ರಾಯಚೂರು : ನಗರದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ವಿಶ್ವಪರಿಸರ ದಿನವನ್ನ ಆಚರಣೆ ಮಾಡಿದರು.
ನಗರದ ಬಸವೇಶ್ವರ ಕಾಲೊನಿಯಲ್ಲಿ ಬಿಲ್ವಪತ್ರಿ, ಬನ್ನಿ ಗಿಡ, ಸೇರಿದಂತೆ ನಾನಾ ಮಾದರಿ ಸಸ್ಯಗಳನ್ನು ನೆಟ್ಟು, ನೀರು ಹಾಕುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಈ ವೇಳೆ, ಪರಿಸರ ರಕ್ಷಣೆಗೆ ಗಿಡ - ಮರಗಳ ಬೆಳೆಸುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.
ಮನುಷ್ಯ ಆರೋಗ್ಯವಾಗಿರಲು ಮನುಕುಲಕ್ಕೆ ಪರಿಸರದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಸ್ಯಗಳನ್ನು ನೆಡುವ ಮೂಲಕ ಪರಿಸರ ಉಳಿಸಿ ಬೆಳಸಬೇಕಾಗಿದ್ದು, ನಮ್ಮ ಕರ್ತವ್ಯ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಬೇಕು ಎಂದು ಶಾಸಕರು ತಿಳಿಸಿದರು.
ಇದೇ ವೇಳೆ, ಗ್ರೀನ್ ರಾಯಚೂರು ಯೋಜನೆಯಡಿ ಸಸಿಗಳಿಗೆ ನೀರು ಪೂರೈಸಲು ಶಾಸಕರು ವಾಟರ್ ಟ್ಯಾಂಕರ್ ನೀಡಿದರು.