ಚಾಮರಾಜನಗರ: ಆಮ್ಲಜನಕ ದುರಂತಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಡಿಸಿ ಹಾಗೂ ಮೈಸೂರು ಡಿಸಿ ನಡುವಿನ ಆರೋಪ - ಪ್ರತ್ಯಾರೋಪಕ್ಕೆ ನಟ ಜಗ್ಗೇಶ್ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳು ಸಣ್ಣ ಅಧಿಕಾರಿಗಳಲ್ಲ ಎಂಬುದನ್ನು ಮರೆಯಬಾರದು, ಆಪಾದನೆ ಮಾಡುತ್ತಾ ಕೂರಲು ಇದು ದೊಂಬರಾಟವಲ್ಲ, ತನಿಖೆ ನಡೆದು ತಪ್ಪಿತಸ್ಥರು ನಿರ್ಣಯವಾಗಲಿ, ಸಾರ್ವಜನಿಕ ಕೆಲಸ ದೇವರ ಕೆಲಸ ಎಂದು ಪ್ರಮಾಣ ಮಾಡಿ ಕುಳಿತ ಜಾಗ ನಿಮ್ಮದು ಎಂದು ನವರಸ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.