ಶಿವಮೊಗ್ಗ: ಸಕ್ರೆಬೈಲಿನ ಸಾಕಾನೆ ಮಣಿಕಂಠ ಬಿಡಾರದಿಂದ ಕಾಡಿಗೆ ಹೊರಡುವಾಗ ತನ್ನ ಕಾವಾಡಿ ಕಲೀಲ್ ಎಂಬವರ ಮೇಲೆ ಮುನಿಸಿಕೊಂಡು ಆವರನ್ನು ಬೆನ್ನತ್ತಿದ ವಿಡಿಯೋ ದೊರೆತಿದೆ.
ಶುಕ್ರವಾರ ಮಣಿಕಂಠ ಆನೆ ಬಿಡಾರದಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಜಂಗಲ್ ರೇಸಾರ್ಟ್ ಮೂಲಕ ಕಾಡಿಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಕವಾಡಿಗನ ಕಂಡು ಇದ್ದಕ್ಕಿದ್ದಂತೆ ಕೋಪಗೊಂಡಿದೆ. ಮಣಿಕಂಠನ ಮೇಲೆ ಮಾವುತ ಇಮ್ರಾನ್ ಕುಳಿತಿದ್ದರು. ಕಲೀಲ್ ಸ್ಕೂಟಿಯಲ್ಲಿ ಹಿಂಬಾಲಿಸುತ್ತಿದ್ದರು. ರೆಸಾರ್ಟ್ ಗೇಟ್ ಬಳಿ ಕಲೀಲ್ ಬರುತ್ತಿದ್ದಂತೆ ಆತನ ಮೇಲೆ ದಾಳಿಗೆ ಮುಂದಾಗಿದೆ. ಆನೆಯ ಮುನಿಸಿನ ಬಗ್ಗೆ ತಿಳಿದ ಕಲೀಲ್ ಬೈಕ್ ಬಿಟ್ಟು ಅಲ್ಲಿಂದಲೇ ಓಡಿ ಹೋಗಿದ್ದಾರೆ.