ETV Bharat / state

ಕಲ್ಪತರು ನಾಡಿನಲ್ಲಿಂದು 266 ಜನರಿಗೆ ಕೊರೊನಾ... ನಾಲ್ವರು ಸಾವು - ತುಮಕೂರಿನಲ್ಲಿ 266 ಕೊರೊನಾ ದೃಢ ಸುದ್ದಿ,

ತುಮಕೂರು ಜಿಲ್ಲೆಯಲ್ಲಿ 266 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 174 ಜನ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಾಲ್ಕು ಜನ ಕೊರೊನಾಗೆ ಬಲಿಯಾಗಿದ್ದಾರೆ.

266 corona positive cases, 266 corona positive cases found, 266 corona positive cases found in Tumkur, Tumkur corona news, 266 ಕೊರೊನಾ ದೃಢ, ತುಮಕೂರಿನಲ್ಲಿ 266 ಕೊರೊನಾ ದೃಢ, ತುಮಕೂರಿನಲ್ಲಿ 266 ಕೊರೊನಾ ದೃಢ ಸುದ್ದಿ, ತುಮಕೂರು ಕೊರೊನಾ ಸುದ್ದಿ,
ಕಲ್ಪತರು ನಾಡಲ್ಲಿಂದು 266 ಜನರಿಗೆ ಕೊರೊನಾ
author img

By

Published : Aug 27, 2020, 7:16 PM IST

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ನಾಲ್ವರು ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ 38 ವೃದ್ಧರು ಸೇರಿದಂತೆ 266 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 5,017ಕ್ಕೆ ಏರಿಕೆಯಾಗಿದೆ. ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ.

ಇಂದು ತುಮಕೂರು ತಾಲೂಕಿನಲ್ಲಿ 110 ಮಂದಿಗೆ ಸೋಂಕು ತಗುಲಿದೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 32 ಮಂದಿಗೆ, ತಿಪಟೂರು ತಾಲೂಕಿನಲ್ಲಿ 29 ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 24 ಮಂದಿಗೆ, ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 16 ಮಂದಿಗೆ, ಕೊರಟಗೆರೆ ತಾಲೂಕಿನಲ್ಲಿ 14 ಮಂದಿಗೆ, ತುರುವೇಕೆರೆ ತಾಲೂಕಿನಲ್ಲಿ 11ಮಂದಿಗೆ, ಮಧುಗಿರಿ ತಾಲೂಕಿನಲ್ಲಿ 9, ಕುಣಿಗಲ್ ತಾಲೂಕಿನಲ್ಲಿ ಐವರು ಸೇರಿದಂತೆ ಒಟ್ಟು 266 ಜನರಿಗೆ ಸೋಂಕು ತಗುಲಿದೆ.

ಇಂದು 174 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 3,626 ಮಂದಿ ಗುಣಮುಖರಾಗಿದ್ದಾರೆ. 25 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1,240 ಕೊರೊನಾ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂದು ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ನಾಲ್ವರು ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ 38 ವೃದ್ಧರು ಸೇರಿದಂತೆ 266 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 5,017ಕ್ಕೆ ಏರಿಕೆಯಾಗಿದೆ. ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ.

ಇಂದು ತುಮಕೂರು ತಾಲೂಕಿನಲ್ಲಿ 110 ಮಂದಿಗೆ ಸೋಂಕು ತಗುಲಿದೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 32 ಮಂದಿಗೆ, ತಿಪಟೂರು ತಾಲೂಕಿನಲ್ಲಿ 29 ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 24 ಮಂದಿಗೆ, ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 16 ಮಂದಿಗೆ, ಕೊರಟಗೆರೆ ತಾಲೂಕಿನಲ್ಲಿ 14 ಮಂದಿಗೆ, ತುರುವೇಕೆರೆ ತಾಲೂಕಿನಲ್ಲಿ 11ಮಂದಿಗೆ, ಮಧುಗಿರಿ ತಾಲೂಕಿನಲ್ಲಿ 9, ಕುಣಿಗಲ್ ತಾಲೂಕಿನಲ್ಲಿ ಐವರು ಸೇರಿದಂತೆ ಒಟ್ಟು 266 ಜನರಿಗೆ ಸೋಂಕು ತಗುಲಿದೆ.

ಇಂದು 174 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 3,626 ಮಂದಿ ಗುಣಮುಖರಾಗಿದ್ದಾರೆ. 25 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1,240 ಕೊರೊನಾ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂದು ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.