ETV Bharat / state

ಈಶ್ವರಪ್ಪನವರ ತಪ್ಪೇನು, ರಾಜೀನಾಮೆ ಏಕೆ​ ಕೊಡಬೇಕು : ಸಚಿವ ನಾರಾಯಣ ಗೌಡ ಪ್ರಶ್ನೆ

author img

By

Published : Feb 19, 2022, 7:24 PM IST

ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಾಡುವ ಕಾಲ ಬರುತ್ತೆ ಎಂದು ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​​ ಈಶ್ವರಪ್ಪನವರ ವಿರುದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಕುರಿತಂತೆ ಕ್ರೀಡಾ ಸಚಿವ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಾರೆ..

Minister Narayana gowda reaction on congress protest
ಕಾಂಗ್ರೆಸ್ ಪ್ರತಿಭಟನೆ ಕುರಿತು ನಾರಾಯಣ ಗೌಡ ಪ್ರತಿಕ್ರಿಯೆ

ಶಿವಮೊಗ್ಗ : ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ ಕುರಿತು ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿರುವುದು..

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ರಾಜಕಾರಣಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ಶಾಂತಿಯುತವಾಗಿ ವಿದ್ಯಾಭ್ಯಾಸ ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಸಚಿವ ಈಶ್ವರಪ್ಪನವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಕೇಸರಿ ಬಾವುಟ ಹಾರಿಸಬೇಕೆಂದು ಎಲ್ಲೋ ಹೇಳಿದ್ದಾರಷ್ಟೇ.. ಇವರೇನು ಕೇಸರಿ ಬಾವುಟ ಹಿಡಿದು ಹೋಗಿದ್ದಾರಾ, ಈಶ್ವರಪ್ಪರವರು ಏಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್​​ನವರಿಗೆ ಕೆಲಸವಿಲ್ಲ. ಅಭಿವೃದ್ಧಿ ಜೊತೆ ಕೈ ಜೋಡಿಸುತ್ತಿಲ್ಲ ಎಂದು ಗುಡುಗಿದರು.

ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದನ ಕಾಂಗ್ರೆಸ್​​​​​ನವರಿಂದ ಹಾಳಾಗುತ್ತಿದೆ. ಅವರು ಬಜೆಟ್ ಬಗ್ಗೆ ಸಲಹೆ ಕೊಡಬಹುದಿತ್ತು.ಅಭಿವೃದ್ಧಿ ಬಗ್ಗೆ ಮಾತನಾಡಬಹುದಿತ್ತು.

ಆದರೆ, ಅದ‌ನ್ನು ಮಾಡುತ್ತಿಲ್ಲ, ಕಾಂಗ್ರೆಸ್​​​​ನವರಿಗೆ ಭಯದ ವಾತಾವರಣ ಇದೆ. ಎಲ್ಲಾ ಕಡೆ ನಮಗೆ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್​ನವರು ಅಹೋರಾತ್ರಿ ಧರಣಿ ಮಾಡುತ್ತಿಲ್ಲ.ಅರ್ಧ ರಾತ್ರಿ ಎದ್ದು ಮನೆಗೆ, ಹೋಟೆಲ್​​​ಗೆ ಹೋಗಿ ಮಲಗಿ ಬೆಳಿಗ್ಗೆ ಎದ್ದು ರೆಡಿಯಾಗಿ ಬರುತ್ತಿದ್ದಾರೆ.ಅವರೆಲ್ಲಿ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್...

ಶಿವಮೊಗ್ಗ : ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ ಕುರಿತು ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿರುವುದು..

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ರಾಜಕಾರಣಕ್ಕೀಡಾಗಬಾರದು. ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ಶಾಂತಿಯುತವಾಗಿ ವಿದ್ಯಾಭ್ಯಾಸ ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಸಚಿವ ಈಶ್ವರಪ್ಪನವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಕೇಸರಿ ಬಾವುಟ ಹಾರಿಸಬೇಕೆಂದು ಎಲ್ಲೋ ಹೇಳಿದ್ದಾರಷ್ಟೇ.. ಇವರೇನು ಕೇಸರಿ ಬಾವುಟ ಹಿಡಿದು ಹೋಗಿದ್ದಾರಾ, ಈಶ್ವರಪ್ಪರವರು ಏಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್​​ನವರಿಗೆ ಕೆಲಸವಿಲ್ಲ. ಅಭಿವೃದ್ಧಿ ಜೊತೆ ಕೈ ಜೋಡಿಸುತ್ತಿಲ್ಲ ಎಂದು ಗುಡುಗಿದರು.

ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದನ ಕಾಂಗ್ರೆಸ್​​​​​ನವರಿಂದ ಹಾಳಾಗುತ್ತಿದೆ. ಅವರು ಬಜೆಟ್ ಬಗ್ಗೆ ಸಲಹೆ ಕೊಡಬಹುದಿತ್ತು.ಅಭಿವೃದ್ಧಿ ಬಗ್ಗೆ ಮಾತನಾಡಬಹುದಿತ್ತು.

ಆದರೆ, ಅದ‌ನ್ನು ಮಾಡುತ್ತಿಲ್ಲ, ಕಾಂಗ್ರೆಸ್​​​​ನವರಿಗೆ ಭಯದ ವಾತಾವರಣ ಇದೆ. ಎಲ್ಲಾ ಕಡೆ ನಮಗೆ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್​ನವರು ಅಹೋರಾತ್ರಿ ಧರಣಿ ಮಾಡುತ್ತಿಲ್ಲ.ಅರ್ಧ ರಾತ್ರಿ ಎದ್ದು ಮನೆಗೆ, ಹೋಟೆಲ್​​​ಗೆ ಹೋಗಿ ಮಲಗಿ ಬೆಳಿಗ್ಗೆ ಎದ್ದು ರೆಡಿಯಾಗಿ ಬರುತ್ತಿದ್ದಾರೆ.ಅವರೆಲ್ಲಿ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.