ETV Bharat / state

ಮುಂದಿನ ಮೂರುವರೆ ವರ್ಷ ಯಡಿಯೂರಪ್ಪನವರೇ ಸಿಎಂ: ಈಶ್ವರಪ್ಪ - ಮುಂದಿನ ಮುಖ್ಯಮಂತ್ರಿ ಬಗ್ಗೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ

ಉಪ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಇನ್ನಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಹಾಗಂತ ನಾವೇನು ಆಪರೇಷನ್ ಕಮಲ‌ ಮಾಡುವುದಿಲ್ಲ, ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ನಮ್ಮ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ಧಾರೆ.

K S Eshwarappa reaction about dalit CM, ಮುಂದಿನ ಮುಖ್ಯಮಂತ್ರಿ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ
author img

By

Published : Dec 5, 2019, 6:31 PM IST

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಪ್ರತಿಪಕ್ಷಗಳು ಇನ್ನೊಬ್ಬರನ್ನು ಕೂರಿಸಲು ಹೊರಟಿವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಂ ಮಾಡುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಒಪ್ಪಿಸಲಾಗುತ್ತಿದೆ ಎಂಬ ವಿಚಾರ ತಿಳಿದಿದೆ. ಆದರೆ ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡುತ್ತಾರಾ ಅಥವಾ ಬೇರೆ ರಾಜ್ಯಕ್ಕೆ ಮಾಡುತ್ತಾರಾ ಎಂಬುದು ಗೊತ್ತಾಗುತ್ತಿಲ್ಲ. ಮೊದಲನೆಯದಾಗಿ ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ದಲಿತ ಸಿಎಂ ಮಲ್ಲಿಕಾರ್ಜುನ್ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್​ನವರು ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​​ನವರಿಗೆ ಜಾತಿ ಹೆಸರು ಹೇಳಿ ರಾಜಕಾರಣ ಮಾಡಲಿಲ್ಲವೆಂದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಸ್ಥಾನ ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಆದರೆ ಕಾಂಗ್ರೆಸ್​​​ನವರು ಲಿಂಗಾಯತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿರುವುದು ಸರಿಯಲ್ಲ. ಚುನಾವಣೆ ನಂತರ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ ಎಂದರು.

ಇನ್ನು ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಇನ್ನಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಹಾಗಂತ ನಾವೇನು ಆಪರೇಷನ್ ಕಮಲ‌ ಮಾಡುವುದಿಲ್ಲ, ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ನಮ್ಮ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್​​ನವರು ಹೇಳಿದ್ರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶವು ಉಪ ಚುನಾವಣೆಯಲ್ಲಿ ಮರುಕಳಿಸಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೊಂದು ಸ್ಥಾನ ಪಡೆದರೂ ಆಶ್ಚರ್ಯ ಇಲ್ಲ, ಬಿಜೆಪಿಗೆ ಹೆಚ್ಚಿನ‌ ಸ್ಥಾನ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಪ್ರತಿಪಕ್ಷಗಳು ಇನ್ನೊಬ್ಬರನ್ನು ಕೂರಿಸಲು ಹೊರಟಿವೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಂ ಮಾಡುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಒಪ್ಪಿಸಲಾಗುತ್ತಿದೆ ಎಂಬ ವಿಚಾರ ತಿಳಿದಿದೆ. ಆದರೆ ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡುತ್ತಾರಾ ಅಥವಾ ಬೇರೆ ರಾಜ್ಯಕ್ಕೆ ಮಾಡುತ್ತಾರಾ ಎಂಬುದು ಗೊತ್ತಾಗುತ್ತಿಲ್ಲ. ಮೊದಲನೆಯದಾಗಿ ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ದಲಿತ ಸಿಎಂ ಮಲ್ಲಿಕಾರ್ಜುನ್ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್​ನವರು ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​​ನವರಿಗೆ ಜಾತಿ ಹೆಸರು ಹೇಳಿ ರಾಜಕಾರಣ ಮಾಡಲಿಲ್ಲವೆಂದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಸ್ಥಾನ ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ. ಆದರೆ ಕಾಂಗ್ರೆಸ್​​​ನವರು ಲಿಂಗಾಯತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿರುವುದು ಸರಿಯಲ್ಲ. ಚುನಾವಣೆ ನಂತರ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ ಎಂದರು.

