ETV Bharat / state

ಗಾಂಧೀಜಿ ಅಂದರೆ ಯಾರು ಅಂತಾ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಸಾಹಿತಿ ಎಂ ವಿ ನಾಗರಾಜರಾವ್

author img

By

Published : Dec 14, 2019, 9:54 PM IST

ತುಮಕೂರು ಜಿಲ್ಲಾ ಸರ್ವೋದಯ ಮಂಡಲ ಹಾಗೂ ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ 'ಬಾ, ಬಾಪೂ 150 ಮತ್ತು ಸರ್ವೋದಯ ಪರಿಚಯ ದರ್ಶಿನಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.

Book Release Programme
ಪುಸ್ತಕ ಬಿಡುಗಡೆ ಕಾರ್ಯಕ್ರಮ

ತುಮಕೂರು: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನಗಳಲ್ಲಿ ಗಾಂಧೀಜಿ ಅಂದರೆ ಬೇರೆ ಯಾರನ್ನೋ ಗುರುತಿಸುವುದು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾವು ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ ವಿ ನಾಗರಾಜರಾವ್ ಕಳವಳ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮ

ತುಮಕೂರು ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ 'ಬಾ, ಬಾಪೂ 150 ಮತ್ತು ಸರ್ವೋದಯ ಪರಿಚಯ ದರ್ಶಿನಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆ ನೂರಕ್ಕೆ 70ರಿಂದ 80ರಷ್ಟಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾಚಿಕೆಯಾಗಬೇಕು ಎಂದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್‌ ರೇವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಗಾಂಧೀಜಿಯವರ ಹೆಸರನ್ನು ಹೇಳಿ ರಾಜಕೀಯ ಪಕ್ಷಗಳು ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಮರೆಸುವಂತಹ ಕಾರ್ಯ ಮಾಡುತ್ತಿವೆ. ಹಾಗಾಗಿ ಯುವಕರು ಗಾಂಧೀಜಿಯವರ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಗಾಂಧೀಜಿಯ ವಿಚಾರಧಾರೆಗಳನ್ನು ಅರಿತು ಗಾಂಧೀಜಿ ಕಂಡ ಸರ್ವೋದಯದ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ತುಮಕೂರು: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನಗಳಲ್ಲಿ ಗಾಂಧೀಜಿ ಅಂದರೆ ಬೇರೆ ಯಾರನ್ನೋ ಗುರುತಿಸುವುದು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾವು ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ ವಿ ನಾಗರಾಜರಾವ್ ಕಳವಳ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮ

ತುಮಕೂರು ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ 'ಬಾ, ಬಾಪೂ 150 ಮತ್ತು ಸರ್ವೋದಯ ಪರಿಚಯ ದರ್ಶಿನಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅಂದರೆ ಯಾರು ಎಂದು ಪ್ರಶ್ನಿಸುವವರ ಸಂಖ್ಯೆ ನೂರಕ್ಕೆ 70ರಿಂದ 80ರಷ್ಟಿದೆ. ಕೆಲವರು ಗಾಂಧೀಜಿ ಅಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾಚಿಕೆಯಾಗಬೇಕು ಎಂದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್‌ ರೇವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಗಾಂಧೀಜಿಯವರ ಹೆಸರನ್ನು ಹೇಳಿ ರಾಜಕೀಯ ಪಕ್ಷಗಳು ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಮರೆಸುವಂತಹ ಕಾರ್ಯ ಮಾಡುತ್ತಿವೆ. ಹಾಗಾಗಿ ಯುವಕರು ಗಾಂಧೀಜಿಯವರ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಗಾಂಧೀಜಿಯ ವಿಚಾರಧಾರೆಗಳನ್ನು ಅರಿತು ಗಾಂಧೀಜಿ ಕಂಡ ಸರ್ವೋದಯದ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

Intro:ತುಮಕೂರು: ಇತ್ತಿಚಿನ ದಿನಮಾನಗಳಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಗಾಂಧೀಜಿ ಎಂದರೆ ಬೇರೆ ಯಾರನ್ನೋ ಗುರುತಿಸುವುದು, ಗಾಂಧೀಜಿ ಎಂದರೆ ಯಾರು ಎಂದು ಪ್ರಶ್ನಿಸುವವವರ ಸಂಖ್ಯೆ ನೂರಕ್ಕೆ 70ರಿಂದ 80 ಭಾಗವಾಗಿದೆ, ಇನ್ನೂ ಕೆಲವರು ಗಾಂಧೀಜಿ ಎಂದರೆ ನಗುತ್ತಾರೆ. ಇದನ್ನೆಲ್ಲಾ ನೋಡಿದರೆ ನಾವು ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ.ವಿ. ನಾಗರಾಜರಾವ್ ವಿಷಾದ ವ್ಯಕ್ತಪಡಿಸಿದರು.


