ETV Bharat / state

ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ: ಇಬ್ಬರ ಬಂಧನ

ತೀರ್ಥಹಳ್ಳಿಯ ಚೊಕ್ಕಡಬೈಲಿನ ಶಾರದಮ್ಮ ಎಂಬುವರ ಮನೆಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹರಿ ಗೋವಿಂದ್ ಹಾಗೂ ವಿಕಾಸ್ ಎಂಬ ಯುವಕರು ಮನೆಯವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ನಡೆದಿದೆ.

author img

By

Published : Jun 10, 2019, 11:07 PM IST

ಮಹಿಳೆ ಮೇಲೆ ಹಲ್ಲೆ ನಡೆಸಿ ದರೋಡೆ

ಶಿವಮೊಗ್ಗ: ತೀರ್ಥಹಳ್ಳಿಯ ಚೊಕ್ಕಡಬೈಲಿನ ಶಾರದಮ್ಮ ಎಂಬುವರ ಮನೆಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹರಿ ಗೋವಿಂದ್ ಹಾಗೂ ವಿಕಾಸ್ ಎಂಬ ಯುವಕರು ಮನೆಯವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ನಡೆದಿದೆ.

ಇವರಿಬ್ಬರು ಎರಡು ದಿನಗಳಿಂದ ಮನೆಗೆ ಪೇಂಟ್ ಮಾಡುತ್ತಿದ್ದರು. ಇಂದು ಮನೆಯಲ್ಲಿ ಶಾರದಮ್ಮ ಒಬ್ಬರೇ ಇರುವುದನ್ನು ನೋಡಿ ಹಲ್ಲೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮರನ್ನು ಸ್ಥಳೀಯರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹರಿ ಗೊವಿಂದ್ ಹಾಗೂ ವಿಕಾಸ್ ಎಂಬುವರನ್ನು ಎನ್.ಆರ್.ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಭಾಗದಲ್ಲಿ ಒಂಟಿ ಮನೆಗಳು ಇರುವುದನ್ನು ಗಮನಿಸಿರುವ ಖದೀಮರು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ: ತೀರ್ಥಹಳ್ಳಿಯ ಚೊಕ್ಕಡಬೈಲಿನ ಶಾರದಮ್ಮ ಎಂಬುವರ ಮನೆಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹರಿ ಗೋವಿಂದ್ ಹಾಗೂ ವಿಕಾಸ್ ಎಂಬ ಯುವಕರು ಮನೆಯವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ನಡೆದಿದೆ.

ಇವರಿಬ್ಬರು ಎರಡು ದಿನಗಳಿಂದ ಮನೆಗೆ ಪೇಂಟ್ ಮಾಡುತ್ತಿದ್ದರು. ಇಂದು ಮನೆಯಲ್ಲಿ ಶಾರದಮ್ಮ ಒಬ್ಬರೇ ಇರುವುದನ್ನು ನೋಡಿ ಹಲ್ಲೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮರನ್ನು ಸ್ಥಳೀಯರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹರಿ ಗೊವಿಂದ್ ಹಾಗೂ ವಿಕಾಸ್ ಎಂಬುವರನ್ನು ಎನ್.ಆರ್.ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಭಾಗದಲ್ಲಿ ಒಂಟಿ ಮನೆಗಳು ಇರುವುದನ್ನು ಗಮನಿಸಿರುವ ಖದೀಮರು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

Intro:ಪೇಂಟ್ ಮಾಡುವ ನೆಪದಲ್ಲಿ ಮನೆ ದರೋಡೆ: ಪೊಲೀಸರಿಂದ ಮಿಂಚಿನ ಕಾರ್ಯಾವರಣೆ ಆರೋಪಿಗಳ ಬಂಧನ.

ಶಿವಮೊಗ್ಗ: ಮನೆ ಪೇಂಟಿಂಗ್ ಮಾಡಲು ಬಂದ ಉತ್ತರ ಪ್ರದೇಶ ಮೂಲದ ಇಬ್ಬರಿಂದ ಮನೆಯವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ತೀರ್ಥಹಳ್ಳಿ ಯ ಚೊಕ್ಕಡಬೈಲಿನಲ್ಲಿ ನಡೆದಿದೆ. ಚೊಕ್ಕಡಬೈಲಿನ ಶಾರದಮ್ಮ ಎಂಬುವರ ಮನೆಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ಹರಿ ಗೋವಿಂದ್ ಹಾಗೂ ವಿಕಾಸ್ ರವರಿಂದ ಕೃತ್ಯ.Body:ಇವರಿಬ್ಬರು ಕಳೆದ ಎರಡು ದಿನಗಳಿಂದ ಮನೆಗೆ ಪೇಂಟ್ ಮಾಡುತ್ತಿದ್ದರು. ಇಂದು ಮನೆಯಲ್ಲಿ ಶಾರದಮ್ಮ ಒಬ್ಬರೆ ಇರುವುದನ್ನು ನೋಡಿ ಹಲ್ಲೆ ನಡೆಸಿ, ಲಕ್ಷಾಂತರ ರೂ ಮೌಲ್ಯದ ಚಿನ್ನಭರಣ ದೋಚಿ ಪರಾರಿಯಾಗಿದ್ದಾರೆ. ಶಾರದಮ್ಮರನ್ನು ಸ್ಥಳೀಯರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.Conclusion: ಹರಿ ಗೊವಿಂದ್ ಹಾಗು ವಿಕಾಸ್ ರನ್ನು ಎನ್.ಆರ್.ಪುರ ದಲ್ಲಿ ಬಂಧಿಸಿದ್ದಾರೆ. ತೀರ್ಥಹಳ್ಳಿ ಭಾಗದಲ್ಲಿ ಒಂಟಿ ಮನೆಗಳು ಇರುವುದನ್ನು ಗಮನಿಸಿರುವ ಖದೀಮರು ಕೃತ್ಯ ನಡೆಸಿದ್ದಾರೆ. ಇತ್ತಿಚೇಗೆ ಮರಳು ಕ್ವಾರಿಯಲ್ಲಿ ಕೆಲ್ಸ ಮಾಡಲು ಸಾಕಷ್ಟು ಮಂದಿ ಉತ್ತರ ಪ್ರದೇಶದಿಂದ ಬಂದಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಇವರುಗಳ ಮೇಲೆ ಹದ್ದಿನ ಕಣ್ಣಿಡಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.