ಇನ್ನು ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಇನ್ನಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಹಾಗಂತ ನಾವೇನು ಆಪರೇಷನ್ ಕಮಲ‌ ಮಾಡುವುದಿಲ್ಲ, ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ನಮ್ಮ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್​​ನವರು ಹೇಳಿದ್ರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶವು ಉಪ ಚುನಾವಣೆಯಲ್ಲಿ ಮರುಕಳಿಸಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೊಂದು ಸ್ಥಾನ ಪಡೆದರೂ ಆಶ್ಚರ್ಯ ಇಲ್ಲ, ಬಿಜೆಪಿಗೆ ಹೆಚ್ಚಿನ‌ ಸ್ಥಾನ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Intro:ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ, ಇದು ವಿರೋಧ ಪಕ್ಷದವರಿಗೆ ಗೂತ್ತಿಲ್ವಾ: ಸಚಿವ ಈಶ್ವರಪ್ಪ ವ್ಯಂಗ್ಯ.

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಮುಂದಿನ ಮೂರುವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಇದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಇನ್ನೂಬ್ಬರನ್ನು ವಿರೋಧ ಪಕ್ಷಗಳು ಸಿಎಂ ಮಾಡಲು ಹೊರಟಿವೆ ಎಂದು ವ್ಯಂಗ್ಯವಾಗಿ ಹೇಳಿದರು. ಮಲ್ಲಿಕಾರ್ಜುನ್
ಖರ್ಗೆಯವರನ್ನು ಸಿಎಂ ಮಾಡೋದಕ್ಕೆ ಸಿದ್ದರಾಮಯ್ಯ ನವರನ್ನು ಒಪ್ಪಿಸುತ್ತಿದ್ದೇವೆ ಎನ್ನೋದನ್ನು‌ ನೋಡಿದೆ, ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡ್ತಾರ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರ ಅಂತ ಗೂತ್ತಾತ್ತ ಇಲ್ಲ.ಮೊದಲೆದಾಗಿ ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ.Body:ಸುಮ್ಮನೆ ದಲಿತ ಸಿಎಂ ಮಲ್ಲಿಕಾರ್ಜುನ್ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಜಾತಿ ಹೆಸರೇಳಿ ರಾಜಕಾರಣ ಮಾಡಲಿಲ್ಲ ಅಂದ್ರೆ ಅವರಿಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಇಡಿ ರಾಜ್ಯದ ಸಿಎಂ ಯಾವುದೇ ಜಾತಿಗೆ ಸೀಮಿತವಾದ ಸ್ಥಾನ ಅಲ್ಲ. ಆದರೆ ಕಾಂಗ್ರೆಸ್ ನವರು ಲಿಂಗಾಯ್ತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿದ್ದಾರೆ ಇದು ಸರಿಯಲ್ಲ.Conclusion:ಚುನಾವಣೆ ನಂತರ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ.
ಚುನಾವಣಾ ಫಲಿತಾಂಶದ ನಂತರ ಇನ್ಬಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ.
ಹಾಗಂತ ನಾವೇನು ಆಪರೇಷನ್ ಕಮಲ‌ ಮಾಡೋದಿಲ್ಲ, ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಅಂತ ಕಾಂಗ್ರೆಸ್ ಜೆಡಿಎಸ್ ನವರು ಹೇಳಿದ್ರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶ ಉಪ ಚುನಾವಣೆಯಲ್ಲಿ ರಿಪೀಟ್ ಆಗುತ್ತೆ. ಕಾಂಗ್ರೆಸ್ ಹಾಗು ಜೆಡಿಎಸ್ ಒಂದೊಂದು ಸ್ಥಾನ ಪಡೆದರು ಆಶ್ಚರ್ಯ ಇಲ್ಲ, ಬಿಜೆಪಿಗೆ ಹೆಚ್ಚಿನ‌ ಸ್ಥಾನ ಬರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೈಟ್: ಕೆ.ಎಸ್.ಈಶ್ವರಪ್ಪ. ಗ್ರಾಮೀಣಾಭಿವೃದ್ದಿ‌ ಖಾತೆ ಸಚಿವ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.