Body:ತುಮಕೂರು ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ 'ಬಾ, ಬಾಪೂ 150 ಮತ್ತು ಸರ್ವೋದಯ ಪರಿಚಯ ದರ್ಶಿನಿ' ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರನ್ನು ನೋಡುವಂತಹ ವರ್ಗಗಳಲ್ಲಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಬಹುದಾಗಿದೆ. ಅದರಲ್ಲಿ ಮೊದಲನೆಯದು ಗಾಂಧೀಜಿಯವರನ್ನು ನೋಡಿದವರು, ಅವರ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಅವರ ಅನುಯಾಯಿಗಳು ಇವರೆಲ್ಲರೂ ಮೊದಲನೇ ವರ್ಗದವರು. ಗಾಂಧೀಜಿಯವರ ವಿಚಾರಧಾರೆಗಳಿಂದ, ಸಿದ್ದಾಂತ-ತತ್ವಗಳನ್ನು ನಡೆ-ನುಡಿಯನ್ನು ಮೆಚ್ಚಿ ಅವರಿಗೆ ಅಭಿಮಾನಿಗಳಾದವರು ಎರಡನೇ ವರ್ಗದವರು.
ಗಾಂಧೀಜಿಯವರ ಸಿದ್ಧಾಂತಗಳಿಂದ ಪ್ರಭಾವಿತರಾಗದೆ ಇರುವವರಿದ್ದಾರೆ ಆದರೆ ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ಕಂಡುಕೊಂಡು ಪ್ರಶಂಶಿಸುವವರು ಮತ್ತು ಟೀಕಿಸುವವರು ಮೂರನೇ ವರ್ಗಕ್ಕೆ ಸೇರುತ್ತಾರೆ. ಕೊನೆಯ ವರ್ಗದವರಿಂದರೆ ಕಾಲೇಜು ವಿದ್ಯಾರ್ಥಿಗಳು, ಶಾಲೆಯ ವಿದ್ಯಾರ್ಥಿಗಳು ಗಾಂಧೀಜಿ ಎಂದರೆ ಬೇರೆ ಯಾರನ್ನೋ ಗುರುತಿಸುವುದು, ಅವರು ಯಾರು ಎಂದು ಪ್ರಶ್ನಿಸುವ ಸಂಖ್ಯೆ ನೂರಕ್ಕೆ 70ರಿಂದ 80 ಭಾಗವಾಗಿದೆ ಇನ್ನೂ ಕೆಲವರು ನಗುತ್ತಾರೆ ಇದು ನಾಲ್ಕನೇ ವರ್ಗದವರು ಇದನ್ನೆಲ್ಲಾ ನೋಡಿದರೆ ನಾಚಿಕೆಯಾಗಬೇಕು ಎಂದು ವಿಷಾದ ವ್ಯಕ್ತಪಡಿಸಿದರು.
ಬೈಟ್: ಎಂ.ವಿ. ನಾಗರಾಜರಾವ್, ಹಿರಿಯ ಸಾಹಿತಿ.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್ ರೇವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಗಾಂಧೀಜಿಯವರ ಹೆಸರನ್ನು ಹೇಳಿಕೊಂಡು ರಾಜಕೀಯ ಪಕ್ಷಗಳು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಮರೆಸುವಂತಹ ಕಾರ್ಯ ಮಾಡುತ್ತಿವೆ ಹಾಗಾಗಿ ಯುವಕರು ಗಾಂಧೀಜಿಯವರ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಗಾಂಧೀಜಿಯ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಗಾಂಧೀಜಿಯವರು ಕಂಡಂತಹ ಸರ್ವೋದಯದ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಬೈಟ್: ಟಿ.ಆರ್ ರೇವಣ್ಣ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ.


Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.