; ಶಿವಮೊಗ್ಗದಲ್ಲಿ ಮನೆ, ಮನೆಗಳಲ್ಲಿ ಪೂಜೆ

author img

By ETV Bharat Karnataka Team

Published : Aug 25, 2023, 8:34 PM IST

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರು ಹಾಗೂ ಶಿವಮೊಗ್ಗದಲ್ಲಿ ವರಮಹಾಲಕ್ಷ್ಮಿ ಹಬ್ಬ
ತುಮಕೂರು ಹಾಗೂ ಶಿವಮೊಗ್ಗದಲ್ಲಿ ವರಮಹಾಲಕ್ಷ್ಮಿ ಹಬ್ಬ
ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ತುಮಕೂರು : ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆಯಿಂದಲೂ ಶಾಂತಿ ಹೋಮ ಸೇರಿದಂತೆ ಪಂಚಾಮೃತ ಅಭಿಷೇಕ ನಡೆಯಿತು. ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತರು ಬಂದಿದ್ದರು. ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗದ ವರಮಹಾಲಕ್ಷ್ಮಿ ಸಂಭ್ರಮ: ಶಿವಮೊಗ್ಗದ ಗಾಂಧಿ ಬಜಾರ್​ನ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಲಕ್ಷ್ಮೀ ಅವರು ತಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ತೆಂಗಿನಕಾಯಿಯಿಂದ ದೇವಿಯ ಮುಖವನ್ನು ತಯಾರು ಮಾಡಿ ಅದಕ್ಕೆ ಸೀರೆ, ರವಿಕೆ ಸೇರಿದಂತೆ ವಿವಿಧ ಒಡವೆಗಳನ್ನು ಹಾಕಿ ಸಿಂಗರಿಸಿದ್ದರು. ಇವರು ಕಳೆದ 25 ವರ್ಷಗಳಿಂದ ಪ್ರತಿ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಲಕ್ಷ್ಮೀ ಅವರು ಧನಲಕ್ಷ್ಮೀ ಅಲಂಕಾರ ಮಾಡಿದ್ದಾರೆ. ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ ಮಾಡಲಾಗಿತ್ತು. ಮನೆಗೆ ಬಂದ ಪ್ರತಿ ಮುತ್ತೈದೆಯರಿಗೂ ಅರಿಶಿನ, ಕುಂಕುಮ ನೀಡಿ, ಉಡಿ ತುಂಬಿ ಹರಸಿ ಕಳುಹಿಸಿದ್ದಾರೆ.

ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ
ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ

ವರ ಮಹಾಲಕ್ಷ್ಮೀ ವ್ರತದ ಬಗ್ಗೆ ಮಾತನಾಡಿದ ಲಕ್ಷ್ಮೀ ವೆಂಕಟೇಶ್, ''ನನಗೆ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಬಹಳ ಇಷ್ಟ. ನಮ್ಮ ಮನೆಯಲ್ಲಿ ಕಳೆದ 25 ವರ್ಷಗಳಿಂದ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ. ಇಂದು ದೇವಿಗೆ ವಿವಿಧ ಒಡವೆಗಳಿಂದ ಸಿಂಗರಿಸಿ, ವಿವಿಧ ಆರತಿಗಳಿಂದ ಪೂಜೆ ಸಲ್ಲಿಸಿದ್ದೇವೆ. ಮನೆಗೆ ಬಂದ ಮುತ್ತೈದೆಯರಿಗೆ ಉಡಿ ತುಂಬಿ ಕಳುಹಿಸಲಾಗುತ್ತದೆ. ಈ ರೀತಿ ಪೂಜೆ ಮಾಡುವುದರಿಂದ ನಮಗೆ ಸಮಾಧಾನ, ಸಂತೋಷವಾಗುತ್ತದೆ. ಇದರಿಂದ ನಾವು ಯಾವುದೇ ಊರಿಗೆ ಹೋದ್ರು ಸಹ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತೇವೆ'' ಎಂದರು.

ಇದನ್ನೂ ಓದಿ: ಧಾರವಾಡದಲ್ಲಿ ವರಮಹಾಲಕ್ಷ್ಮಿ ಸಂಭ್ರಮ: ಮಹಿಳೆಯರಿಗೆ ಅರಿಶಿನ, ಕುಂಕುಮ, ಬಾಗಿನ ವಿತರಣೆ

ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ತುಮಕೂರು : ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆಯಿಂದಲೂ ಶಾಂತಿ ಹೋಮ ಸೇರಿದಂತೆ ಪಂಚಾಮೃತ ಅಭಿಷೇಕ ನಡೆಯಿತು. ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತರು ಬಂದಿದ್ದರು. ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗದ ವರಮಹಾಲಕ್ಷ್ಮಿ ಸಂಭ್ರಮ: ಶಿವಮೊಗ್ಗದ ಗಾಂಧಿ ಬಜಾರ್​ನ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಲಕ್ಷ್ಮೀ ಅವರು ತಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ತೆಂಗಿನಕಾಯಿಯಿಂದ ದೇವಿಯ ಮುಖವನ್ನು ತಯಾರು ಮಾಡಿ ಅದಕ್ಕೆ ಸೀರೆ, ರವಿಕೆ ಸೇರಿದಂತೆ ವಿವಿಧ ಒಡವೆಗಳನ್ನು ಹಾಕಿ ಸಿಂಗರಿಸಿದ್ದರು. ಇವರು ಕಳೆದ 25 ವರ್ಷಗಳಿಂದ ಪ್ರತಿ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಲಕ್ಷ್ಮೀ ಅವರು ಧನಲಕ್ಷ್ಮೀ ಅಲಂಕಾರ ಮಾಡಿದ್ದಾರೆ. ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ ಮಾಡಲಾಗಿತ್ತು. ಮನೆಗೆ ಬಂದ ಪ್ರತಿ ಮುತ್ತೈದೆಯರಿಗೂ ಅರಿಶಿನ, ಕುಂಕುಮ ನೀಡಿ, ಉಡಿ ತುಂಬಿ ಹರಸಿ ಕಳುಹಿಸಿದ್ದಾರೆ.

ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ
ದೇವಿಗೆ ವಿವಿಧ ಡ್ರೈಪ್ರೂಟ್ಸ್​ಗಳಿಂದ ನೈವೇದ್ಯ

ವರ ಮಹಾಲಕ್ಷ್ಮೀ ವ್ರತದ ಬಗ್ಗೆ ಮಾತನಾಡಿದ ಲಕ್ಷ್ಮೀ ವೆಂಕಟೇಶ್, ''ನನಗೆ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಬಹಳ ಇಷ್ಟ. ನಮ್ಮ ಮನೆಯಲ್ಲಿ ಕಳೆದ 25 ವರ್ಷಗಳಿಂದ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ. ಇಂದು ದೇವಿಗೆ ವಿವಿಧ ಒಡವೆಗಳಿಂದ ಸಿಂಗರಿಸಿ, ವಿವಿಧ ಆರತಿಗಳಿಂದ ಪೂಜೆ ಸಲ್ಲಿಸಿದ್ದೇವೆ. ಮನೆಗೆ ಬಂದ ಮುತ್ತೈದೆಯರಿಗೆ ಉಡಿ ತುಂಬಿ ಕಳುಹಿಸಲಾಗುತ್ತದೆ. ಈ ರೀತಿ ಪೂಜೆ ಮಾಡುವುದರಿಂದ ನಮಗೆ ಸಮಾಧಾನ, ಸಂತೋಷವಾಗುತ್ತದೆ. ಇದರಿಂದ ನಾವು ಯಾವುದೇ ಊರಿಗೆ ಹೋದ್ರು ಸಹ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತೇವೆ'' ಎಂದರು.

ಇದನ್ನೂ ಓದಿ: ಧಾರವಾಡದಲ್ಲಿ ವರಮಹಾಲಕ್ಷ್ಮಿ ಸಂಭ್ರಮ: ಮಹಿಳೆಯರಿಗೆ ಅರಿಶಿನ, ಕುಂಕುಮ, ಬಾಗಿನ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.